ಟೇಶಿ ಮತ್ತು ಬೆಸ್ಟ್‌ ಫ್ರೆಂಡ್ಸ್‌


Team Udayavani, Jan 19, 2018, 1:14 PM IST

19-53.jpg

ಐದು ವರ್ಷಗಳ ಹಿಂದೆ “ಒಲವಿನ ಓಲೆ’ ಎಂಬ ಸಿನಿಮಾ ಮಾಡಿದ್ದರು ನಿರ್ದೇಶಕ ಟೇಶಿ. ಆ ನಂತರ ಈಗ ಮತ್ತೂಂದು ಸಿನಿಮಾ ಮೂಲಕ ಅವರು ವಾಪಸ್ಸಾಗಿದ್ದಾರೆ. ಈ ಬಾರಿ ಅವರು “ಬೆಸ್ಟ್‌ ಫ್ರೆಂಡ್ಸ್‌’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿ, ಅದನ್ನು ಸೆನ್ಸಾರ್‌ ಮಾಡಿಸಿಯೇ ಮಾಧ್ಯಮದವರ ಮುಂದೆ ಬಂದಿದ್ದಾರೆ ಟೇಶಿ. 

ಹೆಸರು ಕೇಳಿದರೆ, ಇದು ಇನ್ನೊಂದು ಆಪ್ತಮಿತ್ರರ ಕಥೆ ಎನಿಸಬಹುದು. ಆದರೆ, ಟೇಶಿ ಅಲ್ಲೊಂದು ಟ್ವಿಸ್ಟ್‌ ಇಟ್ಟಿದ್ದಾರೆ. ಈ ಬಾರಿ ಅವರು ಸಲಿಂಗಿಗಳ ಕುರಿತ ಒಂದು ಚಿತ್ರ ಮಾಡಿದ್ದಾರೆ. ಹಾಸನದಲ್ಲಿ ನಡೆದ ಒಂದು ನೈಜ ಘಟನೆಯನ್ನು ಬೇಸ್‌ ಮಾಡಿ ಕಥೆ ಮಾಡಿದ್ದಾರೆ. ಆ ಘಟನೆಗೆ ಸಾಮಾಜಿಕ ಕಳಕಳಿ ಸೇರಿಸಿ, ಒಂದಿಷ್ಟು ಕಲ್ಪನೆಯನ್ನು ಬೆರೆಸಿ “ಬೆಸ್ಟ್‌ ಫ್ರೆಂಡ್ಸ್‌’ ಎಂಬ ಸಲಿಂಗಿಯರ ಕುರಿತಾದ ಚಿತ್ರವೊಂದನ್ನು ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಸೆನ್ಸಾರ್‌ ಸಹ ಆಗಿದೆ. “ಯು/ಎ’ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದು ಟೇಶಿ ಯೋಚನೆ. ಅದಕ್ಕೂ ಮುನ್ನ ಮಾಧ್ಯಮದವರೆದುರು ಬಂದ್ದಿದರು ಟೇಶಿ.

ಅಂದು ಅಲ್ಲಿದ್ದ ಬ್ಯಾನರ್‌ನಲ್ಲಿ “ಬೆಸ್ಟ್‌ ಫ್ರೆಂಡ್ಸ್‌’ ಜೊತೆಗೆ “ಇದು ತೀರ್ಪು ನೀಡಲಾಗದ ಪ್ರೇಮಕಥೆ’, “ಕಾನೂನು ಮತ್ತು ಮಾನವ ಹಕ್ಕುಗಳ ನಡುವಿನ ಸಂಘರ್ಷ’ ಎಂಬ ಅಡಿಬರಹಗಳು ಇದ್ದವು. ಈ ಅಡಿಬರಹಗಳೇ ಈ ಚಿತ್ರದ ಕಥಾವಸ್ತು ಎಂದರೆ ತಪ್ಪಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಹಾಸನದಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಟೇಶಿ ಈ ಚಿತ್ರ ಮಾಡಿದ್ದಾರಂತೆ. ಶ್ರುತಿ ಮತ್ತು ರಶ್ಮಿ ಎಂಬ ಹುಡುಗಿಯರು ಪರಸ್ಪರ ಪ್ರೀತಿಸಿ, ಅದು ಸಾಕಷ್ಟು ಸುದ್ದಿಯಾಗಿ, ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ ಕಥೆಯನ್ನಿಟ್ಟುಕೊಂಡು ಟೇಶಿ ಸಿನಿಮಾ ಮಾಡಿದ್ದಾರೆ.

“ಇದೊಂದು ವ್ಯಾಪಾರಿ ಅಥವಾ ಫಾರ್ಮುಲ ಚಿತ್ರ ಅಲ್ಲ. ಸಾಮಾಜಿಕ ಕಳಕಳಿ ಇರುವ ಚಿತ್ರ. ಒಬ್ಬ ಮನುಷ್ಯನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ವ್ಯವಸ್ಥೆಯ ಕುರಿತಾದ ಚಿತ್ರ.  ಅಷ್ಟೇ ಅಲ್ಲ, ನಮ್ಮ ಚಟಕ್ಕಾಗಿ ಹೇಗೆ ಕೆಲವು ವರ್ಗದವರನ್ನು ಬಳಸಿಕೊಳ್ಳುತ್ತಿದ್ದೀವಿ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೀನಿ. ಇವತ್ತು ದೇಶದಲ್ಲಿ ಸುಮಾರು 25 ಲಕ್ಷ ಸಲಿಂಗಿಗಳಿದ್ದಾರೆ. ಆದರೆ, ಅವರಿಗೆ ಬದುಕುವ ಹಕ್ಕು ಇನ್ನೂ ಸರಿಯಾಗಿ ಸಿಕ್ಕಿಲ್ಲ. ಅವರಿಂದ ದೇಶಕ್ಕೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಆದರೂ ಅವರನ್ನು ಕೆಟ್ಟದಾಗಿ ನೋಡಲಾಗುತ್ತಿದೆ. ದೇವರು ಕೊಟ್ಟ ಗುಣ ಅದು. ಅದಕ್ಕೆ ಮನುಷ್ಯ ತಾನೇ ಏನು ಮಾಡೋಕೆ ಸಾಧ್ಯ? ಅವರಿಗೆ ನ್ಯಾಯ ಸಿಗಬೇಕು. ಇಂಥ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಿದ್ದೀವಿ’ ಎನ್ನುತ್ತಾರೆ ಟೇಶಿ.

ಈ ವಿಚಾರವಾಗಿ ಅವರು ಸಾಕಷ್ಟು ರಿಸರ್ಚ್‌ ನಡೆಸಿದ್ದಾರಂತೆ. ಅದರಲ್ಲೂ ಶ್ರುತಿ ಮತ್ತು ರಶ್ಮಿಗೆ ಸಂಬಂಧಿಸಿದವರನ್ನು ಮಾತನಾಡಿಸಿ, ಹಲವು ವಿಚಾರಗಳನ್ನು ಹೆಕ್ಕಿ ತೆಗಿಯಲಾಗಿದೆಯಂತೆ. ಇದರಿಂದ ನಾಳೆ ಸಮಸ್ಯೆ ಆಗುವುದಿಲ್ಲವಾ ಎಂಬ ಪ್ರಶ್ನೆಯೂ ಬಂತು. “ಇದು ನೈಜ ಘಟನೆಯನ್ನಾಧರಿಸಿದ ಚಿತ್ರ ಹೌದು. ಆದರೆ, ಸಂಪೂರ್ಣ ಅದೇ ಘಟನೆ ಅಲ್ಲ. ಹಲವು ಕಥೆಗಳಲ್ಲಿ ಅವರದ್ದೂ ಒಂದು. ಎಲ್ಲಕ್ಕಿಂತ ಹೆಚ್ಚಾಗಿ ಅವರ ಪರವಾಗಿ ನಾವು ಹೋರಾಟ ಮಾಡಿದ್ದೀವಿ. ಹಾಗಾಗಿ ಅವರು ಯಾಕೆ ಸಮಸ್ಯೆ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಟೇಶಿ.

ಮೇಘನಾ ಮತ್ತು ದ್ರವ್ಯ “ಬೆಸ್ಟ್‌ ಫ್ರೆಂಡ್ಸ್‌’ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ಆಶಾ, ಸುಮತಿ ಪಾಟೀಲ್‌ ಮುಂತಾದವರು ನಟಿಸಿದ್ದಾರೆ. ಲಯನ್‌ ವೆಂಕಟೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಲ್ಲರೂ ಇಂಥದ್ದೊಂದು ವಿಭಿನ್ನ ಕಥಾವಸ್ತುವಿರುವ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಬಹಳ ಖುಷಿಪಟ್ಟರು.

ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.