ಕುಸ್ತಿ ಅಖಾಡಕ್ಕೆ ಅಪ್ಪ-ಮಗ ರೆಡಿ!


Team Udayavani, May 18, 2018, 6:00 AM IST

k-30.jpg

ರಾಜಕೀಯ ಅಖಾಡದಲ್ಲಿ ಅಪ್ಪ-ಮಕ್ಕಳ, ಅಣ್ತಮ್ಮಂದಿರ ಕಾರುಬಾರು ಜೋರಿರುವಾಗಲೇ, ಇನ್ನೊಂದು ಕಡೆ ಚಿತ್ರರಂಗದ ಅಖಾಡದಲ್ಲಿ 
ಅಪ್ಪ-ಮಗನ ಕಾರುಬಾರು ಶುರುವಾಗಿದೆ. ಹೌದು, “ದುನಿಯಾ’ ವಿಜಯ್‌ ಮತ್ತು ಅವರ ಪುತ್ರ ಸಾಮ್ರಾಟ್‌ “ಕುಸ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ
ಸುದ್ದಿ ಎಲ್ಲರಿಗೂ ಗೊತ್ತು. “ಕುಸ್ತಿ’ಗಾಗಿ ಸಾಮ್ರಾಟ್‌, ಪಕ್ಕಾ ಕುಸ್ತಿ ಪಟುವಾಗಿ ತಯಾರಿ ಪಡೆಯುತ್ತಿರುವ ಫೋಟೋ ಕೂಡ ಎಲ್ಲೆಡೆ ಭರ್ಜರಿ ಸದ್ದು ಮಾಡಿತ್ತು. ಈಗ ಹೊಸ ಸುದ್ದಿಯೆಂದರೆ, “ಕುಸ್ತಿ’ಗಾಗಿ ಅಪ್ಪ-ಮಗ ಇಬ್ಬರೂ ತೊಡೆ ತಟ್ಟಿ ಸೆಡ್ಡು ಹೊಡೆಯೋ ಮೂಲಕ ಸಜ್ಜಾಗಿದ್ದಾರೆ. ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ ಅನ್ನೋದೇ ವಿಶೇಷ.

“ದುನಿಯಾ’ ವಿಜಯ್‌ ಅಂದಾಕ್ಷಣ ನೆನಪಾಗೋದೇ, ಕಟ್ಟುಮಸ್ತಾದ ದೇಹ. ಅವರು ತಮ್ಮ ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರಂತೆಯೇ ಅವರ ಪುತ್ರ ಸಾಮ್ರಾಟ್‌ ಕೂಡ ಸಿಕ್ಕಾಪಟ್ಟೆ ವಕೌìಟ್‌ ಮಾಡುತ್ತಿದ್ದಾನೆ ಅನ್ನೋದು ಹೊಸ ಸುದ್ದಿ. “ಕುಸ್ತಿ’ ಚಿತ್ರ ನೋಡಿದವರಿಗೆ, ಅಪ್ಪ-ಮಗನ ಸಾಮರ್ಥ್ಯ ಎಂಥದ್ದು ಎಂಬುದು ಗೊತ್ತಾಗಬೇಕಾದರೆ, ಸಿಕ್ಕಾಪಟ್ಟೆ ಕಸರತ್ತು ನಡೆಸಬೇಕು ಎಂಬ ಕಾರಣಕ್ಕೆ, ದುನಿಯಾ ವಿಜಯ್‌ ದಿನವೊಂದಕ್ಕೆ ಐದು ತಾಸು ವಕೌìಟ್‌ ಮಾಡಿದರೆ, ಅವರ ಪುತ್ರ ಸಾಮ್ರಾಟ್‌ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು 
ತಾಸು ವಕೌìಟ್‌ ಮಾಡುತ್ತಿದ್ದಾನೆ. “ಕುಸ್ತಿ’ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್‌ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ “ಕುಸ್ತಿ’ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ.

“ಕುಸ್ತಿ’ ಚಿತ್ರದಲ್ಲಿ ರಿಯಲ್‌ “ಕುಸ್ತಿ’ ಇರದಿದ್ದರೆ ಹೇಗೆ? ಇಬ್ಬರೂ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗಬೇಕು. ಹಾಗಾಗಿ ಸಾಮ್ರಾಟ್‌ಗೆ
ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್‌ ಅವರೂ ಕೂಡ “ಕುಸ್ತಿ’ಯ ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿ ಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ. ಮಗನ ಶಿಸ್ತು, ಶ್ರದ್ಧೆ ಬಗ್ಗೆ ಮಾತನಾಡುವ ದುನಿಯಾ ವಿಜಯ್‌, “ಅವನಲ್ಲಿ ಕಲೆ ತುಂಬಿಕೊಂಡಿದೆ. ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾನೆ. ಹುಮ್ಮಸ್ಸಿದೆ, ಉತ್ಸಾಹವೂ ಇದೆ. ಅವನ ಶ್ರದ್ಧೆ ಗಮನಿಸುತ್ತಿದ್ದರೆ, ಮುಂದೊಂದು ದಿನ, ಬಹುಶಃ ನನಗೇ ಕಾಂಪಿಟೇಷನ್‌ ಕೊಡ್ತಾನೇನೋ ಎನಿಸುತ್ತದೆ. ಅಷ್ಟರಮಟ್ಟಿಗೆ ಶ್ರದ್ಧೆಯಿಂದ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ’ ಎನ್ನುತ್ತಾರೆ ದುನಿಯಾ ವಿಜಯ್‌.

‌ು¾ ಮಕ್ಕಳನ್ನು ರಜೆಯ ಮಜ ಅನುಭವಿಸಲು ಎಲ್ಲೆಡೆ ಕರೆದೊಯ್ಯುತ್ತಾರೆ. ಆದರೆ, ದುನಿಯಾ ವಿಜಯ್‌ ಮಾತ್ರ, ಈ ಬೇಸಿಗೆ ರಜೆಯಲ್ಲಿ ಸಾಮ್ರಾಟ್‌ ಗೆ ಎಲ್ಲಿಗೂ ಕಳುಹಿಸಿಲ್ಲವಂತೆ. ಹೆಚ್ಚು “ರಜೆಯ ಮಜ ಅನುಭವಿಸಲು ಬಿಟ್ಟಿಲ್ಲ. ಕಾರಣ, ಸಾಮ್ರಾಟ್‌ನನ್ನು “ಕುಸ್ತಿ’ ಪಾತ್ರಕ್ಕೆ ಅಣಿಗೊಳಿಸಬೇಕಾದ ಹಿನ್ನೆಲೆಯಲ್ಲಿ ಒಬ್ಬ ಕುಸ್ತಿಪಟುವಾಗಿ ಕಾಣಲು ಏನೆಲ್ಲಾ ಬೇಕೋ ಅದರ ತಯಾರಿ ಮಾಡಿಕೋ ಅಂತ, ದಿನ ನಿತ್ಯ ವಕೌìಟ್‌ ಬಿಟ್ಟರೆ, ಕುಸ್ತಿ ಪಟ್ಟುಗಳ ಬಗ್ಗೆ ತಿಳಿದುಕೊಳ್ಳುವುದನ್ನು ಬಿಟ್ಟರೆ, ಬೇರೆ ಕಡೆ ಗಮನಹರಿಸಲು ಬಿಟ್ಟಿಲ್ಲವಂತೆ. ಆ ಕುರಿತು ಹೇಳಿಕೊಳ್ಳುವ ವಿಜಿ, “ಕುಸ್ತಿ’ ನನ್ನ ಬಹುನಿರೀಕ್ಷೆಯ ಚಿತ್ರ. ನಾನೇ ಬರೆದ ಕಥೆ. ಒಂದು ತಂಡದ ಜೊತೆಗೆ ಕುಳಿತು ಚಿತ್ರಕಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಸಾಮ್ರಾಟ್‌ ನನ್ನ ಆಸೆಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾನೆ. ಮೊದಲ ಸಲ ತೆರೆಯ ಮೇಲೆ ಮಗನನ್ನು ತೋರಿಸುತ್ತಿರುವುದರಿಂದ ನಿರೀಕ್ಷೆಯೂ ಇರುತ್ತೆ. ಅದು ಸುಳ್ಳಾಗಬಾರದು. ಅಷ್ಟರಮಟ್ಟಿಗೆ ತಯಾರಿ ಮಾಡುತ್ತಿರುವುದಾಗಿ ಹೇಳುತ್ತಾರೆ ದುನಿಯಾ ವಿಜಯ್‌.

ಸದ್ಯಕ್ಕೆ ದುನಿಯಾ ವಿಜಯ್‌ ಅವರ “ಕುಸ್ತಿ’ಗೆ ನಿರ್ದೇಶಕರು ಯಾರೆಂಬುದು ಗೌಪ್ಯ. ಈಗ ಸ್ಕ್ರಿಪ್ಟ್ ಬಗ್ಗೆಯಷ್ಟೇ ಹೆಚ್ಚು ಗಮನಹರಿಸಿರುವ ಅವರು, ಇಷ್ಟರಲ್ಲೇ ನಿರ್ದೇಶಕರ್ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಕುರಿತು ವಿವರ ಕೊಡುತ್ತಾರಂತೆ. ಬಹುತೇಕ ಕರ್ನಾಟಕದಲ್ಲೇ “ಕುಸ್ತಿ’ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ “ಕುಸ್ತಿ’ಯ ಆಟ ನಡೆಯಲಿದೆ. ಚಿತ್ರದಲ್ಲಿ ರಿಯಲ್‌ ಕುಸ್ತಿ ಪಟುಗಳು ತುಂಬಿಕೊಳ್ಳುತ್ತಾರೆ ಎನ್ನುವ ವಿಜಯ್‌, ಇಷ್ಟರಲ್ಲೇ ಯಾರೆಲ್ಲಾ ಈ “ಕುಸ್ತಿ’ ಅಖಾಡಕ್ಕೆ ಬರುತ್ತಾರೆ ಎಂಬುದನ್ನು ಹೇಳಲಿದ್ದಾರೆ. 

 ವಿಭ

ಟಾಪ್ ನ್ಯೂಸ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.