ಸೋಡ ಇಲ್ಲದ ಊಟವಿದ್ದಂತೆ!


Team Udayavani, Jul 6, 2018, 6:00 AM IST

u-22.jpg

“ಜನರು ಸೋಡ ಇಲ್ಲದ ಊಟವನ್ನೇ ಹುಡುಕಿ ಹೋಗುವುದು ಹೆಚ್ಚು. ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೆ, ಮನರಂಜನೆ ಮತ್ತು ಗಟ್ಟಿ ಕಥೆ ಇರುವ ಸಿನಿಮಾ ಹುಡುಕುವುದು ಹೆಚ್ಚು. ನಮ್ಮ ಚಿತ್ರ ಒಂದು ರೀತಿಯ ಸೋಡ ಇಲ್ಲದ ಊಟ ಇದ್ದಂಗೆ…’

– ಹೀಗೆ ಹೇಳಿದ್ದು ನಿರ್ದೇಶಕ ಕೆ.ಎಂ. ರಘು. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ಪರಸಂಗ’ ಚಿತ್ರದ ಕುರಿತು. ಈ ವಾರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಂಡ ರಘು, “ಇದು ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಚಿತ್ರ. ಪಕ್ಕಾ ಹಳ್ಳಿ ಸೊಗಡಿನ ರುಚಿ ಇಲ್ಲಿರಲಿದೆ. ಎಲ್ಲರ ಮನಕಲಕುವ ಚಿತ್ರಣ ಚಿತ್ರದ ಹೈಲೆಟ್‌. ನಂಬಿಕೆಯನ್ನು ಅನುಮಾನದಿಂದ ನೋಡಿದಾಗ, ಏನೆಲ್ಲಾ ನಡೆದು ಹೋಗುತ್ತದೆ ಎಂಬುದು ಕಥೆಯ ಸಾರಾಂಶ. ಈ ಸಮಾಜಕ್ಕೆ ಮುಖ್ಯವಾಗಿ ಏನೆಲ್ಲಾ ಬೇಕು, ಸಮಾಜ ಹೇಗೆಲ್ಲಾ ಇದೆ ಎಂಬುದನ್ನು ಒಂದು ಹಳ್ಳಿಪರಿಸರದಲ್ಲಿ ಮನರಂಜನೆ ಜೊತೆಗೆ ಹೇಳಿದ್ದೇನೆ. ಇದು ಹಳ್ಳಿಯೊಂದರ ರಿಯಲ್‌ ತಿಮ್ಮನ ಕಥೆ. ಆ ಕಥೆ ಕೇಳಿ, ಸಿನಿಮಾ ಮಾಡಬೇಕೆನಿಸಿತು. ಆ ಪಾತ್ರಕ್ಕೆ ಮಿತ್ರ ಸರಿಹೊಂದುತ್ತಾರೆ ಅಂತ ಆಯ್ಕೆ ಮಾಡಿದ್ದು ಖುಷಿಕೊಟ್ಟಿದೆ. ಯಾಕೆಂದರೆ, ನನ್ನ ಕಲ್ಪನೆ ಮೀರಿ ನಟಿಸಿದ್ದಾರೆ. ಉಳಿದಂತೆ ಪ್ರತಿಯೊಬ್ಬರ ಸಹಕಾರದಿಂದ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. ಇಂತಹ ಚಿತ್ರಗಳಿಗೆ ನಿರ್ಮಾಪಕರ ಪ್ರೋತ್ಸಾಹವೂ ಇರಬೇಕು. ಕುಮಾರ್‌, ಲೋಕೇಶ್‌ ಮತ್ತು ಮಹದೇವೇಗೌಡ ಅವರು ಚಿತ್ರಕ್ಕೆ ಬೇಕಾದ್ದೆಲ್ಲ ಕೊಟ್ಟು ಒಂದೊಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ. ಜನರು ಸೋಡ ಇಲ್ಲದ ಊಟ ಬಯಸುವಂತೆ, ಮನರಂಜನೆ ಮತ್ತು ಕಥೆ ಇರುವ ಚಿತ್ರ ನೋಡುವ ಮನಸ್ಸುಗಳಿಗೆ “ಪರಸಂಗ’ ಹೇಳಿಮಾಡಿಸಿದ ಚಿತ್ರ’ ಅಂದರು ನಿರ್ದೇಶಕ ರಘು.

“ಪರಸಂಗ’ ತಮ್ಮ ಬದುಕಿನ ಮತ್ತೂಂದು ದಿಕ್ಕು ಬದಲಿಸುವ ಚಿತ್ರ ಎಂದು ಮಾತಿಗಿಳಿದ ಮಿತ್ರ, “ನಾನಿಲ್ಲಿ ತಿಮ್ಮನ ಪಾತ್ರ ನಿರ್ವಹಿಸಿದ್ದೇನೆ. ಅದೊಂದು ಮುಗ್ಧತೆ ಪಾತ್ರ. ನೋಡುಗರಿಗೆ ಕಣ್ಣಂಚಲ್ಲಿ ನೀರು ತುಂಬಿಸುವ ಕಥೆ ಇಲ್ಲಿದೆ. ಹಾಗಂತ ಮನರಂಜನೆ ಇಲ್ಲವೆಂದಲ್ಲ, ಅದಕ್ಕೂ ಜಾಗವಿದೆ. ಒಂದು ಸದಭಿರುಚಿಯ ಚಿತ್ರ ಇದಾಗಲಿದೆ. ಪಕ್ಕಾ ಹಳ್ಳಿ ಭಾಷೆಯ ಚಿತ್ರಣದೊಂದಿಗೆ ಆಪ್ತತೆ ಎನಿಸುವ ಚಿತ್ರ ಇದಾಗಲಿದೆ’ ಎಂದರು ಮಿತ್ರ.

ನಾಯಕಿ ಅಕ್ಷತಾಗೆ ಹೊಸಬಗೆಯ ಪಾತ್ರ ಸಿಕ್ಕ ಖುಷಿ. ನಾಯಕ ಮನೋಜ್‌ಗೆ ಇದು ಹೊಸದೊಂದು ಇಮೇಜ್‌ ತಂದುಕೊಡುವ ಚಿತ್ರವಂತೆ. ನಿರ್ಮಾಪಕರಾದ ಕುಮಾರ್‌, ಲೋಕೇಶ್‌, ಮಹದೇವೇಗೌಡ ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ. ಛಾಯಾಗ್ರಾಹಕ ಸುಜಯ್‌ಕುಮಾರ್‌ಗೆ ಇಲ್ಲಿ ಹಳ್ಳಿಯ ಪರಿಸರವನ್ನು ತೋರಿಸಿರುವುದೇ ಚಾಲೆಂಜ್‌ ಅಂತೆ. ಸಂಗೀತ ನಿರ್ದೇಶಕ ಹರ್ಷವರ್ಧನ್‌ ರಾಜ್‌ಗೆ ಇದು ಮೊದಲ ಚಿತ್ರ. ವಿತರಕ ದೀಪಕ್‌ ಸುಮಾರು 120 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.