ಇಂದಿನಿಂದ ಅಯೋಗ್ಯನ ಆಟ


Team Udayavani, Aug 17, 2018, 6:00 AM IST

c-30.jpg

“ಸಿನಿಮಾ ಬಿಡುಗಡೆಯಾದ ನಂತರ ನಿರ್ಮಾಪಕರು ಖುಷಿಯಾಗಿರುತ್ತಾರೆ, ಆದರೆ, ನಾನು ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ’
– ಹೀಗೆ ಖುಷಿ ಖುಷಿಯಾಗಿ ಹೇಳಿಕೊಂಡರು ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌. ಪಕ್ಕದಲ್ಲಿದ್ದ ನೀನಾಸಂ ಸತೀಶ್‌ ಮೊಗದಲ್ಲೂ ಹೆಮ್ಮೆ ಎದ್ದು ಕಾಣುತ್ತಿತ್ತು. ಚಂದ್ರಶೇಖರ್‌ ಖುಷಿಗೆ, ಸತೀಶ್‌ ಹೆಮ್ಮೆಗೆ ಕಾರಣವಾಗಿದ್ದು, “ಅಯೋಗ್ಯ’. 

ಆರಂಭದಿಂದಲೂ ನಾನಾ ವಿಷಯಗಳಿಂದ ಸೌಂಡ್‌ ಮಾಡುತ್ತಲೇ ಬಂದ “ಅಯೋಗ್ಯ’ ಚಿತ್ರ ಇಂದು ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದಲ್ಲಿ ಅರ್ಧ ಹಣ ವಾಪಾಸ್‌ ಬರುವ ಮೂಲಕ ನಿರ್ಮಾಪಕರು ಖುಷಿಯಾಗಿದ್ದಾರೆ. ಡಬ್ಬಿಂಗ್‌ ರೈಟ್ಸ್‌, ಆಡಿಯೋ ರೈಟ್ಸ್‌, ಏರಿಯಾ ಮಾರಾಟ … ಹೀಗೆ ನಿರ್ಮಾಪಕರ ಜೇಬಿಗೆ ಒಂದಷ್ಟು ಹಣ ಬಂದು ಬಿದ್ದಿದೆ. “ಈ ತರಹದ ಒಂದು ಸುಯೋಗ ಎಲ್ಲರಿಗೂ ಸಿಗೋದಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ಸಕ್ಸಸ್‌ ಮೀಟ್‌ ಮಾಡುತ್ತಾರೆ. ಆದರೆ, ನಾನು ಸಿನಿಮಾ ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ. ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಎಲ್ಲಾ ಕಡೆಗಳಿಂದಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೊಡ್ಡ ಹಿಟ್‌ ಆಗುವ ಸೂಚನೆ ಸಿಗುತ್ತಿದೆ. 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ’ ಎಂದು ಹೇಳಿಕೊಂಡರು. ಅಗಸ್ಟ್‌ 17ಕ್ಕೆ ರಾಜ್ಯದಲ್ಲಿ ಚಿತ್ರ ತೆರೆಕಂಡರೆ ಆಗಸ್ಟ್‌ 24 ರಂದು ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲಿ ತೆರೆಕಾಣಲಿದೆ.

ನೀನಾಸಂ ಸತೀಶ್‌ ಕೂಡಾ ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಸತೀಶ್‌ಗೆ “ಅಯೋಗ್ಯ’ ಎಂಬ ಟೈಟಲ್‌ ಕೇಳಿಯೇ ಇಷ್ಟವಾಯಿತಂತೆ. ಇನ್ನು, ಅಷ್ಟೊಂದು ಆಸಕ್ತಿ ಇಲ್ಲದೆ ಕಥೆ ಕೇಳಲು ಕುಳಿತ ಸತೀಶ್‌ಗೆ, ನಿರ್ದೇಶಕ ಮಹೇಶ್‌ ಕಥೆ ಹೇಳುತ್ತಿದ್ದಂತೆ ಖುಷಿಯಾಗಿ, ಈ ಸಿನಿಮಾವನ್ನು ಮಾಡಲೇಬೇಕೆಂದು ನಿರ್ಧರಿಸಿದರಂತೆ. “ಅಯೋಗ್ಯ’ ಆರಂಭವಾಗಿ ಆ ನಂತರ ಎದುರಿಸಿದ ಕಷ್ಟಗಳು, ನಿರ್ದೇಶಕ ಮಹೇಶ್‌ ಬೇಸರಗೊಂಡ ರೀತಿ, ಆ ನಂತರ ನಿರ್ಮಾಪಕ ಚಂದ್ರಶೇಖರ್‌ ಕೈ ಹಿಡಿದ ಪರಿ … ಹೀಗೆ ಎಲ್ಲವನ್ನು ಸತೀಶ್‌ ವಿವರಿಸುತ್ತಾ ಹೋದರು. ಈ ಚಿತ್ರದ ಮೂಲಕ ಸತೀಶ್‌ಗೆ ದೊಡ್ಡ ಬ್ರೇಕ್‌ ಸಿಗುವ ನಿರೀಕ್ಷೆ ಇದೆ. 

ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ. ನಿರ್ದೇಶಕ ಮಹೇಶ್‌ ತಮ್ಮಿಂದ ಕೆಲಸ ತೆಗೆಸುತ್ತಿದ್ದ ರೀತಿ, ಮೊದಲ ಬಾರಿಗೆ ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್‌ ಮಾಡಿದ ಖುಷಿ, ವಿಭಿನ್ನ ಪಾತ್ರ … ಹೀಗೆ ಎಲ್ಲದರ ಬಗ್ಗೆ ರಚಿತಾ ಸಿಕ್ಕಾಪಟ್ಟೆ ಜೋಶ್‌ನಿಂದ ಮಾತನಾಡಿದರು. ಒಂದು ಹಂತದಲ್ಲಿ ಅವರಿಗೆ ತಾನು ಸಿಕ್ಕಾಪಟ್ಟೆ ಲೈವಿÉಯಾಗಿ ಮಾತನಾಡುತ್ತಿದ್ದೇನೆ ಎಂದನಿಸಿತಂತೆ. ಚಿತ್ರದಲ್ಲಿ ನಟಿಸಿದ ತಬಲಾ ನಾಣಿ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ದೇಶಕ ಮಹೇಶ್‌ ಕುಮಾರ್‌ಗೆ ಇದು ಚೊಚ್ಚಲ ಚಿತ್ರ. ಸಿನಿಮಾ ಆರಂಭಿಸಿದ ಖುಷಿ, ಆ ನಂತರ ಎದುರಾದ ಸಂಕಷ್ಟ, ಧೈರ್ಯ ಕೊಟ್ಟ ಸತೀಶ್‌, ಬೆನ್ನು ತಟ್ಟಿ ಸಿನಿಮಾ ಮಾಡಿದ ನಿರ್ಮಾಪಕರು … ಎಲ್ಲರನ್ನು ನೆನಪಿಸಿಕೊಂಡು ಭಾವುಕರಾದರು ಮಹೇಶ್‌. 

ಚಿತ್ರದ ನಾಲ್ಕು ಹಾಡುಗಳನ್ನು ಚೇತನ್‌ ಕುಮಾರ್‌ ಬರೆದಿದ್ದು, ಎಲ್ಲವೂ ಹಿಟ್‌ ಆದ ಖುಷಿ ಚೇತನ್‌ ಅವರದು. ಛಾಯಾಗ್ರಾಹಕ ಪ್ರೀತಮ್‌ ತೆಗ್ಗಿನಮನೆ ಕೂಡಾ ತಮ್ಮ ಅನುಭವ ಹಂಚಿಕೊಂಡರು.  

ಟಾಪ್ ನ್ಯೂಸ್

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ

“ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಅಭಿಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.