ಅಲೆಮಾರಿಗಳ ಸುತ್ತ…


Team Udayavani, Aug 17, 2018, 6:00 AM IST

c-34.jpg

“ಮೂರು ಜನಕ್ಕೆ ಟೈಟಲ್‌ ಕೊಟ್ಟಿಲ್ಲ, ಹಾಗಾಗಿ ನಿಮಗೂ ಕೊಡೋದಿಲ್ಲ ಅಂತಾರೆ. ಇದೂ ಒಂದು ಕಾರಣಾನಾ?’ 
ನಗುತ್ತಾ ಕೇಳಿದರು ಮೋಹನ್‌. ಅವರ ಪ್ರಶ್ನೆ ಇದ್ದಿದ್ದು, ಹೊಸ ಚಿತ್ರದ ಟೈಟಲ್‌ ಬಗ್ಗೆ. ಹಿರಿಯ ನಿರ್ಮಾಪಕ ಬಿ.ಎನ್‌. ಗಂಗಾಧರ್‌ ನಿರ್ಮಾಣದ 26ನೇ ಚಿತ್ರವೊಂದನ್ನು ಮೋಹನ್‌ ನಿರ್ದೇಶಿಸುತ್ತಿದ್ದಾರೆ. ಏಳು ಅಲೆಮಾರಿಗಳ ಸುತ್ತ ಆ ಕಥೆ ಸುತ್ತುವುದರಿಂದ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದಾರೆ ಅವರು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿಲ್ಲ. “ಲೋಫ‌ರ್’ ಸಾಧ್ಯವಿಲ್ಲ, ಬೇಕಾದರೆ “ಲೋಫ‌ರ್‌’ ಅಂತ ಇಟ್ಟುಕೊಳ್ಳಿ ಎಂಬ ಉತ್ತರ ಬಂದಿದೆ. ಯಾಕೆ ಅಂತ ಪ್ರಶ್ನಿಸಿದ್ದಾರೆ ಮೋಹನ್‌. “ಈ ಹಿಂದೆ ಮೂವರು ನಿರ್ಮಾಪಕರು ಈ ಟೈಟಲ್‌ ಕೇಳಿದ್ದಾರೆ. ಮೂರೂ ಜನಕ್ಕೆ ಕೊಟ್ಟಿಲ್ಲ, ನಿಮಗೂ ಕೊಡೋದಿಲ್ಲ’ ಎಂಬ ಇನ್ನೊಂದು ಉತ್ತರ ಬಂದಿದೆ. ಹೆಸರು ರಿಜೆಕ್ಟ್ ಮಾಡಿದರೆ, ಅದಕ್ಕೊಂದು ಸೂಕ್ತ ಉತ್ತರ ಕೊಡಿ, ಏನೇನೋ ಕಾರಣ ಒಪ್ಪುವುದಿಲ್ಲ ಎಂಬುದು ಮೋಹನ್‌ ವಾದ. ಮೋಹನ್‌ ಪ್ರಶ್ನೆಗೆ ಯಾವಾಗ ಉತ್ತರ ಸಿಗುತ್ತದೋ ಗೊತ್ತಿಲ್ಲ. ಅವರಂತೂ ಚಿತ್ರ ಶುರು ಮಾಡಿದ್ದಾರೆ.

ಮೊನ್ನೆ ಸೋಮವಾರ ಗಿರಿನಗರದ ವಿವೇಕಾನಂದ ಪಾರ್ಕ್‌ನಲ್ಲಿ ಚಿತ್ರ ಪ್ರಾರಂಭವಾಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌, “ಇದೊಂದು ಥ್ರಿಲ್ಲರ್‌ ಚಿತ್ರ. ಯೌವ್ವನದ ದಿನಗಳಲ್ಲಿ ಏನೇನು ಮಾಡಬಾರದು ಮತ್ತು ಎಲ್ಲದಕ್ಕೂ ಲಿಮಿಟ್‌ ಇರಬೇಕು ಅಂತ ಹೇಳುವುದಕ್ಕೆ ಹೊರಟಿದ್ದೇವೆ. ಕುಡಿತ ಮತ್ತು ಡ್ರಗ್ಸ್‌ಗೆ ನೋ ಹೇಳಿ ಎಂಬ ಕಥೆ ಇರುವ ಈ ಚಿತ್ರ ಏಳು ಅಲೆಮಾರಿಗಳ ಸುತ್ತ ಸುತ್ತುತ್ತದೆ. ಅದೇ ಕಾರಣಕ್ಕೆ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದೆವು. ಆದರೆ, ಮಂಡಳಿಯಲ್ಲಿ ಈ ಹೆಸರಿಗೆ ಅನುಮತಿ ಸಿಕ್ಕಿಲ್ಲ. ದೊಡ್ಡ ಮನಸ್ಸು ಮಾಡಿಕೊಡುತ್ತಾರೆ ಎಂಬ ನಂಬಿಕೆ. ನಮ್ಮ ಟ್ರ್ಯಾಕ್‌ ರೆಕಾರ್ಡ್‌ ಸಹ ಚೆನ್ನಾಗಿದೆ. ಆ ಹೆಸರು ಸಿಗುತ್ತದೆ ಎಂಬ ನಂಬಿಕೆ ಯಾವ ಪಾಟಿ ಇದೆ ಎಂದರೆ, ಪರ್ಯಾಯ ಹೆಸರನ್ನೂ ಯೋಚಿಸಿಲ್ಲ’ ಎಂದರು ಮೋಹನ್‌.

ಈ ಚಿತ್ರದಲ್ಲಿರುವ ಏಳು ಪಾತ್ರಗಳು ಸಹ ನೆಗೆಟಿವ್‌ ಪಾತ್ರಗಳು ಎನ್ನುವ ಮೋಹನ್‌, “ಇಲ್ಲಿರುವ ಏಳೂ ಪಾತ್ರಗಳು ನೆಗೆಟಿವ್‌ ಪಾತ್ರಗಳು. ಯಾರಿಗೂ ಮನೆ ಇರುವುದಿಲ್ಲ. ಹೇಳಿಕೊಳ್ಳುವುದಕ್ಕೆ ಸ್ವಂತದವರು ಇರುವುದಿಲ್ಲ. ಆ ಬಗ್ಗೆ ಎಲ್ಲರಿಗೂ ಬೇಸರವಿರುತ್ತದೆ. ಎಲ್ಲರೂ ಗೆಸ್ಟ್‌ ಹೌಸ್‌ನಲ್ಲಿ ಇರುತ್ತಾರೆ’ ಅಂತ ಹೇಳುತ್ತಾ ಹೋದರು ಮೋಹನ್‌. ಈ ಚಿತ್ರದಲ್ಲಿ ನಾಲ್ವರು ಹೀರೋಗಳು ಮತ್ತು ಮೂವರು ಹೀರೋಯಿನ್‌ಗಳಿದ್ದಾರೆ. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ.

ನಿರ್ಮಾಪಕ ಬಿ.ಎನ್‌. ಗಂಗಾಧರ್‌ ಮಾತಾಡುವ ಮೂಡ್‌ನ‌ಲ್ಲಿ ಇರಲಿಲ್ಲ. “ಈ ಹೆಸರು ಸಿಗದಿದ್ದರೆ “ಖದೀಮ ಕಳ್ಳರು’ ಮತ್ತು “ಪ್ರಳಯಾಂತಕರು’ ಎಂಬ ಟೈಟಲ್‌ ಯೋಚನೆ ಮಾಡಿದ್ದೇನೆ. ಅದು ಬೇರೆಯವರ ಹತ್ತಿರ ಇದೆ. ಅವರ ಜೊತೆಗೆ ಮಾತಾಡುತ್ತಿದ್ದೀನಿ. ನೋಡೋಣ’ ಎಂದರು. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ಎಲ್ಲರೂ ಮೋಹನ್‌ ನಿರ್ದೇಶನದಲ್ಲಿ, ಗಂಗಾಧರ್‌ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಪಟ್ಟರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.