ಚೌಕುರ್‌ ಗೇಟ್‌ನಲ್ಲಿ ನಿಂತ ಹೊಸಬರು


Team Udayavani, Aug 31, 2018, 6:00 AM IST

23.jpg

“ಚೌಕುರ್‌ ಗೇಟ್‌…
– ಈ ಶೀರ್ಷಿಕೆ ನೋಡಿದರೆ, ಇದೊಂದು ಹಾರರ್‌ ಚಿತ್ರ ಇರಬೇಕು ಅಂತ ಅನಿಸುವುದು ನಿಜ. ಹಾಗಂದುಕೊಂಡರೆ ಇದು ಹಾರರ್‌ ಚಿತ್ರವಲ್ಲ. ಒಂದು ಸಸ್ಪೆನ್ಸ್‌ -ಥ್ರಿಲ್ಲರ್‌ ಚಿತ್ರ ಎಂಬುದು ನಿರ್ದೇಶಕ ದಿನೇಶ್‌ ಮಾತು. ಈ ವಾರ ಚಿತ್ರ ತೆರೆಗೆ ಬರುತ್ತಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಇದು ಪ್ಯಾಕೇಜ್‌ ಸಿನಿಮಾ ಎನ್ನುತ್ತಾರೆ ದಿನೇಶ್‌. ಏನದು ಪ್ಯಾಕೇಜ್‌ ಸಿನಿಮಾ ಎಂಬ ಪ್ರಶ್ನೆಗೆ, “ಇಲ್ಲಿ ಸಸ್ಪೆನ್ಸ್‌ ಇದೆ, ಥ್ರಿಲ್ಲರ್‌ ಇದೆ, ಬೆಚ್ಚಿಬೀಳಿಸುವ ಘಟನೆಗಳೂ ಇವೆ. ಜೊತೆಗೊಂದಷ್ಟು ಹಾಸ್ಯವೂ ಇದೆ. ಹಾಗಾಗಿ ಇದೊಂದು ಎಲ್ಲಾ ಪ್ಯಾಕೇಜ್‌ ಇರುವಂತಹ ಚಿತ್ರ’ ಎಂದು ಉತ್ತರ ಕೊಡುತ್ತಾರೆ ನಿರ್ದೇಶಕರು. 

ಎಲ್ಲಾ ಸರಿ, “ಚೌಕುರ್‌ ಗೇಟ್‌’ ಅನ್ನುವುದು ಏನು? “ಒಂದು ಕಾಡಿನ ಮಧ್ಯೆ ಸಿಗುವಂತಹ ಸ್ಥಳವೇ ಚೌಕುರ್‌ ಗೇಟ್‌. ಅಲ್ಲೊಂದು ತಂಡ ಯಾವುದೋ ವಿಷಯಕ್ಕೆ ಹೋಗುತ್ತೆ. ಇನ್ನೂ ಮೂರು ಕಿಲೋಮೀಟರ್‌ ದೂರದಲ್ಲಿ ಚೌಕುರ್‌ ಗೇಟ್‌ ಇರುತ್ತೆ. ಅಲ್ಲಿಗೆ ತಲುಪುವ ಮಧ್ಯೆ ಸಾಕಷ್ಟು ಘಟನೆಗಳು ಸಂಭವಿಸುತ್ತವೆ. ಆ ಘಟನೆ ಬೆನ್ನತ್ತಿ ಒಬ್ಬ ಪೊಲೀಸ್‌ ಅಧಿಕಾರಿ ತನಿಖೆ ಶುರುಮಾಡುತ್ತಾರೆ. ಆಮೇಲೆ ಏನಾಗಲಿದೆ ಎಂಬುದು ಕಥೆ. ಹಾಗಂತ, ಇದು ಎಲ್ಲೂ ನಡೆದ ನೈಜ ಘಟನೆಯಂತೂ ಅಲ್ಲ. ಇದೊಂದು ಕಾಲ್ಪನಿಕ ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ದಿನೇಶ್‌.

ಈ ಚಿತ್ರಕ್ಕೆ ಶರಣು ಕಾಳೆ ನಿರ್ಮಾಪಕರು. ಅವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ನಿರ್ದೇಶಕರ ಕಥೆಯಲ್ಲಿ ಡಾಬಾ ಹೋಟೆಲ್‌ ಇದೆ. ಆ ಡಾಬಾ ಹೋಟೆಲ್‌ ಮಾಲೀಕರಾಗಿ ನಟಿಸಿದ್ದಾರಂತೆ ನಿರ್ಮಾಪಕರು. ಅಷ್ಟೇ ಅಲ್ಲ, ಅವರು ಒಂದು ಫೈಟನ್ನೂ ಮಾಡಿದ್ದಾರೆ. ಅದು ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಶರಣು ಕಾಳೆ ಮಾತು. ಅಂದಹಾಗೆ, ಸುಮಾರು 80 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗಿದೆ.

ಚಿತ್ರಕ್ಕೆ ರಕ್ಷಿತ್‌ ಅರಸ್‌ ಗೋಪಾಲ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದಿರುವ ರಕ್ಷಿತ್‌, ಹಂಪಿ ಯುನಿರ್ವಸಿಟಿಯಲ್ಲಿ ಡಿಪ್ಲೊಮೋ ಇನ್‌ ಥಿಯೇಟರ್‌ ಕೋರ್ಸ್‌ ಮಾಡಿದ್ದಾರೆ. ಧಾರಾವಾಹಿಯೊಂದರಲ್ಲಿ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡಿರುವ ಅವರಿಗೆ “ಚೌಕುರ್‌ ಗೇಟ್‌’ ಮೊದಲ ಚಿತ್ರ. ಇಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಿದವರು ಕೊನೆಗೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬ ಕಥೆ ಇದೆ. ನಾನಿಲ್ಲಿ ಫೋಟೋಗ್ರಾಫ‌ರ್‌ ಆಗಿ ನಟಿಸುತ್ತಿದ್ದೇನೆ ಎನ್ನುತ್ತಾರೆ ಅವರು.

ಸಂಗೀತ ನಿರ್ದೇಶಕ ನಿತಿನ್‌ ಬಕಾಲೆ ಚಿತ್ರಕ್ಕೆ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಹಂಸಲೇಖ ಅವರ ಬಳಿ ಕೆಲಸ ಮಾಡಿದ್ದ ನಿತಿನ್‌ ಬಕಾಲೆಗೆ ಇದು ಒಳ್ಳೆಯ ಅವಕಾಶವಂತೆ. ಇನ್ನು, ಬಸವರಾಜ್‌ ಎಂಬ ಹೊಸ ಪ್ರತಿಭೆಗೂ ಇದು ಮೊದಲ ಚಿತ್ರ. ನಾಲ್ವರ ಜೊತೆಗೆ ಕಾಣಿಸಿಕೊಳ್ಳುವ ಪಾತ್ರ ಅದಾಗಿದ್ದು, ನೋಡುಗರಿಗೆ ಹೊಸ ಅನುಭವ ಕಟ್ಟಿಕೊಡುವ ಚಿತ್ರವಿದು ಎನ್ನುತ್ತಾರೆ ಬಸವರಾಜ್‌.

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.