ಉದ್ದೇಶ ಈಡೇರಿದೆ


Team Udayavani, Aug 31, 2018, 6:00 AM IST

32.jpg

“ನನ್ನ ಉದ್ದೇಶ ಈಡೇರಿದೆ …’
ತುಂಬಾ ವಿಶ್ವಾಸದಿಂದ ಹೀಗೆ ಹೇಳಿದರು ರಿಷಬ್‌ ಶೆಟ್ಟಿ. ಅವರ ವಿಶ್ವಾಸಕ್ಕೆ ಕಾರಣ ಜನ “ಸರ್ಕಾರಿ ಶಾಲೆ’ಗೆ ನುಗ್ಗಿ ಬರುತ್ತಿರೋದು. ಕಳೆದ ವಾರ ತೆರೆಕಂಡ ರಿಷಭ್‌ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಹಿಟ್‌ಲಿಸ್ಟ್‌ ಸೇರುವತ್ತ ದಾಪುಗಾಲು ಹಾಕುತ್ತಿದೆ. ಆರಂಭದಿಂದಲೂ ಇದು ಮಕ್ಕಳ ಸಿನಿಮಾ ಎಂದು ಬಿಂಬಿತವಾದ ಚಿತ್ರ. ಸಾಮಾನ್ಯವಾಗಿ ಮಕ್ಕಳ ಸಿನಿಮಾ ಎಂದರೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲ್ಲ ಮತ್ತು ಬಿಡುಗಡೆಯಾದರೂ ಪ್ರೇಕ್ಷಕರ ಕೊರತೆ ಕಾಡುತ್ತದೆ ಎಂಬ ಮಾತಿದೆ. ಆದರೆ, “ಸರ್ಕಾರಿ ಶಾಲೆ’ ಮಾತ್ರ ಆ ಮಾತನ್ನು ಸುಳ್ಳು ಮಾಡಿದೆ. ಜನ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಹೌಸ್‌ಫ‌ುಲ್‌ ಪ್ರದರ್ಶನಗಳು ನಡೆದಿವೆ. ಚಿತ್ರಮಂದಿರಗಳ ಸಂಖ್ಯೆಯೂ ಏರಿಕೆಯಾಗಿವೆ. 

ಈ ಖುಷಿಯಲ್ಲಿ ನಿರ್ದೇಶಕ ರಿಷಭ್‌ ಇದ್ದಾರೆ. ಏನಂದುಕೊಂಡು ಸಿನಿಮಾ ಮಾಡಿದ್ದರೋ ಅದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಯಂತೆ. “ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಥಿಯೇಟರ್‌ನವರಿಂದಲೂ ಬೇಡಿಕೆ ಬರುವ ಜೊತೆಗೆ ಸಿನಿಮಾ ನೋಡಿದವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಆಡಿಯನ್ಸ್‌ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಮಕ್ಕಳು ಸ್ವಲ್ಪ ಹೆಚ್ಚೇ ಇಷ್ಟಪಟ್ಟ ಸಿನಿಮಾವಿದು. ಇತ್ತೀಚೆಗೆ ನಾನು ಥಿಯೇಟರ್‌ಗೆ ಭೇಟಿ ನೀಡಿದಾಗ ಜನರ ಪ್ರತಿಕ್ರಿಯೆ ನೋಡಿ ಸಿನಿಮಾದ ಉದ್ದೇಶ, ಆಶಯ ಈಡೇರಿದ ಖುಷಿ ಸಿಕ್ಕಿತು’ ಎನ್ನುತ್ತಾರೆ ರಿಷಭ್‌.

ಒಂದು ಸಿನಿಮಾ ಅಂದಮೇಲೆ ಅದನ್ನು ಎಲ್ಲರೂ ಇಷ್ಟಪಡಬೇಕು, ಒಕ್ಕೊರಲಿನ ಬೆಂಬಲ ಸಿಗಬೇಕು ಎಂಬ ಯಾವ ನಿಯಮವೂ ಇಲ್ಲ. ಟೀಕೆಗಳು, ಮಿಶ್ರ ಪ್ರತಿಕ್ರಿಯೆಗಳು ಸಹಜ. ಆ ತರಹದ ಮಿಶ್ರ ಪ್ರತಿಕ್ರಿಯೆ, ಟೀಕೆಗಳಿಂದ “ಸರ್ಕಾರಿ ಶಾಲೆ’ ಕೂಡಾ ಮುಕ್ತವಾಗಿಲ್ಲ. ಆದರೆ, ಈ ಬಗ್ಗೆ ರಿಷಭ್‌ಗೆ ಯಾವುದೇ ಬೇಸರವಿಲ್ಲ. “ನಾನು ಮಾಡುತ್ತಿರುವ ಸಿನಿಮಾ ಬಗ್ಗೆ ನನಗೆ ಕ್ಲಾéರಿಟಿ ಇತ್ತು. ಏನು ಹೇಳಬೇಕಿತ್ತೋ, ಅದನ್ನು ಹೇಳಿದ್ದೇನೆ. ಒಂದಷ್ಟು ಮಂದಿ ಕಾಸರಗೋಡಿನ ಬಗ್ಗೆ ಹೇಳಲಿಲ್ಲ, ಶಾಲೆ ಬಗ್ಗೆ ಹೇಳಿದ್ದಾರೆ ಎನ್ನುತ್ತಿದ್ದಾರೆ. ನಾನು ಆರಂಭದಿಂದಲೂ ಒಂದು ಮಾತು ಹೇಳುತ್ತಲೇ ಬಂದಿದ್ದೆ, ನಮ್ಮ ಸಿನಿಮಾದ ಉದ್ದೇಶ ಸರ್ಕಾರಿ ಶಾಲೆಯ ಉಳಿವಿನ ಬಗ್ಗೆ, ಮಾತೃಭಾಷೆಯಲ್ಲಿ ಶಿಕ್ಷಣ ಸಿಗಬೇಕು ಎಂಬ ಹೋರಾಟದ ಬಗ್ಗೆ. ಕಾಸರಗೋಡನ್ನು ನಾನು ಕಥೆಯ ಹಿನ್ನೆಲೆಯಲ್ಲಿ ಇಟ್ಟಿದ್ದೇನೆಯೇ ಹೊರತು, ಅದು ನನ್ನ ಸಿನಿಮಾದ ಉದ್ದೇಶವಲ್ಲ. ನನ್ನ ಮುಖ್ಯಕಥೆಯ ಜೊತೆಗೆ ಕಾಸರಗೋಡಿನ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಬೇಕಿತ್ತು. ಕಾಸರಗೋಡನ್ನು ವೈಭವೀಕರಿಸುವ ಉದ್ದೇಶ ನನ್ನದಾಗಿರಲಿಲ್ಲ. ಮಂಗಳೂರಿನಲ್ಲಿದ್ದ ಎಷ್ಟೋ ಮಂದಿಗೆ ಕಾಸರಗೋಡಿನ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಈಗ ಎಲ್ಲರೂ ಆ ಬಗ್ಗೆ ಮಾತನಾಡುತ್ತಾರೆ. ಅದು ಈ ಸಿನಿಮಾಕ್ಕೆ ಸಿಕ್ಕ ಜಯ ಎನ್ನಬಹುದು. ನಮ್ಮ ಸಿನಿಮಾದ ಮುಖ್ಯ ಉದ್ದೇಶ ಅರ್ಥಮಾಡಿಕೊಳ್ಳದವರು ಆ ಬಗ್ಗೆ ಮಾತನಾಡುತ್ತಾರೆ. ನನಗೆ ಬೇಸರವಿಲ್ಲ, ಏಕೆಂದರೆ, ಅವರವರ ಅಭಿಪ್ರಾಯ ಅವರವರಿಗೆ. ನನಗೆ ಜನರ ಪ್ರತಿಕ್ರಿಯೆ ಮುಖ್ಯ. ಅದು ನಮಗೆ ಪ್ರಶಸ್ತಿಗಿಂತಲೂ ದೊಡ್ಡದು. ಅದೊಂಥರ ಗಣಿ ಸಿಕ್ಕಂತೆ’ ಎಂದು ಸಿನಿಮಾ ಬಗ್ಗೆ ಮಾತನಾಡುತ್ತಾರೆ ರಿಷಭ್‌. 

ಕಳೆದೊಂದು ವಾರದಿಂದ ಚಿತ್ರಮಂದಿರಗಳಿಗೆ ಭೇಟಿಕೊಟ್ಟು ಜನರ ಪ್ರತಿಕ್ರಿಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ರಿಷಭ್‌. ಇತ್ತೀಚೆಗೆ ಜನ ಖುಷಿಯಿಂದ ಕೇಕೆ ಹಾಕುವುದನ್ನು ರೆಕಾರ್ಡ್‌ ಮಾಡಿ ಅನಂತ್‌ನಾಗ್‌ ಅವರಿಗೆ ಕಳುಹಿಸಿದರಂತೆ. ಜೊತೆಗೆ, “ಈ ಖುಷಿಯನ್ನು ನೀವು ಥಿಯೇಟರ್‌ಗೆ ಬಂದು ನೋಡಿದರೆ ಚೆಂದ’ ಎಂದು ಕೇಳಿಕೊಂಡರಂತೆ. ಅದರಂತೆ ಕೆ.ಜಿ. ರಸ್ತೆಯ ಸಂತೋಷ್‌ ಚಿತ್ರಮಂದಿರಕ್ಕೆ ಅನಂತ್‌ನಾಗ್‌ ಭೇಟಿಕೊಟ್ಟಿದ್ದಾರೆ. ಒಳಗಡೆ ಹೌಸ್‌ಫ‌ುಲ್‌ ಪ್ರದರ್ಶನ. ಹೊರಗಡೆಯೂ ಹೌಸ್‌ಫ‌ುಲ್‌ ಆಗುವಷ್ಟು ಜನ. ಎಲ್ಲರನ್ನು ನೋಡಿ ಅನಂತ್‌ನಾಗ್‌ ಖುಷಿಯಾದರಂತೆ. 

ಮರಾಠಿಯಿಂದಲೂ “ಸರ್ಕಾರಿ ಶಾಲೆ’ಗೆ ಬೇಡಿಕೆ ಬರುತ್ತಿದೆ. ಜೊತೆಗೆ ಟಿವಿ ರೈಟ್ಸ್‌ ಕೂಡಾ ಮಾತುಕತೆ ನಡೆಯುತ್ತಿದೆ. ರಿಷಭ್‌ ಶೆಟ್ಟಿ ಮಾತ್ರ ಥಿಯೇಟರ್‌ನಿಂದ ಥಿಯೇಟರ್‌ಗೆ ಓಡಾಡುತ್ತಾ ಜನರ ಪ್ರತಿಕ್ರಿಯೆಯನ್ನು ಕಣ್ಣಾರೆ ಕಾಣುವ ಉತ್ಸಾಹದಲ್ಲಿದ್ದಾರೆ.

ರವಿ ಪ್ರಕಾಶ್‌ ರೈ

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.