ಝಾನ್ಸಿಯ ಗಣೇಶ ಭಕ್ತಿ


Team Udayavani, Sep 7, 2018, 6:00 AM IST

23.jpg

ಅಲ್ಲಿಗೆ ಹೋದವರಿಗೆ ಮೊದಲು ದರ್ಶನವಾಗಿದ್ದು ಗಣೇಶ. ಸುತ್ತಲೂ ಬಣ್ಣ ಬಣ್ಣದ ಕಾಗದ, ಹಿಂದೆ, ಮುಂದೆ ಬಾವುಟಗಳು, ಎಲ್ಲೆಡೆ ಹರಡಿಕೊಂಡಿದ್ದ ಬಗೆ ಬಗೆಯ ಬಣ್ಣ. ಆ ವಾತಾವರಣ ಗಣೇಶ ಹಬ್ಬದಂತೆಯೇ ಪರಿವರ್ತನೆಗೊಂಡಿತ್ತು. ಹತ್ತಿರ ಹೋದಾಗ, ಡ್ಯಾನ್ಸ್‌ ಮಾಸ್ಟರ್‌ ಧನು, ನಾಯಕಿ ಮತ್ತು ನೃತ್ಯಕಲಾವಿದರಿಗೆ ಸ್ಟೆಪ್‌ ಹೇಳಿಕೊಡುತ್ತಿದ್ದರು. ಅದು “ಝಾನ್ಸಿ’ ಚಿತ್ರೀಕರಣದ ಸೆಟ್‌. ಅಲ್ಲಿಗೆ ಹೋದ ಸ್ವಲ್ಪ ಸಮಯದಲ್ಲೇ ಸಣ್ಣದ್ದೊಂದು ಬ್ರೇಕ್‌ ಕೊಟ್ಟರು ಡ್ಯಾನ್ಸ್‌ ಮಾಸ್ಟರ್‌. ನಂತರ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು.

ಮೊದಲು ನಿರ್ದೇಶಕ ಗುರುಪ್ರಸಾದ್‌ ಮಾತು ಶುರು ಮಾಡಿದರು. “ಇದು ನಾಯಕಿಯನ್ನು ಪರಿಚಯಿಸುವ ಹಾಡು. ಗಣೇಶ ಉತ್ಸವ ನಡೆಯುವ ವೇಳೆ ನಾಯಕಿ ಬಂದು ಸ್ಟೆಪ್‌ ಹಾಕುವ ದೃಶ್ಯ ಕಳೆದ ಎರಡು ದಿನಗಳಿಂದ ಚಿತ್ರೀಕರಣವಾಗುತ್ತಿದೆ. ಇನ್ನೆರೆಡು ದಿನಗಳಲ್ಲಿ ಹಾಡು ಪೂರ್ಣಗೊಳ್ಳುತ್ತೆ. ಇದು ಬೆಂಗಳೂರಿನಲ್ಲಿ ನಡೆದ ಒಂದು ನೈಜ ಘಟನೆ ಇಟ್ಟುಕೊಂಡು ಮಾಡುತ್ತಿರುವ ಚಿತ್ರ. 

ಬೆಂಗಳೂರಲ್ಲಿ ಹಿಂದೆ ಒಂದು ಬಾಂಬ್‌ ಪ್ರಕರಣ ನಡೆದಿತ್ತು. ಅದನ್ನೇ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಝಾನ್ಸಿ ಸ್ಲಂನಲ್ಲಿ ವಾಸಿಸುವ ಹುಡುಗಿ. ಪಕ್ಕಾ ಗಂಡುಬೀರಿ ಆಕೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹುಡುಗಿ. ಇಲ್ಲಿ ಡ್ರಗ್ಸ್‌ ಮಾಫಿಯಾ ವಿಷಯವೂ ಇದೆ. ಕೆಲ ಪುಡಿರೌಡಿಗಳನ್ನು ಪುಡಿಗೊಳಿಸಿ, ಒಂದಷ್ಟು ಮಾಫಿಯಾದವರನ್ನು ಬಗ್ಗುಬಡಿಯೋ ಝಾನ್ಸಿ ಯಾರೆಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇದೊಂದು ಪಕ್ಕಾ ಆ್ಯಕ್ಷನ್‌ ಇರುವ ಚಿತ್ರ’ ಎಂದು ಮಾಹಿತಿ ಕೊಟ್ಟರು ಗುರುಪ್ರಸಾದ್‌.

ನಾಯಕಿ ಲಕ್ಷ್ಮೀ ರೈ ಅಂದು ಕಲರ್‌ಫ‌ುಲ್‌ ಆಗಿದ್ದರು. ಕಾರಣ, ಗಣೇಶ ಹಬ್ಬದ ಹಾಡಿಗೆ ಸ್ಟೆಪ್‌ ಹಾಕುತ್ತಿದ್ದರಿಂದ ಬಟ್ಟೆ ಮೇಲೆಲ್ಲಾ ಬಣ್ಣ ಹಚ್ಚಲಾಗಿತ್ತು.
ಹಾಗಾಗಿ ಕಲರ್‌ಫ‌ುಲ್‌ ಆಗಿದ್ದರು. ಮಾತಿಗಿಳಿದ ಲಕ್ಷ್ಮೀ ರೈ, “ಹಲವು ಚಿತ್ರಗಳಲ್ಲಿ ಗ್ಲಾಮರ್‌ ಆಗಿ ಕಾಣಿಸಿಕೊಂಡಿದ್ದೇನೆ. ಈಗ ಸ್ಲಂ ಹುಡುಗಿ ಅದರಲ್ಲೂ
ಪಕ್ಕಾ ಮಾಸ್‌ ಕಥೆಯಲ್ಲಿ ನಟಿಸುತ್ತಿದ್ದೇನೆ. ಇದೊಂದು ಹೊಸ ಬಗೆಯ ಚಿತ್ರ. ಆ್ಯಕ್ಷನ್‌ ಜಾಸ್ತಿ ಇದೆ. ಅದಕ್ಕೆ ತರಬೇತಿ ಪಡೆಯುತ್ತಿದ್ದೇನೆ. ಅಭಿನಯಕ್ಕೂ ಹೆಚ್ಚು ಒತ್ತು ಇದೆ. ನಾನು ಗಣೇಶನ ಭಕ್ತೆ. ಇಲ್ಲೂ ನನಗೆ ಗಣೇಶನ ಹಾಡಿಗಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ ಬೇಸಿಕಲಿ ನನಗೆ ಡ್ಯಾನ್ಸ್‌ ಇಷ್ಟ. ಒಳ್ಳೇ ಹಾಡು ಸಿಕ್ಕಿದೆ. ಅದಕ್ಕೆ ತಕ್ಕ ಸ್ಟೆಪ್‌ ಕೂಡ ಹಾಕಿಸಿದ್ದಾರೆ. ಇನ್ನು, ಚಿತ್ರದುದ್ದಕ್ಕೂ ಒಂದು ದುಷ್ಟಶಕ್ತಿಯ ವಿರುದಟಛಿ ಹೋರಾಡುವಂತಹ ಪಾತ್ರ
ನನ್ನದು. ಸಿನಿಮಾ ಈಗಷ್ಟೇ ಶುರುವಾಗಿದೆ. ಒಳ್ಳೆಯ ತಂಡ ಜೊತೆಗಿದೆ. ಇದು ನನ್ನ ಕೆರಿಯರ್‌ನಲ್ಲಿ ಬೇರೆ ರೀತಿಯ ಚಿತ್ರವಾಗಲಿದೆ ಅಂದರು ಲಕ್ಷ್ಮೀ ರೈ.

ಮುಂಬೈ ಮೂಲದ ರಾಜೇಶ್‌ಕುಮಾರ್‌ ಚಿತ್ರದ ನಿರ್ಮಾಪಕರು. ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಒಳ್ಳೆಯ ಕಥೆ ಇದ್ದರೆ, ಸೌತ್‌ನಲ್ಲೊಂದು ಚಿತ್ರ ಮಾಡುವ ಆಸೆ ನಿರ್ಮಾಪಕರಿಗಿತ್ತಂತೆ. ಆಗ ಸಿಕ್ಕಿದ್ದೇ “ಝಾನ್ಸಿ’ ಕಥೆ ಎಂಬುದು ರಾಜೇಶ್‌ಕುಮಾರ್‌ ಮಾತು. ಈ ಚಿತ್ರದ ಹಾಡಲ್ಲಿ ರವೀಂದ್ರ ಎಂಬ ಹೊಸ ಪ್ರತಿಭೆ ಕೂಡ ಕಾಣಿಸಿಕೊಂಡಿದೆ. ಎಲ್ಲರ ಮಾತುಕತೆ ಮುಗಿಯುತ್ತಿದ್ದಂತೆಯೇ, ಅತ್ತ ಡ್ಯಾನ್ಸ್‌ ಮಾಸ್ಟರ್‌ ಮೈಕ್‌ನಲ್ಲಿ “ಬಾಯ್ಸ ರೆಡಿ…’ ಅನ್ನುತ್ತಿದ್ದಂತೆಯೇ ಮತ್ತದೇ ಹಾಡು ಶುರುವಾಯ್ತು. ನಾಯಕಿ ಲಕ್ಷ್ಮೀ ರೈ ಕ್ಯಾಮೆರಾ ಮುಂದೆ ಹೋಗಿ ನಿಂತರು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.