ಮೈಸೂರ್‌ ಡೈರೀಸ್‌ ನೆನಪುಗಳ ಗುಚ್ಛ


Team Udayavani, Sep 21, 2018, 6:00 AM IST

z-28.jpg

“ಮೈಸೂರು ಕಥೆ, ಮೈಸೂರು ನಿರ್ದೇಶಕ, ಮೈಸೂರಿನ ಚಿತ್ರೀಕರಣ, ಮೈಸೂರು ನಿರ್ಮಾಪಕ, ಮೈಸೂರು ಟಾಕೀಸ್‌ ವಿತರಣೆ ಸಂಸ್ಥೆ, ಮೈಸೂರು ಪೇಟ ತೊಡಿಸಿ ಸನ್ಮಾನ ಇತ್ಯಾದಿ…’

– ಅಲ್ಲಿ ಎಲ್ಲವೂ ಮೈಸೂರ್‌ ಮಯ. ಅದೆಲ್ಲದ್ದಕ್ಕೂ ಕಾರಣ, “ಮೈಸೂರ್‌ ಡೈರೀಸ್‌’ ಚಿತ್ರ. ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರವಿದು. ಒಂದೇ ವೇದಿಕೆಯಲ್ಲಿ “ಮೈಸೂರು’ ಗುಣಗಾನ ನಡೆಯೋಕೆ ಕಾರಣ ಚಿತ್ರದ ಟೀಸರ್‌ ಬಿಡುಗಡೆ. ಚಿತ್ರೀಕರಣ ಮುಗಿಸಿದ ಚಿತ್ರತಂಡ, ಟೀಸರ್‌ ರಿಲೀಸ್‌ ಮಾಡುವ ಮೂಲಕ ಮಾಧ್ಯಮ ಎದುರು ಮಾತುಕತೆಗೆ ಕುಳಿತಿತ್ತು.

“ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಕಿರಿಕ್‌ ಪಾರ್ಟಿ’ ಚಿತ್ರಗಳಿಗೆ ಹಾಡು ಬರೆದು ಗುರುತಿಸಿಕೊಂಡ ಧನಂಜಯ್‌ ರಂಜನ್‌ ಈ ಚಿತ್ರದ ನಿರ್ದೇಶಕ. ಇವರಿಗಿದು ಮೊದಲ ಚಿತ್ರ. “ಪುಷ್ಪಕ ವಿಮಾನ’, “ರಾಮಾ ರಾಮ ರೇ’ ಚಿತ್ರಗಳಿಗೆ ಬರವಣಿಗೆ ಹಿಂದೆ ಇದ್ದ ಧನಂಜಯ್‌ ರಂಜನ್‌ಗೆ “ಮೈಸೂರ್‌ ಡೈರೀಸ್‌’ ಒಂದು ಕನಸು. ಆ ಕನಸಿಗೆ ಬಣ್ಣ ತುಂಬಿದ್ದು, ನಿರ್ಮಾಪಕದ್ವಯರಾದ ದೀಪಕ್‌ ಮತ್ತು ಚೇತನ್‌ ಕೃಷ್ಣ. ಆ ಬಗ್ಗೆ ಹೇಳುವ ನಿರ್ದೇಶಕ, “ಇದು ಮೈಸೂರಿನ ಭಾಗದಲ್ಲಿ ನಡೆಯೋ ಕಥೆ. ಮೈಸೂರು ಇಲ್ಲೊಂದು ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ನೆನಪಿನ ಡೈರಿ ಇರುತ್ತೆ. ಹಳೆಯ ಮಧುರ ನೆನಪುಗಳ ಗುತ್ಛದೊಂದಿಗೆ ಈ ಚಿತ್ರ ಮಾಡಿದ್ದೇನೆ. ಗೆಳೆತನದ ಜೊತೆಗೆ ಭಾವನೆಗಳ ಮಿಶ್ರಣದ ಚಿತ್ರಣ ಇಲ್ಲಿದೆ. ಆರಂಭದಲ್ಲಿ ಈ ಕಥೆ ಹೇಳಿ, ಮೈಸೂರಲ್ಲೇ 40 ದಿನ ಚಿತ್ರೀಕರಣ ಆಗಬೇಕು ಅಂದಾಗ, ನಿರ್ಮಾಪಕ ದೀಪಕ್‌ 50 ದಿನ ತಗೊಳ್ಳಿ. ಒಳ್ಳೆಯ ಚಿತ್ರ ಕೊಡಿ ಅಂದರು. ಇನ್ನು, ಚಿತ್ರಕ್ಕೆ ಹಣಕಾಸಿನ ತೊಂದರೆ ಆದಾಗ, ನಮಗೆ ಸಾಥ್‌ ಕೊಟ್ಟಿದ್ದು ಚೇತನ್‌ ಕೃಷ್ಣ. ಅವರಿಲ್ಲ ಅಂದಿದ್ದರೆ, ಚಿತ್ರ ಆಗುತ್ತಿರಲಿಲ್ಲ. ಎಲ್ಲರ ಶ್ರಮದಿಂದ “ಮೈಸೂರ್‌ ಡೈರೀಸ್‌’ ಆಗಿದೆ’ ಅಂದರು ಧನಂಜಯ್‌ ರಂಜನ್‌.

ನಿರ್ಮಾಪಕ ಚೇತನ್‌ ಕೃಷ್ಣ ಅವರದು ಮೈಸೂರು. ದೀಪಕ್‌ ಈ ಚಿತ್ರ ಶುರುಮಾಡಿದ್ದರು. ಮಧ್ಯೆ ಸಮಸ್ಯೆ ಆದಾಗ, ನನ್ನ ಬಳಿ ಬಂದು ಕಥೆ ಹೇಳಿಸಿದರು. ಎಲ್ಲೋ ಒಂದು ಕಡೆ ಕಥೆ ಮೇಲೆ ನಂಬಿಕೆ ಇತ್ತು. ಕೈ ಜೋಡಿಸಿದೆ. ಇದೊಂದು ಒಳ್ಳೆಯ ಚಿತ್ರ ಆಗಲಿದೆ ಎಂಬುದು ಚೇತನ್‌ ಕೃಷ್ಣ ಅವರ ಮಾತು.

ನಿರ್ಮಾಪಕ ದೀಪಕ್‌ ಕೃಷ್ಣ “ನಿಮ್ಮೆಲ್ಲರ ಸಹಕಾರ ನಮ್ಮ ಮೇಲಿರಲಿ’ ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದಲ್ಲಿ ಪ್ರಭು ನಾಯಕರಾಗಿ ನಟಿಸಿದ್ದಾರೆ. ಅವರೊಂದಿಗೆ ಮಂಜು, ಶೇಖರ್‌, ಪಾವನಾ ಇತರೆ ಕಲಾವಿದರು ಅಭಿನಯಿಸಿದ್ದಾರೆ. ಎಲ್ಲರಿಗೂ ಚಿತ್ರದ ಮೇಲೆ ವಿಶ್ವಾಸವಿದೆ. ಅನೂಪ್‌ ಸೀಳಿನ್‌ ಮತ್ತು ಚರಣ್‌ರಾಜ್‌ ಜೊತೆಗೂಡಿ ಮೂರು ಹಾಗು ಎರಡು ಹಾಡುಗಳಿಗೆ ಇಬ್ಬರೂ ಸಂಗೀತ ನೀಡಿದ್ದಾರೆ. ಅನೂಪ್‌ ಹಿನ್ನೆಲೆ ಸಂಗೀತ ಮಾಡುತ್ತಿದ್ದಾರೆ. ಚಂದನ್‌ ಸಂಕಲನವಿದೆ. ಶಕ್ತಿ ಶೇಖರ್‌ ಚಿತ್ರದ ಛಾಯಾಗ್ರಾಹಕರು.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Kannada Actress; ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನವನಟಿಯರು

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

Purushothamana Prasanga; ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡಚಿತ್ರ ಇಂದು ತೆರೆಗೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.