ಆ್ಯಕ್ಷನ್ ರಾಜಣ್ಣ
Team Udayavani, Nov 9, 2018, 6:00 AM IST
ಚಂದನವನದಲ್ಲಿ “ರಾಜಣ್ಣನ ಮಗ’ ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ಅಣ್ಣಾವ್ರು, ರಾಜಣ್ಣ ಎಂಬ ಹೆಸರು ಕೇಳಿದ ಕೂಡಲೆ, ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವುದು ವರನಟ ರಾಜಕುಮಾರ್. ಆದರೆ “ರಾಜಣ್ಣನ ಮಗ’ ಎಂಬ ಹೆಸರಿದ್ದರೂ, ಈ ಚಿತ್ರಕ್ಕೂ ರಾಜಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ರಾಜಣ್ಣ ಎಂಬ ಆದರ್ಶ ವ್ಯಕ್ತಿಯ ಮಗ ಏನೇನು ಮಾಡುತ್ತಾನೆ? ಎಂಬುದು ಚಿತ್ರದ ಕಥಾಹಂದರ. ಚಿತ್ರದ ಕಥೆಗೆ ಸೂಕ್ತ ಎಂಬ ಕಾರಣಕ್ಕೆ “ರಾಜಣ್ಣನ ಮಗ’ ಶೀರ್ಷಿಕೆಯನ್ನು ಚಿತ್ರಕ್ಕೆ ಇಟ್ಟುಕೊಂಡಿದ್ದೇವೆ ಎನ್ನುತ್ತದೆ ಚಿತ್ರತಂಡ. ಸದ್ಯ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ “ರಾಜಣ್ಣನ ಮಗ’ನನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಳ್ಳುತ್ತಿದೆ. ಇದರ ನಡುವೆ ಚಿತ್ರದ ಪ್ರಚಾರ
ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ “ರಾಜಣ್ಣನ ಮಗ’ನ ಹಾಡುಗಳನ್ನು ಹೊರತಂದಿದೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸೇರಿದಂತೆ ಇತರ ಅತಿಥಿಗಳು ಪಾಲ್ಗೊಂಡು ಚಿತ್ರದ ಆಡಿಯೋವನ್ನು ಹೊರತಂದು ಚಿತ್ರಕ್ಕೆ ಶುಭ ಕೋರಿದರು.
“ರಾಜಣ್ಣನ ಮಗ’ ಚಿತ್ರದಲ್ಲಿ ಹಿರಿಯ ನಟ ಚರಣ್ ರಾಜ್ ರಾಜಣ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಚರಣ್ ರಾಜ್, “ಇಂದು ಪ್ರಪಚಂದ ಯಾವುದೇ ಮೂಲೆಗೆ ಹೋದ್ರು ಕರ್ನಾಟಕ ಅಂತ ಹೇಳಿದ್ರೆ ಅಲ್ಲಿ ರಾಜಣ್ಣ, ಅಣ್ಣಾವ್ರು ಅಂತ ಹೆಸರು ಹೇಳ್ತಾರೆ. ಅವರ ಹೆಸರು, ವ್ಯಕ್ತಿತ್ವ ಅಷ್ಟೊಂದು ಅಗಾಧವಾಗಿದೆ. ಹಿಂದೆ ಅಣ್ಣಾವ್ರ ಮಕ್ಕಳು ಚಿತ್ರದಲ್ಲಿ
ತಂದೆಯ ಪಾತ್ರವನ್ನು ಮಾಡಿದ್ದೆ. ಈ ಚಿತ್ರದಲ್ಲಿ ರಾಜಣ್ಣ ಎಂಬ ಅಂಥದ್ದೆ ಪಾತ್ರವನ್ನು ಮಾಡಿದ್ದೇನೆ. ಇಂತಹ ಪಾತ್ರಗಳನ್ನು ಮಾಡುವುದೇ ನನಗೆ ಹೆಮ್ಮೆ, ಹೆಸರೇ ಹೇಳುವಂತೆ ಇದೊಂದು ಆದರ್ಶ ತಂದೆಯ ಪಾತ್ರ. ಅಪರೂಪಕ್ಕೆ ಸಿಗುವ, ಸವಾಲಿನ ಪಾತ್ರ ನಿರ್ವಹಿಸಿದ ಖುಷಿ ಇದೆ’ ಎಂದರು.
ಇನ್ನು ಈ ಚಿತ್ರದಲ್ಲಿ ರಾಜಣ್ಣನ ಮಗನಾಗಿ ಹರೀಶ್ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಹರೀಶ್, “ಈ ಚಿತ್ರದ ಹೆಸರು ರಾಜಣ್ಣನ ಮಗ ಅಂತಿದ್ದರೂ, ಅಣ್ಣಾವ್ರ ಫ್ಯಾಮಿಲಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ತಂದೆ ಮಗನ ಬಾಂಧವ್ಯದ ಚಿತ್ರ. ಏನೋ ಮಾಡಲು ಹೋಗಿ, ಇನ್ನೇನೊ ಆಗುವ ದುರಾದೃಷ್ಟ ಮಗನ ಪಾತ್ರ ನನ್ನದು’ ಎಂದರು.
“ರಾಜಣ್ಣನ ಮಗ’ ಚಿತ್ರವನ್ನು ಕೋಲಾರ ಸೀನು ನಿರ್ದೇಶನ ಮಾಡಿದ್ದು, ರವಿ ಬಸ್ರೂರು ಸಂಗೀತವಿದೆ. ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?