ಒಪ್ಪಂ ಒಪ್ಪಿ ಅಪ್ಪಿದ ಶಿವಣ್ಣ
Team Udayavani, Nov 9, 2018, 6:00 AM IST
ಅದು ಜೆ.ಪಿ.ನಗರದಲ್ಲಿರುವ ರಮಣ ಮಹರ್ಷಿ ಅಂಧರ ಅಶ್ರಮ. ಅಲ್ಲಿನ ಅಂಧ ಮಕ್ಕಳ ಜೊತೆ ಕೆಲ ಹೊತ್ತು ಶಿವರಾಜಕುಮಾರ್ ಬೆರೆತರು. ಶಿವರಾಜಕುಮಾರ್ ತಮ್ಮ ಶಾಲೆಗೆ ಬಂದಿದ್ದಾರೆ ಎಂಬ ಸಂತಸದಲ್ಲಿದ್ದ ಆ ಮಕ್ಕಳು ಶಿವರಾಜಕುಮಾರ್ ಅವರೊಂದಿಗೆ ಹರಟಿದರು, ನಗಿಸಿ, ನಕ್ಕರು, ಅವರನ್ನು ರಂಜಿಸಲು ಹಾಡಿದರು. ಇಷ್ಟಕ್ಕೂ ಶಿವರಾಜಕುಮಾರ್ ಆ ಅಂಧರ ಶಾಲೆಗೆ ಹೋಗೋಕೆ
ಕಾರಣ, “ಕವಚ’. ಆ ಚಿತ್ರದಲ್ಲಿ ಶಿವರಾಜಕುಮಾರ್ ಅಂಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಅಂಧ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿತ್ತು. ಹಾಗಾಗಿ, ಶಿವರಾಜಕುಮಾರ್ ಮತ್ತು ತಂಡ ಅಂದು ಹಾಜರಿದ್ದು, ಆ ಮಕ್ಕಳ ಜೊತೆಗೆ ಟೀಸರ್ ಬಿಡುಗಡೆ ಮಾಡಲಾಯಿತು.
“ಒಪ್ಪಂ’ ಚಿತ್ರದ ಅವತರಣಿಕೆ ಈ “ಕವಚ’. ಇದೇ ಮೊದಲ ಸಲ ಶಿವರಾಜಕುಮಾರ್ ಅಂಧ ಪಾತ್ರ ನಿರ್ವಹಿಸಿದ್ದಾರೆ. ಅವರಿಗೂ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇದೆ. ಇನ್ನು, “ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಜಿವಿಆರ್ ವಾಸು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರಿಗೆ ಈ ಚಿತ್ರ ಮಾಡಲು ಸ್ಫೂರ್ತಿ. ಶಿವರಾಜಕುಮಾರ್ ಅವರ ಶ್ರದೆಟಛಿ, ಸರಳತೆಯಂತೆ. ಶಿವಣ್ಣ ಅವರೊಂದಿಗೆ ಮಾಡಿದರೆ, ಈ ಚಿತ್ರ ಮಾಡಬೇಕು ಎಂಬ ಆಸೆ ಈಡೇರಿದ ಖುಷಿಯಲ್ಲಿರುವ ನಿರ್ದೇಶಕರು, ಈ ಪಾತ್ರಕ್ಕೆ ಶಿವಣ್ಣ ಹೊರತಾಗಿ ಬೇರಾರೂ ಸರಿಹೊಂದುತ್ತಿರಲಿಲ್ಲವಂತೆ. ಅವರ ಪ್ರಕಾರ, ಶಿವರಾಜಕುಮಾರ್ ಒಂದು ರೀತಿಯ ಹನುಮಾನ್ ಇದ್ದಂತೆ ಎಂದು ಬಣ್ಣಿಸುತ್ತಾರೆ. ಅವರು ಯಾವ ಸ್ಕೇಲ್ಗೆ ಬೇಕಾದರೂ ಹೊಂದಿಕೊಳ್ಳುತ್ತಾರೆ.
ಅಂತಹ ಪರಿಪೂರ್ಣ ನಟರ ಜೊತೆ ಕೆಲಸ ಮಾಡಿದ್ದು ಮರೆಯದ ಅನುಭವ ಎಂಬುದು ನಿರ್ದೇಶಕರ ಮಾತು. ಅಂದು ಶಾಸಕಿ ಸೌಮ್ಯರೆಡ್ಡಿ, ನಟ ಧನಂಜಯ್ ಇತರರು ಟೀಸರ್ ಬಿಡುಗಡೆಗೆ ಸಾಕ್ಷಿಯಾದರು. ಈ ಚಿತ್ರದಲ್ಲಿ ಇಶಾ ಕೊಪ್ಪಿಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ