ಕಷ್ಟ-ಸುಖ ಮತ್ತು ವಿನೋದ್‌


Team Udayavani, Mar 22, 2019, 12:30 AM IST

rugged155-copy-copy.jpg

“ನನ್ನ ತಂದೆ ನಿನಗೆ ಈ ಇಂಡಸ್ಟ್ರಿ ಬೇಡ ಅಂದಿದ್ದರು. ನಾನು ಪಟ್ಟ ಕಷ್ಟ ಸಾಕು ನೀನು ಕಷ್ಟ ಪಡುವುದು ಬೇಡ ಅಂದಿದ್ದರು. ಆದರೂ ಬಂದೆ ಕಷ್ಟ ಅನುಭವಿಸಿದೆ. ನಾನು ಬಂದು 17 ವರ್ಷದ ಬಳಿಕ ಈಗ ಪ್ರತಿಫ‌ಲ ಸಿಕ್ಕಿದೆ. ಇದನ್ನು ಹೀಗೆ ಉಳಿಸಿಕೊಂಡು ಹೋಗುತ್ತೇನೆ…’

– ವಿನೋದ್‌ ಪ್ರಭಾಕರ್‌ ಹೀಗೆ ಹೇಳುತ್ತಲೇ ಮಾತಿಗೆ ನಿಂತರು. ಅವರು ಹೇಳಿದ್ದು “ರಗಡ್‌’ ಚಿತ್ರದ ಬಗ್ಗೆ. ಅಂದು ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಬಿಡುಗಡೆ ಮಾಡಲಾಯಿತು. ಸೃಜನ್‌ ಲೋಕೇಶ್‌, ಅಣಜಿನಾಗರಾಜ್‌, ಲಹರಿ ವೇಲು, ಶಮಿತಾ ಮಲಾ°ಡ್‌, ರೂಪೇಶ್‌ ರಾಜಣ್ಣ ಹೀಗೆ ಹಲವರು ವೇದಿಕೆ ಮೇಲೇರಿ ಟ್ರೇಲರ್‌, ಹಾಡು ಬಿಡುಗಡೆಗೆ ಸಾಕ್ಷಿಯಾದರು. ವಿನೋದ್‌ ಎಲ್ಲರ ಮಾತು ಮುಗಿದ ಬಳಿಕ ಮಾತಿಗೆ ಶುರುವಿಟ್ಟುಕೊಂಡರು.

“ನಾನು ಈ ಸ್ಟೇಜ್‌ ಹತ್ತಲು ಕಾರಣ ನನ್ನ ತಂದೆ ಟೈಗರ್‌ ಪ್ರಭಾಕರ್‌. ಅವರು ಈ ಇಂಡಸ್ಟ್ರಿ ನನಗೆ ಸಾಕು. ನೀನು ಕಷ್ಟಪಡಬೇಡ ಅಂದಿದ್ದರು. ನಾನೂ ಕಷ್ಟಪಟ್ಟೆ. “ಟೈಸನ್‌’ ಸಕ್ಸಸ್‌ ಬಳಿಕವೂ ಕಷ್ಟಪಟ್ಟೆ .ಈಗ ಅದಕ್ಕೆ ಪ್ರತಿಫ‌ಲ ಸಿಕ್ಕಿದೆ. ಇದಕ್ಕೆ ಕಾರಣವಾದ ಅಭಿಮಾನಿಗಳಿಗೆ, ನನ್ನ ಸಿನಿಮಾ ನೋಡಿ ಹರಸಿದ ಜನರಿಗೆ, ಮಾಧ್ಯಮ ಮಿತ್ರರಿಗೆ ಮತ್ತು ಚಿತ್ರತಂಡಕ್ಕೆ ಚಿರಋಣಿ. ನಾನು “ರಗಡ್‌’ ಬಗ್ಗೆ ಹೆಚ್ಚು ಮಾತನಾಡಬಾರದು. ರಿಲೀಸ್‌ ಬಳಿಕ ಚಿತ್ರವೇ ಮಾತಾಡಬೇಕು. ಅದು ಮಾತಾಡುತ್ತೆ. ನಿರ್ಮಾಪಕ ಅರುಣ್‌ಕುಮಾರ್‌ ಒಳ್ಳೆಯ ಚಿತ್ರ ಮಾಡಿದ್ದಾರೆ. ಒಮ್ಮೆಯೂ ಸೆಟ್‌ಗೆ ಬರದ ಅವರು ಯಾವುದಕ್ಕೂ ಕೊರತೆ ಮಾಡಲಿಲ್ಲ. ಕೊನೆಗೆ ಒತ್ತಾಯಕ್ಕಾಗಿ ಮೂರು ದಿನ ಸೆಟ್‌ಗೆ ಬಂದಿದ್ದರಷ್ಟೇ. ಇಂತಹ ನಿರ್ಮಾಪಕರು ಇಂಡಸ್ಟ್ರಿಗೆ ಬರಬೇಕು. “ರಗಡ್‌’ ಚೆನ್ನಾಗಿ ಬಂದಿದೆ ಪ್ರೇಕ್ಷಕರು ಒಪ್ಪಿ, ಅಪ್ಪಿಕೊಳ್ಳಬೇಕಷ್ಟೇ. ಒಂದು ಸಿನಿಮಾ ತಯಾರಿ ಸುಲಭವಲ್ಲ. ಇಲ್ಲಿ ಶ್ರಮ,ಶ್ರದ್ಧೆ,ಭಕ್ತಿ ಇರಬೇಕು. ಏನಾದರೂ ತಪ್ಪಿದ್ದರೆ ಕ್ಷಮಿಸಿ. ಆದರೂ, ಇದೊಂದು ದಾಖಲೆ ಇದ್ದಂತೆ ಒಂದು ಪುಸ್ತಕ ಹೇಗೋ ಹಾಗೆ. ಇದೂ ಕೂಡ. ಇಲ್ಲಿ ಎಲ್ಲರೂ ಅವರವರ ಪಾತ್ರ ಚೆನ್ನಾಗಿ ಮಾಡಿದ್ದಾರೆ’ ಅಂದರು ವಿನೋದ್‌.

ನಿರ್ದೇಶಕ ಶ್ರೀಮಹೇಶ್‌ಗೌಡ ಅವರಿಗೆ ಇದು ಮೊದಲ ಚಿತ್ರ. ಸುಮಾರು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಗಳನ್ನು ಇಲ್ಲಿ ಬಳಸಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಜವಾಬ್ದಾರಿಯೂ ಅವರದೇ. “ಇಲ್ಲಿ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. ಇಲ್ಲಿನ ಸುಂದರ ತಾಣಗಳಲ್ಲೇ ಚಿತ್ರೀಕರಣ ಮಾಡಿದ್ದೇವೆ. ಸಾಕಷ್ಟು ಹೊಸತನ ಇಲ್ಲಿದೆ. ಇದು 8 ಪ್ಯಾಕ್‌ಇರುವ ಕಾನ್ಸೆಪ್ಟ್. ಹಾಗಾಗಿ ಕನ್ನಡದಲ್ಲಿ 8 ಪ್ಯಾಕ್‌ ರಿಸ್ಕ್ ಯಾರು ತಗೋತ್ತಾರೆ ಎಂಬ ಪ್ರಶ್ನೆ ಬಂದಾಗ, ವಿನೋದ್‌ ಪ್ರಭಾಕರ್‌ ಉತ್ತರವಾದರು. ಅವರ ಬಳಿ 
ಹೋದಾಗ, ಸಿಕ್ಸ್‌ ಪ್ಯಾಕ್‌ ಮಾಡ್ತೀನಿ, 8 ಪ್ಯಾಕ್‌ ಟ್ರೈ ಮಾಡ್ತೀನಿ ಅಂದರು. 

ಕೊನೆಗೆ ಹತ್ತು ದಿನ ಟೈಮ್‌ ಕೊಡಿ ಅಂತ ಹೇಳಿ 8 ಪ್ಯಾಕ್‌ ಮಾಡಿದರು. ಅದು ಸಿನಿಮಾದ ಹೈಲೈಟ್‌ ಅಂದರು ಮಹೇಶ್‌ಗೌಡ.

ನಿರ್ಮಾಪಕ ಅರುಣ್‌ಕುಮಾರ್‌ ಅವರು ಏನೇ ಒಳ್ಳೆಯ ಕೆಲಸ ಮಾಡಿದರೂ ಅವರ ತಾಯಿಯನ್ನು ಕೇಳಿ ಮಾಡುತ್ತಾರಂತೆ. ಸಿನಿಮಾ ಮುನ್ನ ಅವರ ತಾಯಿ ಗ್ರೀನ್‌ಸಿಗ್ನಲ್‌ ಪಡೆದು ಮಾಡಿದ್ದಾರೆ. ಈಗ ಅವರಿಗೆ ತುಸು ಹೆಚ್ಚೇ ಖುಷಿ ಇದೆಯಂತೆ. ಚಿತ್ರಕ್ಕೆ ಅಭಿಮನ್‌ರಾಯ್‌ ಸಂಗೀತವಿದ್ದು, ಈಗಾಗಲೇ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಖುಷಿ ಇದೆ ಎಂದರು. ವಿನೋದ್‌ ಜೊತೆ ಕೆಲಸ ಮಾಡಿದ್ದು ವಿಶೇಷ ಎನ್ನುವ ಅಭಿಮಾನ್‌ರಾಯ್‌, ನನ್ನ ಹಿಂದಿನ ಹಾಡುಗಳಿಗಿಂತಲೂ ಇಲ್ಲಿ ಒಳ್ಳೆಯ ಹಾಡುಗಳು ಇವೆ. ಲೈಫ್ಟೈಮ್‌ ಗುರುತಿಸಿಕೊಳ್ಳುವ ಹಾಡು ಕೊಟ್ಟ ಹೆಮ್ಮೆ ಇದೆ ಎಂದರು.

ಜೈ ಆನಂದ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಚೈತ್ರಾರೆಡ್ಡಿ ನಾಯಕಿ ಉಳಿದಂತೆ ಡ್ಯಾನಿ ಕುಟ್ಟಪ್ಪ, ದೀಪಕ್‌ ಶೆಟ್ಟಿ, ರಾಜೇಶ್‌ ನಟರಂಗ, ಮಾಲತಿ ದೇಶ್‌ಪಾಂಡೆ ಇತರರು ನಟಿಸಿದ್ದಾರೆ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.