ಬದುಕು ಬದಲಿಸುವ ಈಜು ಹವ್ಯಾಸ


Team Udayavani, Jun 13, 2018, 4:06 PM IST

13-june-18.jpg

ದೇಹ, ಮನಸ್ಸಿನ ಆರೋಗ್ಯ ಕಾಪಾಡಲು ಈಜು ಒಂದು ಸರಳ ವಿಧಾನ. ಹವ್ಯಾಸವಾಗಿ ಇದರಲ್ಲಿ ತೊಡಗಿಸಿಕೊಂಡವರು ಮುಂದೆ ಇದನ್ನೇ ವೃತ್ತಿಯನ್ನಾಗಿಯೂ ಮಾಡಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಮಯ ಸಿಕ್ಕಾಗ ಈಜು ಕಲಿಯುವುದರಿಂದ ಭವಿಷ್ಯದಲ್ಲಿ ಇದು ನೆರವಿಗೆ ಬರುವುದು. ಈಜು ಕಲಿಯಲು ವಯಸ್ಸು, ಶಿಕ್ಷಣಾರ್ಹತೆಯ ಹಂಗಿಲ್ಲ. ಬೆಳಗ್ಗೆ ಅಥವಾ ಸಂಜೆ ಹೊತ್ತು ಒಂದರ್ಧ ಗಂಟೆ ನೀರಿನಲ್ಲಿ ಈಜುವ ಹವ್ಯಾಸ ರೂಪಿಸಿಕೊಳ್ಳುವುದು ನಮ್ಮ ಭವಿಷ್ಯವನ್ನೇ ಬದಲಿಸಬಲ್ಲದು.

ಉದ್ಯೋಗಾವಕಾಶ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ಉದ್ಯೋಗ ಪಡೆಯುವುದು ಕೂಡ ಸವಾಲಿನ ಕೆಲಸ. ಹೀಗಾಗಿ ವೃತ್ತಿಯನ್ನೇ ನಂಬಿಕೊಂಡು ಕೂರುವಂತಿಲ್ಲ. ಅದಕ್ಕಾಗಿ ಹವ್ಯಾಸಗಳನ್ನೇ ಪಾರ್ಟ್‌ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈಜು ಕಲಿಕೆಯೂ ಒಂದು ಹೊಸ ದಾರಿಯನ್ನು ತೋರಬಲ್ಲದು. 

ತರಬೇತುದಾರ
ಈಜು ಗೊತ್ತಿದ್ದರೆ ಸಾಕು. ತರಬೇತುದಾರರಾಗಿ ಸ್ವಂತ ವೃತ್ತಿಯನ್ನು ಮಾಡಿಕೊಳ್ಳಬಹುದು. ಹೆಡ್‌ ಸ್ವಿಮ್‌ ಕೋಚ್‌ ಡಿಗ್ರಿಯ ಅನಂತರ ಏನಾಗಬೇಕು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಫಿಸಿಕಲ್‌ ಎಜುಕೇಶನ್‌ ಬಗ್ಗೆ ತಿಳಿದುಕೊಂಡು ಡಿಗ್ರಿಯಲ್ಲಿ ಆ್ಯತ್ಲೆಟಿಕ್‌ ಕ್ರೀಡಾಪಟುವಾಗಿರುವವರು ಅನಂತರ ಹೆಡ್‌ ಸ್ವಿಮ್‌ ಕೋಚ್‌ ವೃತ್ತಿಗೆ ಟ್ರೈ ಮಾಡಬಹುದು.

ಅಸಿಸ್ಟೆಂಟ್‌ ಸ್ವಿಮ್ಮಿಂಗ್‌ ಕೋಚ್‌
ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಸಿಸ್ಟೆಂಟ್‌ ಸ್ವಿಮ್ಮಿಂಗ್‌ ಕೋಚ್‌ ಆಗಿ ಸೇರಿಕೊಳ್ಳಬಹುದು. ಇಲ್ಲಿ ಸ್ವಿಮ್ಮಿಂಗ್‌ ಬಗ್ಗೆ ಬೇಸಿಕ್‌ ಜ್ಞಾನವನ್ನು ಹೊಂದಿರಬೇಕು. ಪಾರ್ಟ್‌ ಟೈಮ್‌ ಆಗಿ ಕೆಲಸ ಮಾಡಬಹುದು. ವಾರದಲ್ಲಿ 20 ಗಂಟೆ ಕೆಲಸವಿರುತ್ತದೆ. ನೆಮ್ಮದಿಯ ಜತೆಗೆ ಹಣವನ್ನೂ ಸಂಪಾದಿಸಿಕೊಳ್ಳಬಹುದು. ಸತತ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟದ ಈಜುಪಟುವಾಗುವ ಕನಸನ್ನೂ ನನಸಾಗಿಸಬಹುದು.

ಹೆಡ್‌ ಸೀನಿಯರ್‌ ಕೋಚ್‌
ಸೀನಿಯರ್‌ ಕೋಚ್‌ಗಳಿಗೆ ಹೆಡ್‌ ಸೀನಿಯರ್‌ ಕೋಚ್‌ ಆಗಿಯೂ ವೃತ್ತಿ ನಿರ್ವಹಿಸಬಹುದು.

ತರಬೇತಿ ಕೇಂದ್ರಗಳು
ಮಂಗಳೂರು ಭಾಗದಲ್ಲಿ ಹಲವು ಸ್ವಿಮ್ಮಿಂಗ್‌ ತರಬೇತಿ ಕೇಂದ್ರಗಳಿವೆ. ನಗರಕ್ಕೆ ಹತ್ತಿರವಾಗಿ ಶ್ರೀನಿವಾಸ ನಗರ, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ತರಬೇತಿ ನೀಡಲಾಗುತ್ತದೆ.

ಅಶೋಕನಗರದ ಕೋಡಿಕಲ್‌ನಲ್ಲಿ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 9 ಗಂಟೆಯವರೆಗೆ ತರಬೇತಿಗಳನ್ನು ನೀಡಲಾಗುತ್ತದೆ.

ಲೇಡಿಹಿಲ್‌ ಬಳಿಯಲ್ಲಿ ಫೆರ್ರೀ ರೋಡ್‌ ಬಳಿಯೂ ಸ್ವಿಮ್ಮಿಂಗ್‌ ತರಬೇತಿ ಕೇಂದ್ರಗಳಿವೆ. ಸ್ವಿಮ್ಮಿಂಗ್‌ಗೆ ಸಂಬಂಧಿಸಿದ ಸರ್ಟಿಫಿಕೇಟ್‌ ಕೋರ್ಸ್‌ಗಳು ಇವೆ. ಈ ಬಗ್ಗೆ ಆನ್‌ಲೈನ್‌ ಅಥವಾ ತರಬೇತಿ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು. 

ಹಲವು ಪ್ರಯೋಜನ 
· ಕಲುಷಿತ ವಾತಾವರಣ ಹೆಚ್ಚಿನವರಲ್ಲಿ ಉಸಿರಾಟದ ತೊಂದರೆಯನ್ನುಂಟು ಮಾಡುತ್ತಿದೆ. ಇದರ ನಿವಾರಣೆಗೆ ಔಷಧಗಳಿಗೇ ಮೊರೆಹೋಗಬೇಕಿಲ್ಲ. ನೀರಿನಲ್ಲಿ ಈಜುವ ಅಭ್ಯಾಸ ಮಾಡಿಕೊಂಡರೆ ತನ್ನಿಂತಾನೇ ಉಸಿರಾಟದ ತೊಂದರೆ ನಿವಾರಣೆಯಾಗುವುದು.

· ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಈಜು ಸಹಕಾರಿ. ಇದರಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗುವುದು. ಮಾತ್ರವಲ್ಲದೆ ಫಿಟ್ನೆಸ್ ಕಾಪಾಡಲು ಇದು ನೆರವಾಗುತ್ತದೆ.

· ನಿತ್ಯವು ಎದ್ದ ಕೂಡಲೇ ಈಜಾಡುವ ಅಭ್ಯಾಸ ಮಾಡಿದರೆ ದೇಹ, ಮನಸ್ಸು ಉಲ್ಲಸಿತವಾಗುತ್ತದೆ. ದಿನ ಪೂರ್ತಿ ಚುರುಕಾಗಿ ಕೆಲಸ ಮಾಡಬಹುದು. ಮಾನಸಿಕ ಒತ್ತಡ ನಿವಾರಣೆಯಾಗುವುದು ಮಾತ್ರವಲ್ಲದೆ ನಿದ್ದೆಯ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು. 

ಶ್ರುತಿ ನೀರಾಯ

ಟಾಪ್ ನ್ಯೂಸ್

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.