ಬದುಕು ಬದಲಿಸುವ ಜಾದೂ


Team Udayavani, Oct 3, 2018, 1:14 PM IST

3-october-12.gif

ಎಲ್ಲರಿಗೂ ಮನಸ್ಸಿನಲ್ಲಿ ನಾನೂ ಜಾದೂಗಾರನಾಗಬೇಕು ಎಂಬ ಹಂಬಲ ಇರುತ್ತದೆ. ಈ ಕಣ್ಣುಕಟ್ಟು ವಿದ್ಯೆಗೆ ಬೇಗನೆ ಮರುಳಾಗುವುದು ಸಹಜ. ಈ ವೃತ್ತಿಯಲ್ಲಿನ ವೈಶಿಷ್ಟ್ಯವೇ ಕ್ರಿಯಾಶೀಲತೆ. ಪ್ರತಿ ಸೆಕೆಂಡು ಕೂಡ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಜಾದೂ ವಿದ್ಯೆಯನ್ನು ಒಲಿಸಿದರೆ ಸಮಾಜವನ್ನು ಈ ಮಂತ್ರ ಲೋಕದಲ್ಲಿಟ್ಟುಕೊಳ್ಳಬಹುದು.

ಪ್ರಖ್ಯಾತ ಮಾಂತ್ರಿಕರಾದ ಕುದ್ರೋಳಿ ಗಣೇಶ್‌, ರಾಜೇಶ್‌ ಮಳಿ, ರಮೇಶ್‌ ಬಾಬು ಹೆಸರು ಕೇಳಿದಾಕ್ಷಣ ಅವರ ಜಾದೂ ಶೋ ನೋಡಲು ಹೋಗುವ ಎನ್ನುವ ತವಕವಾಗುವುದು ಸಹಜ. ಸಮಯ ಹಾಗೂ ಕೆಲವೊಂದು ಕಣ್ಣುಕಟ್ಟು ವಿದ್ಯೆಯಿಂದ ಮಂತ್ರಗಳಿಂದ ನೆರೆದವರ ಸುಲಭವಾಗಿ ಮೋಸ ಮಾಡುವುದು ಇಲ್ಲಿ ಬಂಡವಾಳ. ಮಾತ್ರವಲ್ಲದೆ ಸಮಯ ಹಾಗೂ ಕ್ರಿಯಾಶೀಲತೆ ಇಲ್ಲಿನ ಮುಖ್ಯ ಅಂಶವಾಗಿರುತ್ತದೆ.

ಶಿಕ್ಷಣದ ಜತೆಜತೆಗೆ ಈ ವಿದ್ಯೆಯನ್ನು ಕಲಿತರೆ ಮುಂದೆ ವೇದಿಕೆಯ ಮೇಲೆ ಚೂಮಂತರ್‌ ಮಾಡುತ್ತಾ ಎಲ್ಲರ ಗಮನವನ್ನು ನಮ್ಮ ಮೇಲೆ ಇಡುವಂತೆ ಮಾಡಬಹುದು. ಶಿಕ್ಷಣದ ಜತೆಗೆ ಆಸಕ್ತಿ ಇದ್ದಲ್ಲಿ ಈ ಜಾದೂ ವಿದ್ಯೆಯನ್ನು ಕಲಿಯಬಹುದು. ಇದರಲ್ಲಿ ಸಾಕಷ್ಟು ಅವಕಾಶಗಳಿವೆ.

ಜಾದೂ ತರಗತಿಗಳು
ಜಾದೂ ತರಗತಿಯನ್ನು ಎಲ್ಲೆಡೆಯೂ ನೀಡುವುದಿಲ್ಲ. ಆದರೆ ಕೆಲವೆಡೆ ಇದನ್ನು ಕಲಿಸುತ್ತಾರೆ. ಕಾಲೇಜು ಶಿಕ್ಷಣದ ರೀತಿ ಇದರ ಅಭ್ಯಾಸ ಅಲ್ಲದಿದ್ದರೂ ಇದರಲ್ಲಿ ಕಲಿಯುವಂತಹ ಹಲವಾರು ಅಂಶಗಳು ನಮ್ಮ ಪಠ್ಯ ಕಲಿಕೆಗಿಂತಲೂ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಈ ಜಾದೂವಿನಲ್ಲಿ ಸಣ್ಣ ವಯಸ್ಸಿನವರಿಗೆ ಒಳ್ಳೆಯ ಭವಿಷ್ಯವಿದೆ.

ಸದಾ ಅವಕಾಶಗಳು
ಜಾದೂಗಾರನಿಗೆ ಅವಕಾಶಗಳು ಹಲವಾರು ಇವೆ. ಕೇವಲ ಹಣ ಸಂಪಾದನೆಯೊಂದೇ ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ ಈಗ ನಡೆಯತ್ತಿರುವ ಡ್ರಗ್ಸ್‌ ವಿರೋಧಿ ಜಾದೂ ಶೋಗಳನ್ನು ಮಾಡುವುದು, ಸಾಮಾಜಿಕ ಜಾಗೃತಿಗಳನ್ನು ಮೂಡಿಸುವ ಮೂಲಕ ಕೆಲವೊಂದು ಕಾರ್ಯಕ್ರಮಗಳಿಗೆ ಬ್ರ್ಯಾಂಡ್‌ ಅಂಬಾಸಿಡರ್‌ ಕೂಡ ಆಗಬಹುದು. ಒಟ್ಟಿನಲ್ಲಿ ಕಲಿಯುವ ಆಸಕ್ತಿಯಿದ್ದರೆ ಏನನ್ನೂ ಬೇಕಾದರೂ ಕಲಿಯಬಹುದು ಹಾಗೂ ಶಿಕ್ಷಣದ ಜತೆಗೆ ಇಂತಹ ಹಲವು ವಿದ್ಯೆಗಳನ್ನು ಕಲಿತರೆ ಭವಿಷ್ಯದಲ್ಲಿ ಇದರಲ್ಲೂ ಫ‌ುಲ್‌ಟೈಮ್‌ ಅಥವಾ ಪಾರ್ಟ್‌ ಟೈಮ್‌ ತೊಡಗಿಸಿಕೊಳ್ಳಬಹುದು.

ಮಾಂತ್ರಿಕನ ವಿಶೇಷತೆ
ಒಳ್ಳೆಯ ಗುರುವಿನ ಜತೆಗೆ ಒಳ್ಳೆಯ ವಾಕ್ಚಾತುರ್ಯ, ಕೆಲವು ಕಣ್ಣುಕಟ್ಟು ವಿದ್ಯೆಗಳು, ಸಮಯ ಪ್ರಜ್ಞೆ, ಜಾದೂ ಸಂಬಂಧಿ ವಸ್ತುಗಳು ಹಾಗೂ ಜನರನ್ನು ತನ್ನತ್ತ ಸೆಳೆಯುವ ನೈಪುಣ್ಯತೆ, ಕ್ರಿಯಾಶೀಲತೆ ಜತೆಗೆ ಕೆಲವು ವಿಜ್ಞಾನದ ಪ್ರಯೋಗಗಳನ್ನು ತಿಳಿದರೆ ಜಾದೂಗಾರನಾಗುವುದು ಸುಲಭ. 

 ಭರತ್‌ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.