ವಿದ್ಯೆಯನ್ನು ಧಾರೆ ಎರೆಯುವ ಟ್ಯೂಶನ್ ಕ್ಲಾಸ್
Team Udayavani, Nov 21, 2018, 1:16 PM IST
ಕೆಲವು ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜಿನಲ್ಲಿ ಕಲಿಸುವ ವಿದ್ಯೆ ತಲೆಗೆ ಹತ್ತುವುದಿಲ್ಲ. ಅದಕ್ಕೋಸ್ಕರ ಅವರ ಹೆತ್ತವರು ಪ್ರತಿ ನಿಮಿಷ ಮನೆಯಲ್ಲಿ ಓದು ಎನ್ನುತ್ತಾ ಎಚ್ಚರಿಸುತ್ತಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಬ್ರಿಲಿಯೆಂಟ್, ರ್ಯಾಂಕ್ ಸ್ಟುಡೆಂಟ್ ಗಳಾಗಿರುತ್ತಾರೆ. ಯಾವುದೇ ವಿಷಯವು ಒಂದು ಬಾರಿ ಓದಿದಾಕ್ಷಣ ನೆನಪುಳಿಯುತ್ತದೆ. ಅಂತಹವರು ಮುಂದೆ ಉನ್ನತಶಿಕ್ಷಣ ಮಾಡುತ್ತಾರೆ. ಆದರೆ ಇದರ ಜತೆ ಜತೆಗೆ ಶಾಲಾ ಮಕ್ಕಳಿಗೆ ಟ್ಯೂಶನ್ ಮಾಡುವುದರಿಂದ ಮಕ್ಕಳಿಗೆ ಸರಳವಾಗಿ ವಿದ್ಯೆಯನ್ನು ನೀಡಬಹುದು.
ಹೌದು, ಶಿಕ್ಷಣದಲ್ಲಿ ವಿಷಯಗಳು ಹೆಚ್ಚಾಗುತ್ತಿದ್ದು ಕೆಲವು ವಿದ್ಯಾರ್ಥಿಗಳಿಗೆ ಇವೆಲ್ಲವನ್ನು ಅರಗಿಸಿಕೊಳ್ಳುವ ಜ್ಞಾನ ಶಕ್ತಿ ಇರುವುದಿಲ್ಲ. ಅದಕ್ಕೆ ಹೆತ್ತವರು ಕೋಚಿಂಗ್ ಕ್ಲಾಸ್ಗಳ ಮೊರೆ ಹೋಗುತ್ತಾರೆ. ಆದರೆ ಅದು ಕೂಡ ಎಲ್ಲ ಹೆತ್ತವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಶಾಲಾ ಫೀಸ್ಗಿಂತಲೂ ಇಲ್ಲಿ ಅಧಿಕ ಹಣ ನೀಡಬೇಕಾಗುತ್ತದೆ. ಈ ಕಾರಣಕ್ಕಾಗಿ ಡಿಗ್ರಿ, ಪಿಜಿ ಅಥವಾ ಪಿಯುಸಿ ಮುಗಿಸಿದ ವಿದ್ಯಾವಂತ ಮಕ್ಕಳು ತಮ್ಮ ಶಿಕ್ಷಣದ ಜತೆಗೆ ಇಂತಹ ಸಣ್ಣ ಟ್ಯೂಶನ್ ಕ್ಲಾಸ್ ಗಳನ್ನು ಮಾಡಿದರೆ ವಿದ್ಯಾರ್ಥಿಗಳಿಗೂ ತಮ್ಮ ಪಾಠವನ್ನು ಸುಲಭವಾಗಿ ಕಲಿಯಬಹುದು ಜತೆಗೆ ಟ್ಯೂಶನ್ ನೀಡುವ ವಿದ್ಯಾವಂತರು ತಾವು ಕಲಿತ ವಿದ್ಯೆಯನ್ನು ಧಾರೆ ಎರೆಯುವಂತೆ ಆಗುತ್ತದೆ. ಜತೆಜತೆಗೆ ಸಂಭಾವನೆಯನ್ನು ಪಡೆಯಬಹುದು.
ವೃತ್ತಿ ಕೆಲಸ
ಕೆಲವೊಂದು ಜಾಣ್ಮೆಯ ವಿದ್ಯೆಯಾದ ಯೋಚಿಸಿ ಅವರನ್ನು ಕಲಿಯುವಂತೆ ಮಾಡುವ ಹಾಗೂ ಸ್ಪರ್ಧೆಯನ್ನು ಎದುರಿಸಲು ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಈ ಟ್ಯೂಶನ್ ತರಗತಿ ಮುಂದೆ ವೃತ್ತಿ ಕೆಲಸವನ್ನು ಮಾಡಲು ಅವಕಾಶವನ್ನೂ ನೀಡಬಹುದು. ವಿದ್ಯಾಭ್ಯಾಸದ ಅನಂತರ ಡಿ.ಎಡ್ ಅಥವಾ ಬಿ.ಎಡ್., ನೆಟ್, ಸೆಟ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ವೃತ್ತಿ ಜೀವನಕ್ಕೆ ಕಾಲಿರಿಸಬಹುದು.
ವಿದ್ಯಾವಂತರಿಗೆ ತಾವು ಕಲಿತ ವಿದ್ಯೆ ಮರೆತು ಹೋಗದಂತೆ ಇರುವುದಕ್ಕೆ ಟ್ಯೂಶನ್ ಸಹಕಾರಿಯಾದರೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ಹೇಳಿಕೊಟ್ಟ ವಿದ್ಯೆ ಕೈ ಹಿಡಿಯುವುದು ಮತ್ತೊಂದು ಸತ್ಯ. ತಮ್ಮ ಶಿಕ್ಷದ ಜತೆಗೆ ಪಾರ್ಟ್ ಟೈಮ್ ರೀತಿಯಲ್ಲಿ ಟ್ಯೂಶನ್ ಕ್ಲಾಸ್ ಅನ್ನು ಮನೆಯಲ್ಲೇ ನೀಡಬಹುದು. ಇದರಿಂದ ಸಂಪಾದನೆಗೆ ಒಂದು ದಾರಿಯೂ ಆಗುತ್ತದೆ. ಜತೆಗೆ ಸಮಾಜದಲ್ಲಿ ಒಳ್ಳೆಯ ಹೆಸರನ್ನೂ ಸಂಪಾದಿಸಬಹುದು. ಒಟ್ಟಿನಲ್ಲಿ ಕಲಿತ ವಿದ್ಯೆ ಕೈ ಬಿಡಲಾರದು ಎನ್ನುವಂತೆ ನಾವು ಕಲಿತ ವಿದ್ಯೆ, ವಿಷಯವನ್ನು ಗೊತ್ತಿಲ್ಲದ ಇನ್ನೊಬ್ಬರಿಗೆ ತಿಳಿಸುವುದರಿಂದ ನಮಗೇನೂ ನಷ್ಟವಿಲ್ಲ. ಜತೆಗೆ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.
ವಿಷಯ ಜ್ಞಾನ ಅಗತ್ಯ
ಎಸೆಸೆಲ್ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳಿಗೆ ಕೆಲವೊಂದು ಕಠಿನ ವಿಷಯಗಳೆಂದು ಎನಿಸುವ ವಿಜ್ಞಾನ, ಗಣಿತ, ಭಾಷೆಗಳ ಕುರಿತು ಅತ್ಯಂತ ಸರಳೀಕರಿಸಿ ಮನದಟ್ಟು ಮಾಡುವ ರೀತಿ ಕ್ರಿಯಾಶೀಲತೆಯನ್ನು ತೋರಿಸುವುದು ಬಹುಮುಖ್ಯ. ಅರ್ಥವಾಗ ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಸಿ ಸ್ಪಷ್ಟವಾಗಿ, ಸೂಕ್ಷ್ಮವಾಗಿ ಬೇರೆ ನೋಟ್ಸ್ಗಳನ್ನು ನೀಡಿ, ಉದಾಹರಣೆ, ಪ್ರಯೋಗಗಳೊಂದಿಗೆ ಅವರಲ್ಲಿನ ಗೊಂದಲಗಲನ್ನು ನಿವಾರಿಸುವುದು ಮುಖ್ಯವಾಗಿರುತ್ತದೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ