ಅರ್ಥಮಾಡುವವರಿಗಾಗಿ ಮನಃಶಾಸ್ತ್ರ


Team Udayavani, Dec 5, 2018, 12:52 PM IST

5-december-9.gif

ನಾವು ನಮ್ಮನ್ನು ಅರ್ಥೈಸುವುದು, ಇನ್ನೊಬ್ಬರನ್ನು ಅರ್ಥಮಾಡುವುದು ವಿಶೇಷವೇ. ಹಾವ-ಭಾವ, ವರ್ತನೆ ಯೋಚನಾ ಕ್ರಮಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಲಿಕಾ ಹಂತದಲ್ಲಿಯೇ ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವನೆ, ತೊಳಲಾಟ, ಆತಂಕ ಮುಂತಾದವುಗಳನ್ನು ಕಂಡು ಹಿಡಿದು ಅದನ್ನು ಎದುರಿಸಲು ಕಲಿಸಿಕೊಡುವುದನ್ನು ಈ ವಿದ್ಯೆ ತಿಳಿಸುತ್ತದೆ. ಈ ಶಿಕ್ಷಣ ಕಲಿಕೆಗೆ ವಿದ್ಯಾರ್ಥಿಗಳು ಆಸಕ್ತರಾಗುತ್ತಿರುವುದು ಗಮನಾರ್ಹ ಸಂಗತಿ.

ಗುರುಕುಲ ಶಿಕ್ಷಣ ಪದ್ಧತಿಯಿಂದ ಹಿಡಿದು ಮೆಕಾಲೆ ಶಿಕ್ಷಣ ಪದ್ಧತಿಯವರೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿವೆ. ಎಷ್ಟೆಂದರೆ ಕೇವಲ ಕೆಲವೇ ಕೆಲವು ಕೋರ್ಸ್‌ಗಳನ್ನು ಮಾತ್ರ ಪಡೆದುಕೊಳ್ಳಲು ಅವಕಾಶವಿದ್ದ ಜಾಗದಲ್ಲಿ ಹಲವಾರು ಹೊಸ ಹೊಸ ರೀತಿಯ ಕೋರ್ಸ್‌ಗಳು ಹುಟ್ಟಿಕೊಂಡು ಶೈಕ್ಷಣಿಕ ಕ್ರಾಂತಿಯೇ ಕಳೆದ ಕೆಲ ದಶಕಗಳಿಂದ ನಡೆದು ಹೋಗಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ರಂಗದ ಕಲಿಕೆಯಲ್ಲಿ ವಿಪುಲ ಅವಕಾಶವನ್ನೂ ಶಿಕ್ಷಣ ರಂಗ ದೊರಕಿಸಿಕೊಟ್ಟಿದೆ.

ಮಾನವನ ಮನಸ್ಸನ್ನು ಅರ್ಥ ಮಾಡಿಕೊಂಡು ಅವನನ್ನು ಸದೃಢನಾಗಿ ರೂಪಿಸುವಲ್ಲಿ ಮನಃ ಶಾಸ್ತ್ರ ಶಿಕ್ಷಣ ಕಲಿಕೆ ಪ್ರಾಮುಖ್ಯತೆಗೆ ಬರುತ್ತದೆ. ಇತ್ತೀಚೆಗಂತೂ ಮನಃಶಾಸ್ತ್ರಜ್ಞರ ಸಂಖ್ಯೆ ಬಹಳ ಅಗತ್ಯವಿದ್ದು, ಆ ಕೋರ್ಸ್‌ ಕಲಿಕೆಗೆ ಬೇಡಿಕೆಯೂ ಅಧಿಕಗೊಳ್ಳುತ್ತಿದೆ. ಒಂದು ಕಾಲದಲ್ಲಿ ಬೇಡಿಕೆ ಕಡಿಮೆ ಎಂಬ ಮಾತ್ರಕ್ಕೆ ಮನಃಶಾಸ್ತ್ರ ಕಲಿಕೆಯಿಂದ ಹಿಂದಡಿ ಇಡುತ್ತಿದ್ದವರು, ಪ್ರಸ್ತುತ ಅದರ ಮಹತ್ವವನ್ನು ಅರಿತು ಮನಃಶಾಸ್ತ್ರ ಕಲಿಕೆಗೆಂದೇ ಬೇಡಿಕೆ ಇಡುತ್ತಿದ್ದಾರೆ.

ಹೆಚ್ಚಿದ ಬೇಡಿಕೆ
ಒತ್ತಡದ ಬದುಕು, ಮನುಷ್ಯನನ್ನು ಜೀವಂತ ಕೊಲ್ಲುತ್ತಿರುವ ಸಿಟ್ಟು, ಕೀಳರಿಮೆ, ಭಯ ಮುಂತಾದವುಗಳಿಂದ ಮುಕ್ತಿ ಹೊಂದಿ ಸಶಕ್ತ ಜೀವನ ನಿರೂಪಿಸಿಕೊಳ್ಳುವುದಕ್ಕೆ ಮನಃಶಾಸ್ತ್ರಜ್ಞರ ಸಲಹೆ- ಮಾರ್ಗದರ್ಶನ ಅಗತ್ಯ. ಈಗಿನ ಆಧುನಿಕ ಜೀವನ ಶೈಲಿಯ ಒತ್ತಡದಿಂದ ಬಿಡುಗಡೆ ಪಡೆಯುವುದೇ ಒಂದು ಸವಾಲು. ಒತ್ತಡದಿಂದಾಗಿಯೇ ಮಾನಸಿಕ ದೃಢತೆ ಕಳೆದುಕೊಂಡು ಸಿಟ್ಟು, ಭಯ ಮುಂತಾದವುಗಳಿಗೆ ಒಳಗಾಗಿ ಶಾಶ್ವತ ಮನೋವೈಕಲ್ಯಕ್ಕೊಳಗಾದ ಮಂದಿಯೂ ಹೆಚ್ಚುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನಃಶಾಸ್ತ್ರಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯವೂ ಆಗಿದೆ. ಹೆಚ್ಚಿದ ಬೇಡಿಕೆ ಮತ್ತು ಕಲಿಕಾಸಕ್ತಿಯ ಕಾರಣಕ್ಕಾಗಿ ಮನಃಶಾಸ್ತ್ರ ಶಿಕ್ಷಣ ಅಗತ್ಯವಾಗುತ್ತಿದೆ.

ಯಾರೂ ಕಲಿಯಬಹುದು
ಮನಃಶಾಸ್ತ್ರ ಕಲಿಕೆ ಕೇವಲ ವಿಜ್ಞಾನ ವಿದ್ಯಾರ್ಥಿಗಳಿಗೆ ಮೀಸಲಾಗಿಲ್ಲ. ವಾಣಿಜ್ಯ ಅಥವಾ ಕಲಾ ವಿದ್ಯಾರ್ಥಿಗಳೂ ಸುಲಭವಾಗಿ ಕಲಿಯುವ ವಿದ್ಯೆ ಮನಃಶಾಸ್ತ್ರ. ಕಲಿಕೆ ವೈಜ್ಞಾನಿಕ ತಳಹದಿಯಲ್ಲಿದ್ದರೂ, ಆಸಕ್ತಿ ಹೊಂದಿರುವ ಯಾವುದೇ ವಿದ್ಯಾರ್ಥಿಗೂ ಈ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಕಲಿಕಾ ಹಂತದಲ್ಲಿಯೇ ಇನ್ನೊಬ್ಬರ ಮನಸ್ಸಿನಲ್ಲಿರುವ ಭಾವನೆ, ತೊಳಲಾಟ, ಆತಂಕ ಮುಂತಾದವುಗಳನ್ನು ಕಂಡು ಹಿಡಿದು ಅದನ್ನು ಎದುರಿಸಲು ಕಲಿಸಿಕೊಡುವುದನ್ನು ಈ ವಿದ್ಯೆ ತಿಳಿಸುತ್ತದೆ. ಜೀವನದ ಹಂತಗಳಲ್ಲಿ ವ್ಯಕ್ತಿಯಲ್ಲಾಗುವ ಬದಲಾವಣೆಗಳು ಮತ್ತು ಅವನ್ನು ಹೀಗೆ ನಿಭಾಯಿಸಬೇಕು ಎಂಬುದು ಪ್ರಾಥಮಿಕ ಹಂತದಲ್ಲಿಯೇ ತಿಳಿಯುತ್ತದೆ.

ಅಗಾಧ ಅವಕಾಶ
ಒಂದು ಮಾಹಿತಿ ಪ್ರಕಾರ ದೇಶದ ಸುಮಾರು 300 ವಿಶ್ವ ವಿದ್ಯಾನಿಲಯಗಳಲ್ಲಿ ಮನಃಶಾಸ್ತ್ರ ಕೋರ್ಸ್‌ ಕಲಿಸಲಾಗುತ್ತಿದೆ. ಕೆಲ ಕಾಲೇಜುಗಳಲ್ಲಿ ಪಿಯುಸಿಯಲ್ಲೇ ಮನಃಶಾಸ್ತ್ರ ಕಲಿಕೆಗೆ ಅವಕಾಶವಿದೆ. ಇನ್ನು ಕೆಲವೆಡೆ ಪದವಿ ಹಂತದಿಂದ ಈ ಕೋರ್ಸ್‌ ಲಭ್ಯವಿದೆ. ಮನಃ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಬಳಿಕ ಪಿಎಚ್‌ಡಿ, ಉಪನ್ಯಾಸ ವೃತ್ತಿಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೆ ಸ್ವಂತ ಕ್ಲಿನಿಕ್‌ ಆರಂಭಿಸಿ ವೈದ್ಯರಾಗಿಯೂ ಸೇವೆ ಸಲ್ಲಿಸಬಹುದು. ಆದರೆ ಹೀಗೆ ಸ್ವಂತ ಕ್ಲಿನಿಕ್‌ ತೆರೆಯುವ ಮುನ್ನ ಒಂದಷ್ಟು ವರ್ಷ ಕಾಲ ನುರಿತ ವೈದ್ಯರೊಂದಿಗೆ ಸಹಾಯಕರಾಗಿ ಅಥವಾ ಇಂಟರ್ನ್ಶಿಪ್‌ ಮಾದರಿಯಲ್ಲಿ ಸೇವೆ ಸಲ್ಲಿಸುವುದು ಅವಶ್ಯ. ಏಕೆಂದರೆ ಮಾನಸಿಕ ರೋಗಿಯೊಬ್ಬನಿಗೆ ಯಾವ ರೀತಿಯ ಚಿಕಿತ್ಸೆಗಳನ್ನು ಹೇಗೆ ನೀಡಬೇಕು, ಅವನನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪಾಲಿಸಬೇಕಾದ ನಿಯಮಗಳು ಮತ್ತು ಒಬ್ಬ ವೈದ್ಯನಾಗಿ ಒಬ್ಬ ರೋಗಿಯೊಂದಿಗಿನ ವ್ಯವಹಾರ ಹೇಗಿರಬೇಕು ಮುಂತಾದವುಗಳನ್ನು ಕಲಿತುಕೊಳ್ಳಲು ಇದು ಸಹಕಾರಿಯಾಗುತ್ತದೆ. ವ್ಯಕ್ತಿಯ ಇಡೀ ಜೀವನವನ್ನೇ ಬದಲಾಯಿಸುವ ಶಕ್ತಿ ಮನಃಶಾಸ್ತ್ರಕ್ಕಿರುವುದರಿಂದ ಈ ವೈದ್ಯರ ಸೇವೆ ಇತರೆಲ್ಲ ಸೇವೆಗಳಿಗಿಂತ ತುಸು ಅಧಿಕವೇ. ಬೇಡಿಕೆ ಹೆಚ್ಚುತ್ತಿರುವುದರಿಂದ ವಿವಿಧ ಆಸ್ಪತ್ರೆಗಳಲ್ಲಿಯೂ ವೈದ್ಯರ ನೇಮಕಾತಿಗಳು ನಡೆಯುವುದರಿಂದ ಅಲ್ಲೂ ಚಾನ್ಸ್‌ ಗಿಟ್ಟಿಸಿಕೊಳ್ಳಬಹುದು. 

ಅವಿಭಾಜ್ಯ ಅಂಗ
ಒಂದು ಕಾಲದಲ್ಲಿ ಮನಃಶಾಸ್ತ್ರ ಮತ್ತು ಅದರ ಉಪಯೋಗ ಬಲ್ಲದವರೇ ಹೆಚ್ಚಿದ್ದರು. ಆದರೆ ಪ್ರಸ್ತುತ ವೇಗದ ಬದುಕಿನಲ್ಲಿ ಮನಃಶಾಸ್ತ್ರ ಎಂಬುದು ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಮಕ್ಕಳಲ್ಲಿ ಆದ ಬದಲಾವಣೆಗಳನ್ನು ಕಂಡು ಚಿಂತಿತರಾಗುವ ಪೋಷಕರು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಆತಂಕಗೊಳ್ಳುವ ಶಿಕ್ಷಕರು, ವಿಪರೀತ ಕೆಲಸಗಳಿಂದಾಗಿ ಮಾನಸಿಕ ಸಮಸ್ಯೆಗೆ ಒಳಗಾಗುವ ಉದ್ಯೋಗಿಗಳು..ಹೀಗೆ ಜೀವನದ ಹಲವಾರು ಹಂತಗಳಲ್ಲಿ ಈ ಮಾನಸಿಕ ಸಮಸ್ಯೆ ಕಾಡುತ್ತಲೇ ಇರುತ್ತದೆ. ಇವುಗಳನ್ನು ಹತೋಟಿಗೆ ತರಲು ಮನಃಶಾಸ್ತ್ರದ ಆವಶ್ಯಕತೆ ಬಹಳವಾಗಿದೆ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.