ಸಂಶೋಧನ ಕ್ಷೇತ್ರದಲ್ಲಿ ಅವಕಾಶಗಳು ಅಪಾರ 


Team Udayavani, Dec 12, 2018, 12:30 PM IST

12-december-8.gif

. ವಿಜ್ಞಾನ ಕ್ಷೇತ್ರದಲ್ಲಿ ಅವಕಾಶಗಳು ಹೇಗಿವೆ? ಇದರ ಸದ್ಬಳಕೆ ಹೇಗಿದೆ?
ವಿಜ್ಞಾನ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಈಗ ಅವಕಾಶಗಳು ಜಾಸ್ತಿ ಇವೆ. ಈ ಕ್ಷೇತ್ರದ ವ್ಯಾಪ್ತಿ ಅಗಾಧವಾಗಿರುವುದೇ ಇದಕ್ಕೆ ಕಾರಣ. ಒಂದು ಕ್ಷೇತ್ರದಲ್ಲಿ ಪರಿಣತಿ ಹೊಂದಿದವರು ಇನ್ನೊಂದು ಕ್ಷೇತ್ರದಲ್ಲಿ ಅಷ್ಟೇ ಮಟ್ಟಿನ ಪರಿಣತಿ ಪಡೆಯುವ ಮತ್ತು ಸಂಶೋಧಾನಾತ್ಮಕವಾಗಿ ತೊಡಗಿಸಿಕೊಳ್ಳುವ ಅವಕಾಶಗಳು ಈಗ ಹೆಚ್ಚಿವೆ.

. ಇಂದಿನ ವಿದ್ಯಾರ್ಥಿಗಳಲ್ಲಿ ಸಂಶೋಧನ ಆಸಕ್ತಿ ಕಡಿಮೆಯಾಗಿದೆ ಎನಿಸುತ್ತಿಲ್ಲವೇ?
ಖಂಡಿತಾ ಇಲ್ಲ. ಆದರೆ ಸಂಶೋಧನೆ ಮಾಡಿದ ಮೇಲೆ ಮುಂದೇನು ಎಂಬ ಯೋಚನೆ ಇದೆ. ಈಗ ಸಂಶೋಧನೆ ಮಟ್ಟವೂ ಅಷ್ಟೇ ಎತ್ತರಕ್ಕೆ ಬೆಳೆದಿರುವುದರಿಂದ ಸ್ಪರ್ಧೆ ಮತ್ತು ಸವಾಲುಗಳು ಹೆಚ್ಚಿವೆ. ಅದಕ್ಕೆ ಬೇಕಾಗುವ ಯಂತ್ರ, ಅನುಕೂಲತೆಗಳನ್ನು ವಿಶ್ಲೇಷಿಸಿಕೊಂಡು ಮುಂದುವರಿಯಬೇಕಿದೆ.

. ಭಾರತದಲ್ಲಿ ಸಂಶೋಧನ ಕ್ಷೇತ್ರದಲ್ಲಿನ ಸವಾಲು- ಸಾಧ್ಯತೆಗಳೇನು?
ನಮ್ಮ ದೇಶದಲ್ಲಿ ಎಲ್ಲ ಸಂಶೋಧನೆಗಳಿಗೆ ಬೇಕಾದ ಪೂರಕ ವಾತಾವರಣ ಮೂಡಿಸಬೇಕಾದರೆ ವೆಚ್ಚವೂ ಹೆಚ್ಚು. ಸಂಶೋಧನಾ ವಿದ್ಯಾರ್ಥಿಗಳಿಗೆ ಅವಕಾಶಗಳು ನಮ್ಮದೇ ದೇಶದಲ್ಲಿ ಸಿಗುತ್ತದೆ ಎಂಬುದೂ ಕಷ್ಟ. ಅದರಿಂದ ಅವರು ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದೆ. ಎಲ್ಲ ಉಪಕರಣಗಳು ನಮ್ಮಲ್ಲಿ ಇಲ್ಲದ ಕಾರಣ ಹೊಂದಿಸಿಕೊಳ್ಳಲು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮೇಕ್‌ ಇನ್‌ ಇಂಡಿಯಾ, ಇನ್‌ಕ್ಯುಬೇಶನ್‌ ಸೆಂಟರ್‌, ಇನ್‌ಸ್ಪೈರ್‌ ಅವಾರ್ಡ್‌ ಮುಂತಾದ ಯೋಜನೆಗಳು ಯಶಸ್ವಿಯಾದರೆ ನಮಗೆ ಬೇಕಾದ ಮಟ್ಟದ ವಿದ್ಯಾರ್ಥಿಗಳು ಮುಂದೆ ಸಿಗಬಹದು.

. ಅವಕಾಶಗಳ ಕೊರತೆಯಿಂದಾಗಿ ಸ್ವಂತ ಸಂಶೋಧನೆಗಿಂತ ಉದ್ಯೋಗದೆಡೆಗೆ ಒತ್ತು ಕೊಡುತ್ತಿದ್ದಾರೆ?
ಭಾರತೀಯ ವಿದ್ಯಾರ್ಥಿಗಳ ಮನೋಭಾವನೆ ಹೇಗಿರುತ್ತದೆ ಎಂದರೆ ಕಲಿಯುವುದು, ಪರಿಣತಿ ಪಡೆಯುವುದು, ಉದ್ಯೋಗ ಪಡೆಯುವುದು. ಅದರಿಂದಾಚೆಗಿನ ಹೊಸ ಸಾಧ್ಯತೆ, ಹೊಸ ಯೋಚನೆಗಳನ್ನು ಕಲಿಸುವಂತ ಪರಿಪಾಠ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಇಲ್ಲ. ಪಠ್ಯದಾಚೆಗಿನ ಹೊಸತನಗಳನ್ನು ಕಲಿಸುವ ಮನೋಭೂಮಿಕೆ ಶಿಕ್ಷಣ ವ್ಯವಸ್ಥೆಯಲ್ಲೇ ರೂಪುಗೊಳ್ಳಬೇಕು. ಆದರೂ ಹಠ, ಸವಾಲುಗಳೊಂದಿಗೆ ಸಂಶೋಧನೆಯಲ್ಲಿ ಪಳಗಿಕೊಂಡವರೂ ಸಾಕಷ್ಟಿದ್ದಾರೆ.

. ವಿಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಹೊಸಬರಿಗೆ ನಿಮ್ಮ ಸಲಹೆ?
ಬಾಹ್ಯಾಕಾಶ, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಸರಿಯಾಗಿ ಯೋಚಿಸಿ, ನಿರ್ಧರಿಸಿ. ಜತೆಗೆ ಬೇಕಾದ ಪೂರಕ ಪ್ರಯತ್ನ ಮಾಡಿ. ಯಾವ ಕ್ಷೇತ್ರ, ಯಾವ ಉದ್ಯೋಗ, ಯಾವ ಸಂಶೋಧನೆ ಅಂತ ನಿರ್ಧರಿಸಿ ಮುಂದೆ ಸಾಗಿ. ಜಗತ್ತಿನಲ್ಲೇ ನಾವು ಪ್ರಥಮ ಶ್ರೇಣಿಯಲ್ಲಿದ್ದೇವೆ ಅನ್ನಲು ಅಂತಹ ಪೂರಕ ವಾತಾವರಣ ರೂಪಿಸಬೇಕು. ಅದು ಯುವ ತಲೆಮಾರಿನಿಂದ ಸಾಧ್ಯ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.