ದೋಸೆ ವೈವಿಧ್ಯ


Team Udayavani, Mar 10, 2018, 5:02 PM IST

10-March-12.jpg

ದೋಸೆ ಎಂದರೆ ಗಮ್ಮತ್ತು, ಹಲವು ವೈವಿಧ್ಯಗಳ ಕರಾಮತ್ತು. ಹಿಂದೆಲ್ಲ ವಿಶೇಷ ಸಂದರ್ಭಗಳಲ್ಲಿ ಮಾಡುತ್ತಿದ್ದ ದೋಸೆ ಈಗ ಎಲ್ಲರ ಮನೆ ಮನೆಯಲ್ಲೂ ನಿತ್ಯವೂ ನಾನಾ ತೆರನಾದ ದೋಸೆ ಎಂಬಂತಾಗಿದೆ. ನೀರುದೋಸೆ, ಉದ್ದಿನ ದೋಸೆ ಎಲ್ಲರಿಗೂ ಪ್ರಿಯವಾಗಿದ್ದರೂ ದಿನಾ ಒಂದೇ ಬಗೆಯ ದೋಸೆ ತಿನ್ನುವುದು ಬೋರಾಗಬಹುದು. ಅದಕ್ಕಾಗಿ ಇಲ್ಲಿ ಹಲವು ವಿಧದ ದೋಸೆ ರೆಸಿಪಿಗಳಿದ್ದು ಹೊಸದೇನಾದರೂ ಮಾಡಬೇ ಕೆಂದಿದ್ದರೆ ಟ್ರೈ ಮಾಡಿ ನೋಡಬಹುದು.

ಬಾಳೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು
· ಬೆಳ್ತಿಗೆ ಅಕ್ಕಿ -2 ಕಪ್‌ · ಬಾಳೆಕಾಯಿ (ಕದಳಿ, ಗಾಳಿ, ಮೈಸೂರು, ಕ್ಯಾವಂಡಿಷ್‌, ಬೂದು ಹೀಗೆ ಯಾವುದೇ ಬಾಳೆಕಾಯಿ) - 10 · ತೆಂಗಿನ ಕಾಯಿ ತುರಿ – 1 ಕಪ್‌ · ತೆಂಗಿನ ಎಣ್ಣೆ – 5 ಚಮಚ · ನೀರು – 4 ಕಪ್‌ · ಉಪ್ಪು – ರುಚಿಗೆ ತಕ್ಕಷು. ಮಾಡುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಿ. ಬಾಳೆಕಾಯಿಯ ಸಿಪ್ಪೆ ತೆಗೆದು ಪ್ರತಿಯೊಂದನ್ನು ಮೂರು- ನಾಲ್ಕು ಹೋಳುಗಳಾಗಿ ಮಾಡಿ, ಅರ್ಧ ಗಂಟೆಯ ಕಾಲ ನೀರಿನಲ್ಲಿ ನೆನೆಸಿ. ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಾಳೆಕಾಯಿ ಹೋಳುಗಳೊಂದಿಗೆ ಹದವಾಗಿ ನೀರು ಬೆರೆಸಿ ರುಬ್ಬಿ. ಹಿಟ್ಟು ತರಿತರಿಯಾಗುತ್ತಾ ಬರುವಾಗ, ಕಾಯಿ ತುರಿ ಹಾಗೂ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ಹಿಟ್ಟನ್ನು ಪಾತ್ರೆಗೆ ಸುರಿದು, ನೀರು ಸೇರಿಸಿ ದಪ್ಪ ದೋಸೆಯ ಹದಕ್ಕೆ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಕಾವಲಿ ಇಡಿ. ಕಾವಲಿ ಕಾದಾಗ ತೆಂಗಿನ ಎಣ್ಣೆ ಸವರಿ ದೋಸೆ ಹೊಯ್ಯಿರಿ.

ಸಾಂಬಾರ್‌ ಸೌತೆ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಸಣ್ಣದಾಗಿ ಕತ್ತರಿಸಿದ ಸಾಂಬಾರ್‌ ಸೌತೆ ಹೋಳು 2 ಕಪ್‌ · ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಅಕ್ಕಿ, ಸೌತೆ ಹೋಳು, ಉಪ್ಪು ಸೇರಿಸಿ ಅರೆಯಿರಿ. ನೀರುದೋಸೆ ಹದಕ್ಕೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ.

ಬೂದು ಕುಂಬಳಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು
· ಬೆಳ್ತಿಗೆ ಅಕ್ಕಿ 2 ಕಪ್‌ · ಸಣ್ಣ ದಾ ಗಿ ಕತ್ತರಿಸಿದ ಬೂದು ಕುಂಬಳಕಾಯಿ ಹೋಳು 2 ಕಪ್‌ · ರುಚಿಗೆ ತಕ್ಕಷ್ಟು ಉಪ್ಪು.  ಮಾಡುವ ವಿಧಾನ: ಅರ್ಧ ಗಂಟೆ ಕಾಲ ಅಕ್ಕಿ ನೀರಿನಲ್ಲಿ ನೆನೆಹಾಕಿ. ಬೂದು ಕುಂಬಳಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ, ಹಿಟ್ಟು ಸ್ವಲ್ಪ ದಪ್ಪಕ್ಕೆ (ಉದ್ದಿನ ದೋಸೆ ಹಿಟ್ಟಿನಂತೆ) ಇರಲಿ. ಕಾದ ತವಾದ ಮೇಲೆ ಹೊಯ್ಯಿರಿ.

ಸೋರೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು ·
ಬೆಳ್ತಿಗೆ ಅಕ್ಕಿ 2 ಕಪ್‌ · ಸಣ್ಣದಾಗಿ ಕತ್ತರಿಸಿದ ಸೋರೆಕಾಯಿ ಹೋಳ 2 ಕಪ್‌ · ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಸೋರೆಕಾಯಿ ಹೋಳು, ಅಕ್ಕಿ, ಉಪ್ಪು ಸೇರಿಸಿ ಅರೆಯಿರಿ. ಹಿಟ್ಟು ಉದ್ದಿನ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಲಿ. ಕಾದ ತವಾದ ಮೇಲೆ ಹೊಯ್ಯಿರಿ. ಸೋರೆಕಾಯಿ ದೋಸೆಯನ್ನು ಯಾವುದೇ ಬಗೆಯ ಚಟ್ನಿ ಅಥವಾ ಸಾಂಬಾರ್‌ ನೊಂದಿಗೆ ಸವಿಯಬಹುದು.

ಸಿಹಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ – 2 ಕಪ್‌ · ಎಳೆ ತೆಂಗಿನ ಕಾಯಿ ತುರಿ 1 ಕಪ್‌ · ಬೆಲ್ಲ – ಅರ್ಧ ಕಪ್‌ · ಉಪ್ಪು ರುಚಿಗೆ ತಕ್ಕಷ್ಟು · ತುಪ್ಪ – 2 ಚಮಚ. ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದಕ್ಕೆ ಎಳೆ ತೆಂಗಿನ ಕಾಯಿ ತುರಿ, ಬೆಲ್ಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ನೀರು ದೋಸೆ ಹಿಟ್ಟಿಗಿಂತ ದಪ್ಪ ಇರಲಿ. ಕಾದತವಾದ ಮೇಲೆ ತುಪ್ಪ ಸವರಿ ಸ್ವಲ್ಪ ದಪ್ಪಕೆ ಹೊಯ್ಯಿರಿ.

ಕ್ಯಾರೆಟ್‌ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಕ್ಯಾರೆಟ್‌ ತುರಿ – 1 ಕಪ್‌ · ತೆಂಗಿನೆಣ್ಣೆ – 4 ಚಮಚ · ಉಪ್ಪು ರುಚಿಗೆ ತಕ್ಕಷ್ಟು.ಮಾಡುವ ವಿಧಾನ: ಅಕ್ಕಿಯನ್ನುನ 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆದು ನೀರು ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ.ಅದಕ್ಕೆ ಕ್ಯಾರೆಟ್‌ ತುರಿ ಮಿಶ್ರ ಮಾಡಿರುಬ್ಬಬೇಕು. ಕಾದ ಕಾವಲಿಗೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. 

ಬೆಂಡೆಕಾಯಿ ದೋಸೆ
ಬೇಕಾಗುವ ಸಾಮಗ್ರಿಗಳು · ಬೆಳ್ತಿಗೆ ಅಕ್ಕಿ- 2 ಕಪ್‌ · ಬೆಂಡೆಕಾಯಿ ಹೋಳು 1 ಕಪ್‌ · ಉಪ್ಪು ರುಚಿಗೆ ತಕ್ಕಷ್ಟು · ತೆಂಗಿನೆಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅಕ್ಕಿಗೆ ಉಪ್ಪು ಸೇರಿಸಿ ಅರೆಯಿರಿ. ಅಕ್ಕಿ ಸಣ್ಣಗಾದಾಗ (ನೀರುದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗಿರಲಿ) ಅದಕ್ಕೆ ಬೆಂಡೆಕಾಯಿ ಹೋಳು ಸೇರಿಸಿ ಸ್ವಲ್ಪ ರುಬ್ಬಿಕೊಳ್ಳಿ. ಕಾದತವಾದ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಬೆಂಡೆಕಾಯಿ ದೋಸೆ ಸಿದ್ಧ.

ಹಲಸಿನಕಾಯಿ ದೋಸೆ 
ಬೇಕಾಗುವ ಸಾಮಗ್ರಿಗಳು: · ಬೆಳ್ತಿಗೆ ಅಕ್ಕಿ 2 ಕಪ್‌ · ಹಲಸಿನ ಕಾಯಿಯ ಸೊಳೆ ಹೋಳು (ಸಣ್ಣಗೆ ಕತ್ತರಿಸಿದ ಹಲಸಿನ ಕಾಯಿಯ ಸೊಳೆ) ಒಂದು ಕಪ್‌
· ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಮೊದಲು ಅಕ್ಕಿಯನ್ನು ಸ್ವಲ್ಪ ಅರೆಯಿರಿ. ಅಕ್ಕಿ ಸಜ್ಜಿಗೆಯಂತೆ ತರಿತರಿ ಇರುವಾಗ ಹಲಸಿನ ಕಾಯಿ ಸೊಳೆ ಹೋಳು ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಹಿಟ್ಟು ತಯಾರಿಸಿ ಕಾದ ತವಾದ ಮೇಲೆ ಹೊಯ್ಯಿರಿ. ಬಿಸಿಬಿಸಿಯಾದ ಹಲಸಿನಕಾಯಿ ದೋಸೆಗೆ ಎಣ್ಣೆ, ಉಪ್ಪಿನ ಕಾಯಿ ರಸ, ಜೇನು ತುಪ್ಪ ಅಥವಾ ಮಾವಿನ ಕಾಯಿ ಚಟ್ನಿ ಸೇರಿಸಿ ಸವಿಯಬಹುದು.

ಕ್ಯಾಬೇಜ್‌ ದೋಸೆ
ಬೇಕಾಗುವ ಸಾಮಗ್ರಿಗಳು 
· ಬೆಳ್ತಿಗೆ ಅಕ್ಕಿ – 2 ಕಪ್‌ · ಸಣ್ಣಕ್ಕೆ ಕತ್ತರಿಸಿದ ಕ್ಯಾಬೇಜ್‌- 1 ಕಪ್‌ · ಒಣಮೆಣಸು -2ರಿಂದ 3 · ಕೊತ್ತಂಬರಿ – 3 ಟೀ ಚಮಚ · ಉಪ್ಪು ರುಚಿಗೆ · ತೆಂಗಿನ ಎಣ್ಣೆ – 4 ಚಮಚ. ಮಾಡುವ ವಿಧಾನ: ಅಕ್ಕಿಯನ್ನು 1- 2ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಅದರೊಂದಿಗೆ ಕ್ಯಾಬೇಜ್‌, ಕೊತ್ತಂಬರಿ, ಒಣಮೆಣಸು, ಉಪ್ಪು ಸೇರಿಸಿ ರುಬ್ಬಿ. ಕಾದ ಕಾವಲಿಗೆ ಮೇಲೆ ಎಣ್ಣೆ ಸವರಿ ಹೊಯ್ಯಿರಿ. ಇದೇ ಅಳತೆಯಲ್ಲಿ ಕ್ಯಾಬೇಜ್‌ ಬದಲು ಚೀನಿ ಕಾಯಿ ಅಥವಾ ಬಾಳೆ ಕಾಯಿ ಅಥವಾ ಬಾಳೆ ದಿಂಡು ಸೇರಿಸಿ ಕೂಡ ದೋಸೆ ಮಾಡಬಹುದು.

ಮಜ್ಜಿಗೆ ದೋಸೆ
ಬೇಕಾಗುವ ಸಾಮಗ್ರಿಗಳು· ಬೆಳ್ತಿಗೆ ಅಕ್ಕಿ- 1 ಕಪ್‌ · ಕುಚ್ಚಿಗೆ ಅಕ್ಕಿ- 1 ಕಪ್‌ · ಹುಳಿ ಮಜ್ಜಿಗೆ -1 ಕಪ್‌ · ಅವಲಕ್ಕಿ -ಅರ್ಧ ಕಪ್‌ · ತೆಂಗಿನ ಎಣ್ಣೆ -4 ಚಮಚ · ರುಚಿಗೆ ತಕ್ಕಷ್ಟು ಉಪ್ಪು ಮಾಡುವ ವಿಧಾನ: ಬೆಳ್ತಿಗೆ ಹಾಗೂ ಕುಚ್ಚಿಗೆ ಎರಡೂ ಬಗೆಯ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ ಇಡಿ. ಬಳಿಕ ಉಪ್ಪು ಸೇರಿಸಿ ರುಬ್ಬಿ ಹಿಟ್ಟನ್ನು 5- 6 ಗಂಟೆಗಳ ಕಾಲ ಮುಚ್ಚಿ ಇಡಿ. ಅನಂತರ ಹಿಟ್ಟಿಗೆ ಹುಳಿ ಮಜ್ಜಿಗೆ, ಅವಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕಾದ ತವಾದ ಮೇಲೆ ಎಣ್ಣೆ ಸವರಿ ದೋಸೆ (ಉದ್ದಿನ ದೋಸೆಯಂತೆ ದಪ್ಪಗೆ) ಹುಯ್ಯಿರಿ.

ಗಣೇಶ ಕುಳಮರ್ವ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.