ಅನ್ನ ಉಳಿದರೆ ಚಿಂತೆ ಬೇಡ


Team Udayavani, Dec 1, 2018, 2:54 PM IST

1-december-11.gif

ಕರಾವಳಿಯ ಪ್ರತಿ ಮನೆಯಲ್ಲೂ ಅನ್ನ ಮಾಡದೆ ದಿನ ಕಳೆಯುವುದೇ ಇಲ್ಲ. ಅದು ಕೆಲವೆಡೆ ಕುಚ್ಚಿಲು ಅಥವಾ ಬೆಳ್ತಿಗೆ ಅನ್ನ ಆಗಿರಬಹುದು. ಆದರೆ ಇತ್ತೀಚೆಗೆ ಮನೆಗಳಲ್ಲಿ ಅನ್ನ ಉಳಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮನೆ ಹೆಂಗಸರಿಗೆ ಅದನ್ನು ಏನು ಮಾಡುವುದು ಎಂದು ಮನೆಯ ಮಹಿಳೆಯರಿಗೆ ತಲೆ ನೋವು. ಆದರೆ ಉಳಿದ ಅನ್ನವನ್ನೂ ಬಿಸಾಡಲು ಆಗುವುದಿಲ್ಲ. ಹಾಗೆಂದು ಅದನ್ನು ಇಟ್ಟರೆ ಮತ್ಯಾರು ತಿನ್ನುವುದಿಲ್ಲ. ಅದಕ್ಕೋಸ್ಕರ ರಾತ್ರಿ ಉಳಿದ ಅನ್ನದಿಂದ ಪಡ್ಡು, ಪುಂಡಿ, ದೋಸೆ, ವೆರೈಟಿ ರೈಸ್‌ ಐಟಂಗಳನ್ನು ಮಾಡಿಕೊಂಡು ಮನೆ  ಮಂದಿಗೆಲ್ಲಾ ಒಂದು ಹೊಸ ರುಚಿಯನ್ನು ತಿನ್ನಿಸಬಹುದು.

ಪಡ್ಡು
ರಾತ್ರಿ ಮಾಡಿದ ಬೆಳ್ತಿಗೆ ಅನ್ನ ಉಳಿದರೆ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಹೊಸ ರುಚಿಯ ಪಡ್ಡುವನ್ನು ಮಾಡಿ ಬಡಿಸಬಹುದು. ಇದಕ್ಕೆ ಮನೆಯಲ್ಲಿರುವ ತರಕಾರಿ ಸಾಮಗ್ರಿಗಳು ಸಾಕು. ಹಾಗಾಗಿ ಥಟ್ಟಂತ ಮಾಡಬಹುದು. ಅನ್ನವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿ ತೆಗೆದಿಟ್ಟುಕೊಳ್ಳಿ. ಅನಂತರ ಮಿಕ್ಸಿ ಜಾರಿಗೆ ತುಂಡು ಮಾಡಿದ ಕೊಬ್ಬರಿ, 4 ಒಣ ಮೆಣಸು, ಈರುಳ್ಳಿ, ಹಸಿಮೆಣಸು, ಬೇವಿನ ಸೊಪ್ಪು ಹಾಕಿ ಸ್ವಲ್ಪ ತಿರುಗಿಸಿ ತೆಗೆದು ಪಾತ್ರೆಗೆ ಹಾಕಿಕೊಳ್ಳಿ, ಅದಕ್ಕೆ ಒಂದು ಚಮಚ ಅರಸಿನ, ಒಂದು ಕಪ್‌ ಚಿರೋಟಿ ರವಾ, ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ, ಅನಂತರ ನೀರು ಹಾಕಿಕೊಂಡು ಪಡ್ಡು ಮಾಡಲು ಬೇಕಾದಷ್ಟು ಮಂದ ಇರಿಸಿಕೊಂಡು ಪಡ್ಡು (ಅಪ್ಪ) ಕಾವಲಿ ಹಾಕಿ ಚೆನ್ನಾಗಿ ಬೇಯಿಸಿ. ಬಿಸಿ ಬಿಸಿ ಇರುವಾಗಲೇ ತಿನ್ನಲು ಬಡಿಸಿ. ಇದಕ್ಕೆ ಪ್ರತ್ಯೇಕ ಚಟ್ನಿ, ಸಾಂಬಾರಿನ ಆವಶ್ಯಕತೆ ಇರುವುದಿಲ್ಲ.

ಬಿಸಿ ಬಿಸಿ ಪುಂಡಿ
ಜಾಸ್ತಿ ಉಳಿದ ಬೆಳ್ತಿಗೆ ಅನ್ನವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ಅನಂತರ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿರೋಟಿ ರವಾ, ಹಾಕಿ ಗಟ್ಟಿ ಹಿಟ್ಟನ್ನು ಕಲಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ, ಒಣ ಮೆಣಸು, ಸಾಸಿವೆ, ಜೀರಿಗೆ ಹೆಸರು ಬೇಳೆ ಹಾಕಿ ಒಗ್ಗರಣೆ ಮಾಡಿ ಅದನ್ನು ಈ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಪುಂಡಿ ಗಟ್ಟಿಯ ಆಕಾ ರಕ್ಕೆ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಒಂದು ಸೆಕೆ ಬೇಯಿಸಿ. ಅನಂತರ ಬಿಸಿ ಬಿಸಿ ಇರುವಾಗಲೇ ಸವಿಯಿರಿ.

ದೋಸೆ
ದೋಸೆ ಮಾಡಲು ಉಳಿದ ಬೆಳ್ತಿಗೆ ಅಥವಾ ಕುಚ್ಚಿಲು ಅನ್ನ, ರವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಕೊಳ್ಳಿ ಅನಂತರ ಅದಕ್ಕೆ ನೀರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಕರಿ ಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ದೋಸೆ ಕಾವಲಿಗೆ ಎರೆಯಿರಿ. ಅದು ಸುಳಿಯಲು ಬಾರದಿದ್ದರೆ ನೀರು ದೋಸೆಯ ರೀತಿಯಲ್ಲಿ ಎರೆಯಿರಿ, ಆದರೆ ಅಧಿಕ ನೀರು ಸೇರಿಸುವುದು ಬೇಡ. ಬೆಳ್ತಿಗೆ ಅನ್ನದ ದೋಸೆ ಹಾಗೂ ಕುಚ್ಚಿಲು ಅನ್ನದ ದೋಸೆ ವಿಭಿನ್ನ ರುಚಿಯನ್ನು ನೀಡುತ್ತದೆ. ಇದಕ್ಕೆ ತುಪ್ಪವನ್ನು ಸೇರಿಸಿ, ಚಟ್ನಿ ಮಾಡಿಕೊಂಡು ಸವಿಯಿರಿ.

ರೈಸ್‌ ಐಟಂಗಳು
ಉಳಿದ ಅನ್ನದಿಂದ ತಯಾರಿಸಬಹುದಾದ ಚಿತ್ರಾನ್ನ, ಮೊಸರಾನ್ನ, ಲೆಮೆನ್‌ ರೈಸ್‌, ಟೊಮೇಟೊ ಬಾತ್‌ ಹೀಗೆ ಹಲವು ವಿಧಗಳನ್ನು ಮಾಡಬಹುದು. ಅನ್ನ ಒಂದೇ ಆದರೂ ರುಚಿ ಬೇರೆ ಬೇರೆ ವೆರೈಟಿ ಬ್ರೇಕ್‌ ಫಾಸ್ಟ್‌ ಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದರ ರುಚಿಯನ್ನು ಇಷ್ಟ ಪಡುವುದಂತು ಸತ್ಯ. ಹೀಗೆ ನಾನಾ ರೀತಿಯಲ್ಲಿ ಉಳಿದ ಅನ್ನವನ್ನು ಬಳಸಿ ಹೊಸ ಪ್ರಯೋಗವನ್ನು ಮಾಡಬಹುದು. ಹಾಗೆಯೇ ಇನ್ನೊಬ್ಬರಿಗೆ ತಿಳಿಸಿದರೆ ಅವರೂ ತಿಂದು ಆಸ್ವಾದಿಸುತ್ತಾರೆ. 

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.