ಮಂಜಿನ ನಗರಿಯಲ್ಲಿ  ಮಳೆ ಹನಿಯ ನಿನಾದ 


Team Udayavani, Jul 26, 2018, 3:12 PM IST

26-july-11.jpg

ಮಳೆ ಜೋರಾಗಿತ್ತು. ಮನಸ್ಸು ಮಾತ್ರ ಮಳೆಯ ಜತೆಗೆ ಹಾಯಾಗಿ ಸುತ್ತಾಡುವ ಕನವರಿಕೆ ಮಾಡುತ್ತಿತ್ತು. ಬಿಟ್ಟು ಬಿಟ್ಟು ಬರುವ ಮಳೆ- ಒಮ್ಮೊಮ್ಮೆ ಜೋರು ಮಳೆಯ ಜತೆಗೆ ಜಾಲಿ ರೈಡ್‌ ಹೋದರೆ ಹೇಗೆ ಎಂಬ ಯೋಚನೆ ಆಯಿತು. ಆಫೀಸಲ್ಲಿ ಕುಳಿತು ಸ್ನೇಹಿತರ ಜತೆಗೆ ಹೀಗೆ ಒಂದು ಮಾತುಕತೆ ಮಾಡುವಾಗಲೇ ಮಳೆ ಹೊರಗಡೆ ಶಬ್ದ ಮಾಡಿದಂತಿತ್ತು. ಖುಷಿ ಹೆಚ್ಚಾಯಿತು. ಇನ್ನು ತಡ ಮಾಡುವುದು ಬೇಡ..ಮಳೆಯ ಮೂಡ್‌ನಲ್ಲಿ ಮಡಿಕೇರಿ ಸುತ್ತಿ ಬರೋಣ ಅಂದುಕೊಂಡು ದಿನ ಕೂಡ ಫಿಕ್ಸ್‌ ಮಾಡಿದೆವು. ಶನಿವಾರ ರವಿವಾರ ಡ್ನೂಟಿಗೆ ರಜೆ ಇರುವುದರಿಂದ ಟೂರ್‌ ಡೇಟ್‌ ಸುಲಭವಾಗಿ ಫಿಕ್ಸ್‌ ಆಯಿತು. ಒಟ್ಟು 9 ಮಂದಿಯ ತಂಡ ಸೇರಿ ಟೆಂಪೋ ಟ್ರಾವೆಲರ್‌ ಬುಕ್‌ ಕೂಡ ಮಾಡಿದೆವು. ನೋಡ ನೋಡುತ್ತಿದ್ದಂತೆ ಪ್ರವಾಸ ದಿನ ಹತ್ತಿರ ಬಂತು.

ಅಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರಿಂದ ಹೊರಟ ನಾವು, ಕಲ್ಲಡ್ಕದಲ್ಲಿ ಕೆ.ಟಿ. ಹೀರಿ, ಮನ ತಣಿಸಿದೆವು. ಅಲ್ಲಿಂದ ಸಂಪಾಜೆ ದಾಟಿ ನಮ್ಮ ವಾಹನ ಮೆಲ್ಲನೆ ಮಳೆಯ ಲಾಲಿತ್ಯವನ್ನು ಆಸ್ವಾಧಿಸಿ ರೊಂಯ್ಯನೆ ಸಾಗುತ್ತಿತ್ತು. ಚಳಿಯ ತಂಗಾಳಿ ಮನಸ್ಸಿಗೆ ಹಿತ ನೀಡುತ್ತಿತ್ತು. ಸ್ವಲ್ಪ ದೂರ ದಾಟುವಾಗಲೇ ಕಾಡಿನ ಮಧ್ಯೆ ಅರ್ಥಾತ್‌ ರಸ್ತೆ ಬದಿ ನೀರ ಜರಿ ನಮ್ಮನ್ನು ಬರಸೆಳೆಯಿತು. 

ಚಳಿಗಾಳಿಯ ನಡುವೆಯೂ ನೀರಲ್ಲಿ ಮಿಂದು ನೆಲ್ಲಿಕಾಯಿ ಬಾಯಲ್ಲಿಟ್ಟು ಗಾಡಿ ಹತ್ತಿದೆವು. ಅದೇ ಸ್ಪೀಡಲ್ಲಿ ವಾಹನ ದುಬಾರೆ ತಲುಪಿದಾಗ ಬೆಳಗ್ಗೆ ಸುಮಾರು 10 ಗಂಟೆ. ನೀರಿಗೆ ಇಳಿದು ಆಡೋಣ ಎಂಬ ಮನಸ್ಸಾದರು ಮಳೆ ನೀರು ವಿಪರೀತ ಇರುವುದರಿಂದ ‘ಯಾರೂ ನೀರಿಗೆ ಇಳಿಯಬೇಡಿ’ ಎಂಬ ಸೂಚನೆ ಕೇಳಿ ಸುಮ್ಮನಾದೆವು. ಅಲ್ಲೇ ಒಂದಿಷ್ಟು ಫೋಟೋ ಸೆಷನ್‌ ಮುಗಿಸಿ, ಹತ್ತಿರದಲ್ಲೇ ಇರುವ ಚಿಕ್ಲಿಹೊಳೆ ಡ್ಯಾಂ ನೋಡಲು ಹೊರಟೆವು. ನೀರರಾಶಿ ಕಣ್ತುಂಬಿಸಿ, ಗೋಲ್ಡನ್‌ ಟೆಂಪಲ್‌ಗೆ ಬಂದು ಅಲ್ಲೊಂದಿಷ್ಟು ಸಮಯ ಕಳೆದೆವು. 

ಮಳೆ ಚಳಿಯ ನಡುವೆ ಮಾವಿನಕಾಯಿ ರುಚಿ ನೋಡಿದೆವು. ಅಲ್ಲಿಂದ ಮತ್ತೆ ನಮ್ಮ ವಾಹನ ಹಾರಂಗಿ ಡ್ಯಾಂನತ್ತ ಹೊರಟಿತು. ಅಲ್ಲಿಯೂ ಜಲರಾಶಿ ಕಂಡು ಮೂಕವಿಸ್ಮಿತ ಭಾವನೆ. ಹತ್ತಿರದಲ್ಲೇ ಇದ್ದ ಪಾರ್ಕ್‌ನ ಜೋಕಾಲಿಯಲ್ಲೆಲ್ಲ ಮಕ್ಕಳಂತೆ ಆಡಿ ಕುಣಿದಾಡಿದೆವು.

ಕುಶಾಲನಗರಕ್ಕೆ ತಲುಪುವಾಗ ಹಸಿವಿನಿಂದ ಹೊಟ್ಟೆ ಜುರುಗುಟ್ಟಲಾರಂಬಿಸಿತು. ಎಲ್ಲರೂ ಒಂದು ಹೊಟೇಲ್‌ನಲ್ಲಿ ಭರ್ಜರಿ ಊಟ ಮುಗಿಸಿ ಮತ್ತೆ ಕಾವೇರಿ ನಿಸರ್ಗಧಾಮಕ್ಕೆ ಪ್ರಯಾಣ ಆರಂಭ. ಮರದ ಮೇಲಿನ ಮನೆಯ ಕಂಡು ಅಲ್ಲೊಂದಿಷ್ಟು ಫೋಟೊ ತೆಗೆಸಿ, ಅಲ್ಲೇ ಓಡಾಡುತ್ತಿದ್ದ ಜಿಂಕೆಗಳನ್ನು ಕಂಡು ಖುಷಿಪಟ್ಟೆವು. ಅಲ್ಲಿಂದ ಸಂಜೆ ವೇಳೆ ರಾಜಾಶೀಟ್‌ಗೆ ಬಂದಾಗ ಮುಂಗಾರು ಮಳೆಯ ನರ್ತನ ಮನಸ್ಸಿಗೆ ಮುದ ನೀಡಿದರೂ ಸೂರ್ಯಾಸ್ತಮಾನ ಕಾಣಲಾಗದೆ ನಿರಾಶೆಯಾಯಿತು.

ಬಳಿಕ ಅಲ್ಲೇ ಹತ್ತಿರದಲ್ಲಿ ಹೋಮ್‌ ಸ್ಟೇಗೆ ಹೋಗಿ ಒಂದಷ್ಟು ಕುಣಿತ, ಪಾರ್ಟಿ ನಡೆಸಿ ರಾತ್ರಿ ಉಳಿದು ಮರುದಿನ ಬೆಳಗ್ಗೆ ಅಲ್ಲೇ ಒಂದಿಷ್ಟು ಕಡೆ ಸುತ್ತಾಡಿದೆವು. ರಾಜಾಟೋಂಬ್‌ಗ ಹೋಗಿ ಅಲ್ಲಿ ರಾಜರ ಕಾಲದ ವಿಷಯ ತಿಳಿದು, ಮಡಿಕೇರಿಯ ಮೈನ್‌ ಪಾಯಿಂಟ್‌ ಅಬ್ಬಿ ಫಾಲ್ಸ್‌ಗೆ ಬಂದಾಗ ಸುಮಾರು 11 ಗಂಟೆಯಾಗಿತ್ತು. ಜನಜಾತ್ರೆಯಲ್ಲಿ ಮಿಂದಿದ್ದ ಅಬ್ಬಿ ಮಳೆಯ ಲಾಲಿತ್ಯದೊಂದಿಗೆ ಬಿಳಿಯ ನೊರೆಯ ಹಾಲನ್ನು ಚೆಲ್ಲುತ್ತಾ ಬಿತ್ತರಿಸಿದ ಸೊಬಗು ರೋಮಾಂಚನಗೊಳಿಸಿತು. ಈ ಆಹ್ಲಾದಕತೆಗೆ ಚಳಿ ಗೊತ್ತೇ ಆಗಿಲ್ಲ. ಮತ್ತೆ ನಮ್ಮ ವಾಹನ ಸಾಗಿದ್ದು ಚೇಳಾವರ ಫಾಲ್ಸ್‌ ಗೆ. ಅದೂ ಕೂಡ ನೀರಿನ ವೈಯ್ನಾರ ಪ್ರತಿಧ್ವನಿಸುತ್ತಿತ್ತು. ಅಲ್ಲಿಂದ ಭಾಗಮಂಡಲಕ್ಕೆ ಬಂದು ಊಟ ಮುಗಿಸಿ ತಲಕಾವೇರಿಗೆ ಬಂದೆವು. ಮಂಜು ಮುಸುಕಿದ ಅಲ್ಲಿನ ಚೆಲುವು ವರ್ಣಿಸಲು ಅಸಾಧ್ಯ.

ವಾಹನ ಹೀಗೆ ಹೋದಲ್ಲೆಲ್ಲ ಮಳೆಯ ರಾಗ ಕೇಳುತ್ತಲೇ ಇತ್ತು. ಚಟ ಪಟ ಸದ್ದು ಕಿವಿ ತಣಿಸುತ್ತಿತ್ತು. ಚಳಿಯು ಮನದ ಭಾವನೆಗೆ ಹೊಸ ರೂಪ ನೀಡುತ್ತಿತ್ತು. ಹನಿಹನಿ ಇಬ್ಬನಿಗೆ ತೊಯ್ದ ಮನವು ಮಡಿಕೇರಿಯನ್ನೇ ಬಯಸುತ್ತಿತ್ತು. ಆದರೆ, ನಮ್ಮ ವಾಹನ ನಾವು ಬಂದ ರಸ್ತೆಯಲ್ಲೇ ವಾಪಾಸು ಬರುತ್ತಿತ್ತು. ನೂರಾರು ನೆನಪುಗಳನ್ನು ಕಟ್ಟಿಕೊಂಡು ಬಂದಾಗ ಮೆಲ್ಲನೆ ವಾಹ ನದ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಹಾಯಿಸಿದರೆ ಸಂಪಾಜೆ ಬಂದಾಗಿತ್ತು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಮಡಿಕೇರಿಗೆ 138 ಕಿ.ಮೀ. ದೂರ.
· ಬಸ್‌, ಖಾಸಗಿ ವಾಹನ ಸೌಲಭ್ಯಗಳಿವೆ.
· ಕುಶಾಲನಗರ, ಮಡಿಕೇರಿಯಲ್ಲಿ ಹಲವು ಪ್ರವಾಸಿ ತಾಣಗಳಿವೆ.
· ಮೊದಲೇ ಬುಕ್ಕಿಂಗ್‌ ಮಾಡಿದರೆ ಊಟ, ವಸತಿ ವ್ಯವಸ್ಥೆಗೆ ಸಮಸ್ಯೆಯಿಲ್ಲ.
· ಸ್ಥಳೀಯವಾಗಿಸುತ್ತಾಡಲು ಖಾಸಗಿ ವಾಹನ ಸೌಲಭ್ಯಗಳು ಸಾಕಷ್ಟಿವೆ.

ಸ್ಟಾಲನ್‌ ಫಿಡಲ್‌ ಡಿ’ಸೋಜಾ,
ಮಂಗಳೂರು

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.