ಎಂಡೋ ಪೀಡಿತರ ಬದುಕಿನಲ್ಲೊಬ್ಬ ‘ಬಲಿಪ’!
Team Udayavani, Aug 16, 2018, 12:57 PM IST
ಎಂಡೋಸಲ್ಫಾನ್ ವಿಷ ಮಳೆಯಿಂದ ನೂರಾರು ಜನ ಇಂದಿಗೂ ಯಾತನಾಮಯ ಜೀವನ ಸಾಗಿಸುತ್ತಿರುವ ಸಂಗತಿ ನಮ್ಮ ಕಣ್ಣಮುಂದಿದೆ. ನೂರಾರು ಜನರದ್ದು ಯಾತನಾಮಯ ಬದುಕು. ಕಂಡು- ಕೇಳಲು ಅರಿಯದಷ್ಟು ವಿಚಿತ್ರ ಹಾಗೂ ವಿಶೇಷ. ಆದರೂ ಸತ್ಯ. ಎಂಡೋಪೀಡಿತರ ಜೀವನ ಅಷ್ಟರ ಮಟ್ಟಿಗೆ ನರಕಸದೃಶವಾಗಿ ಪರಿಣಮಿಸಿದೆ. ಇದನ್ನೇ ಕಥಾವಸ್ತುವಾಗಿಟ್ಟುಕೊಂಡು ಪ್ರಸಾದ್ ಅರುವ ಅವರ ನಿರ್ದೇಶನದಲ್ಲಿ ‘ಬಲಿಪೆ’ ಸಿನೆಮಾ ಮಾಡಲಾಗಿದೆ.
ಸದ್ದಿಲ್ಲದೆ ಈಗಾಗಲೇ ಶೂಟಿಂಗ್ ಕೂಡ ಮುಗಿಸಿದೆ. ಚಿರತೆಗಿಂತಲೂ ಬಲಿಷ್ಠ ಎಂಬ ನುಡಿಗಟ್ಟಿನಲ್ಲಿ ನಾಣ್ಣುಡಿ ಇರುವ ಬಲಿಪೆಯನ್ನೇ ಈ ಸಿನೆಮಾದ ಟೈಟಲ್ನಲ್ಲಿ ಬಳಸಲಾಗಿದೆ. ಅಂದಹಾಗೆ, ಹೇಮಂತ್ ಸುವರ್ಣ ಇದರ ನಿರ್ಮಾಪಕರು. ಹರ್ಷಿತ್ ನಾಯಕ, ಅಂಕಿತಾ ಪಟ್ಲ ನಾಯಕಿ. ಅರವಿಂದ ಬೋಳಾರ್, ರಂಜನ್ ಬೋಳೂರು, ಗಿರೀಶ್ ಹೆಗ್ಡೆ, ಪ್ರಾಣ್ ಶೆಟ್ಟಿ, ಧೃತಿ ನಾಯಕ್, ಐಶ್ವರ್ಯಾ ಆಚಾರ್ಯಾ ಮುಂತಾದವರು ಸಿನೆಮಾದಲ್ಲಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿವೆ. ಕೀರ್ತನ್ ಭಂಡಾರಿ ಮತ್ತು ಸುರೇಶ್ ಬಲ್ಮಠ ಸಾಹಿತ್ಯ, ರಕ್ಷಿತ್ ವಶಿಷ್ಠ ರಾಗ ಸಂಯೋಜನೆ. ಮೆಹಬೂಬ್, ಸಂಚಿತ್ ಹೆಗ್ಡೆ ಹಾಡಿದ್ದಾರೆ. ಅಭಿಷೇಕ್ ಅರ್ಕುಳ ಸಹ ನಿರ್ದೇಶನ, ರಕ್ಷಿತ್ ಚಿನ್ನು ಛಾಯಾಗ್ರಹಣ. ಕೆ.ಎನ್.ಪ್ರಕಾಶ್ ಸಂಕಲನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ