ರಡ್ಡ್  ಎಕ್ರೆ ಜಾಗ ಮಾರಾಟಕ್ಕೆ ಹೊರಟ ವಿನಾಯಕ!


Team Udayavani, Oct 11, 2018, 12:32 PM IST

11-october-9.gif

ಕುಡ್ಲದಲ್ಲಿ ಜಾಗದ ಡೀಲ್‌ ಮಾಡುವವರು ತುಂಬಾ ಜನ ಇದ್ದಾರೆ. ಇದರಲ್ಲೇ ಹಣ ಮಾಡಿದ ಹಲವು ಜನರಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಟೀಮ್‌ ಕೂಡ ಕೆಲಸ ಮಾಡುತ್ತದೆ. ಸಣ್ಣ ಪುಟ್ಟ ಜಾಗದಿಂದ ಹಿಡಿದು ದೊಡ್ಡ ಮಟ್ಟದ ಲ್ಯಾಂಡ್‌ ಡೀಲ್‌ ನಗರದಲ್ಲಿ ನಿತ್ಯ ನಡೆಯುತ್ತಲೇ ಇರುತ್ತದೆ. ಅಂದಹಾಗೆ, ಕೋಸ್ಟಲ್‌ವುಡ್‌ ನಲ್ಲೂ ಈಗ ಒಂದು ಜಾಗದ ಡೀಲ್‌ ಶುರುವಾಗಿದೆ!

ಆಶ್ಚರ್ಯವಾದರೂ ಇದು ನಿಜ. ಜಾಗದ ಡೀಲ್‌ಗೆ ಕೋಸ್ಟಲ್‌ವುಡ್‌ ಈಗ ಅಣಿಯಾಗುತ್ತಿದೆ. ಒಂದು ತಿಂಗಳ ಒಳಗೆ ಈ ಡೀಲ್‌ ಮುಗಿಸಬೇಕು ಎಂಬ ಪಕ್ಕಾ ಪ್ಲ್ಯಾನಿಂಗ್‌ ಕೂಡ ನಡೆದಿದೆ. ಅದೂ ಕೂಡ ಎರಡು ಎಕ್ರೆ ಜಾಗವನ್ನು ಸೇಲ್‌ ಮಾಡುವ ವಿಚಾರವೇ ಸದ್ಯ ಬಿಸಿ ಬಿಸಿ ಸುದ್ದಿಗೆ ಕಾರಣವಾಗಿದೆ. 

ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿಯವರೆಗೆ ಹೇಳಿದ್ದು ಕೋಸ್ಟಲ್‌ವುಡ್‌ನ‌ ಸಿನೆಮಾದ ಬಗ್ಗೆ. ಜಾಗದ ಡೀಲ್‌ ಕುರಿತ ಕಥಾನಕದಲ್ಲಿ ತುಳುವಿನಲ್ಲೊಂದು ಸಿನೆಮಾ ರೆಡಿಯಾಗುತ್ತಿದ್ದು, ಅದರ ಬಗ್ಗೆಯೇ ಇಷ್ಟು ಒಡ್ಡೋಲಗ ಮಾಡಿದ್ದು. ಅಂದಹಾಗೆ ಸಿನೆಮಾದ ಹೆಸರು ‘ರಡ್ಡ್ಎಕ್ರೆ’!

ಎರಡು ಎಕ್ರೆ ಜಾಗವನ್ನು ಹಿಡಿದುಕೊಂಡು ಮಾಡುವ ವಹಿವಾಟೇ ಈ ಸಿನೆಮಾ. ವಿಶೇಷವೆಂದರೆ ‘ರಡ್ಡ್ ಎಕ್ರೆ’ ಟೈಟಲ್‌ಗೆ “ನಾಟ್‌ ಫಾರ್‌ ಸೇಲ್‌’ ಎಂಬ ಸಬ್‌ ಟೈಟಲ್‌ ಕೂಡ ಇದೆ. ಹಾಗಾದರೆ ಜಾಗ ಸೇಲ್‌ಗೆ ಇಲ್ಲವೇ? ಎಂಬ ಪ್ರಶ್ನೆ ಮೂಡಬಹುದು. ಅಲ್ಲೇ ಇರುವುದು ಒಂದು ಕಥೆ!

ಅಂದಹಾಗೆ ವಿಸ್ಮಯ ವಿನಾಯಕ್‌ ಜಾಗದ ಡೀಲ್‌ಗೆ ಮುಂದಾಗಿದ್ದಾರೆ. ಅರ್ಥಾತ್‌ ಅವರೇ ನಿರ್ದೇಶಕರು. ಸಂದೇಶ್‌ ಹಾಗೂ ರೋಹನ್‌ ‘ರಡ್ಡ್ ಎಕ್ರೆ’ಗೆ ಹಣ ನೀಡಲಿದ್ದಾರೆ. ಪೃಥ್ವಿ ಅಂಬರ್‌ ಹಾಗೂ ನಿರೀಕ್ಷಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದರೆ, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಪ್ರಕಾಶ್‌ ತುಮಿನಾಡ್‌, ಮಂಜು ರೈ ಮೂಳೂರು, ದೀಪಕ್‌ ರೈ ಪಾಣಾಜೆ ಸಹಿತ ಕಾಮಿಡಿ ಲೋಕವೇ ಈ ಡೀಲ್‌ನಲ್ಲಿ ಭಾಗವಹಿಸಲಿದೆ.

‘ರಂಗ್‌’ ಸಿನೆಮಾ ಬಂದ ಅನಂತರ ವಿಸ್ಮಯ ವಿನಾಯಕ್‌ ಅವರ ನಿರ್ದೇಶನದ ಎರಡನೇ ಸಿನೆಮಾವಿದು. ಅದರ ಮಧ್ಯೆ ಹಲವಾರು ಸಿನೆಮಾಗಳಲ್ಲಿ ಕಾಮಿಡಿ ರೋಲ್‌ನಲ್ಲಿ ಕಾಣಿಸಿಕೊಂಡ ವಿನಾಯಕ್‌ ಈಗ ಕೋಸ್ಟಲ್‌ವುಡ್‌ನ‌ಲ್ಲಿ ಪೂರ್ಣ ಮಟ್ಟದ ನಿರ್ದೇಶಕನಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ ಹಾಗೂ ಸೀರಿಯಲ್‌ ಆ್ಯಕ್ಟರ್‌ ದೀಪಕ್‌ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. 23 ದಿನಗಳಲ್ಲಿ ಶೂಟಿಂಗ್‌ ಮುಗಿಸಬೇಕು ಎಂಬ ಯೋಚನೆಯಲ್ಲಿ ಸಿನೆಮಾ ತಂಡವಿದೆ.

ಕೋಸ್ಟಲ್‌ವುಡ್‌ನ‌ಲ್ಲಿ ಮ್ಯೂಸಿಕ್‌ ಮೂಲಕ ಹೆಸರು ಪಡೆದ ಕಿಶೋರ್‌ ಈ ಸಿನೆಮಾಕ್ಕೆ ಸಂಗೀತ ನೀಡಲಿದ್ದಾರೆ. ಕಾಮಿಡಿ ಸಬ್ಜೆಕ್ಟ್‌ನಲ್ಲಿ ಮೂಡಿಬರಲಿರುವ ಈ ಸಿನೆಮಾ ವಿಭಿನ್ನ ಮ್ಯಾನರಿಸಂನಲ್ಲಿ ಬರಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಮುಂದಿನ ಸೋಮವಾರ ಮಂಗಳೂರಿನ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.