ಕೋಸ್ಟಲ್‌ನಿಂದ ಹಾಲಿವುಡ್‌ಗೆ! 


Team Udayavani, Oct 11, 2018, 2:30 PM IST

11-october-12.gif

ತುಳುನಾಡಿನಲ್ಲಿ ಹುಟ್ಟಿ ಬಾಲಿವುಡ್‌ನ‌ಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರು ಹಲವರಿದ್ದಾರೆ. ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್‌ ಶೆಟ್ಟಿ… ಹೀಗೆ ಹೆಸರಿನ ಪಟ್ಟಿ ದೊಡ್ಡದಿದೆ. ಇದೇ ರೀತಿ ಮಾರ್ಷೆಲ್‌ ಆರ್ಟ್‌ ಮೂಲಕ ಹೆಸರು ಮಾಡಿ, ಖ್ಯಾತ ಸಿನೆಮಾ ನಿರ್ದೇಶಕ, ಮೂಲತಃ ಕಾರ್ಕಳ ನಿವಾಸಿ ಚೀತಾ ಯಜ್ಞೆಶ್  ಶೆಟ್ಟಿ ಅವರು ಕೂಡ ಬಾಲಿವುಡ್‌ನ‌ಲ್ಲಿ ಸಾಕಷ್ಟು ಸಿನೆಮಾ ಮಾಡಿ ಸುದ್ದಿಯಾಗಿದ್ದರು.

ವಿಶೇಷವೆಂದರೆ ಬಾಲಿವುಡ್‌ನ‌ಲ್ಲಿ ಖ್ಯಾತಿ ಪಡೆಯುವ ಕಾಲಕ್ಕೆ ಈಗ ಹಾಲಿವುಡ್‌ನ‌ ಆಫರ್‌ ಅವರಿಗೆ ಬಂದಿದ್ದು, ಬರೋಬ್ಬರಿ 100 ಕೋಟಿ ರೂ. ಬಜೆಟ್‌ನಲ್ಲಿ ಸಿನೆಮಾ ರೆಡಿ ಮಾಡಲು ಸಿದ್ಧರಾಗಿದ್ದಾರೆ. ಅಂದಹಾಗೆ ಅವರ ನಿರ್ದೇಶನದ ಹಾಲಿವುಡ್‌ನ‌ ‘ಹಿ ಈಸ್‌ ಬ್ಯಾಕ್‌’ ಸಿನೆಮಾ ಸೆಟ್ಟೇರಲಿದೆ.  ಜನವರಿಯಲ್ಲಿ ಶೂಟಿಂಗ್‌ ಆರಂಭಿಸಲಿರುವ ಈ ಸಿನೆಮಾ ಮುಂದಿನ ವರ್ಷಾಂತ್ಯಕ್ಕೆ ಜಗತ್ತಿನಾದ್ಯಂತ ತೆರೆ ಕಾಣುವ ನಿರೀಕ್ಷೆಯಲ್ಲಿದೆ. ಹಾಲಿವುಡ್‌ ನ ಪ್ರಖ್ಯಾತ ನಟ ಬ್ರೂಸ್ಲಿ ಅವರ ಪ್ರೇರಣೆಯಿಂದ ಬದಲಾಗುವ ಯುವಕನೊಬ್ಬನ ಕಥೆಯಾಧಾರಿತವಾಗಿ ‘ಹಿ ಈಸ್‌ ಬ್ಯಾಕ್‌’ ಸಿನೆಮಾ ರೂಪುಗೊಳ್ಳಲಿದೆ. ಥೈಯ್ಲಾಂಡ್‌, ರಷ್ಯಾ, ಯುಎಸ್‌ಎಯಲ್ಲಿ ಈ ಸಿನೆಮಾ ಶೂಟಿಂಗ್‌ ಕಾಣಲಿದೆ.

ಅಪಘಾನಿಸ್ತಾನದ ಅಬ್ಟಾಸ್‌ ಆಲಿಝಾದಾ ಅವರು ಬ್ರೂಸ್ಲಿ ರೀತಿಯಲ್ಲಿ ಅಭಿನಯಿ ಸಲಿದ್ದಾರೆ. ಬಾಹುಬಲಿ ಸಿನೆಮಾದಲ್ಲಿ ತಾಂತ್ರಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಕೆಲವರನ್ನು ಬಿಟ್ಟು ಉಳಿದಂತೆ ಚಿತ್ರತಂಡದಲ್ಲಿ ಪೂರ್ಣ ಹಾಲಿವುಡ್‌ನ‌ ಟೀಮ್‌ ಇರಲಿದೆ. ಬ್ರೂಸ್ಲಿ ಅವರಿಂದ ಪ್ರೇರಣೆ ಪಡೆದ ಅಭಿಮಾನಿಯೊಬ್ಬ ಬ್ರೂಸ್ಲಿ ರೀತಿಯಲ್ಲಿ ಬದಲಾಗುವ ಕಥೆಯನ್ನು ಸಿನೆಮಾವಾಗಿ ಮಾಡಲಾಗುತ್ತಿದೆ. ಬಾಲಿವುಡ್‌ನ‌ಲ್ಲಿ ಈಗಾಗಲೇ ಹಲವು ಸಿನೆಮಾ ಮಾಡಿರುವ ತನಗೆ ಹಾಲಿವುಡ್‌ ಸಿನೆಮಾ ಮಾಡಬೇಕು ಎಂಬ ತುಡಿತವಿದ್ದ ಹಿನ್ನೆಲೆಯಲ್ಲಿ ಹೊಸ ಅವಕಾಶ ದೊರೆತಿದೆ. ಹಾಲಿವುಡ್‌ನ‌ಲ್ಲಿ ಈಗಾಗಲೇ ಸಿನೆಮಾವು ಹೊಸ ನಿರೀಕ್ಷೆ ಮೂಡಿಸಿದ್ದು, ಚೀನಾ ಸೇರಿದಂತೆ ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ ಎನ್ನುತ್ತಾರೆ ಯಜ್ಞೆಶ್ ಶೆಟ್ಟಿ. 

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

10-uv-fusion

Theater: ಅಳಿವು ಉಳಿವಿನ ದವಡೆಯಲ್ಲಿ ರಂಗಭೂಮಿ

9-fusion

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

8-uv-fusion

Smell of First Rain: ಹೊಸಮಳೆಯ ಮೃಣ್ಮಯ ಗಂಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.