ಶೂಟಿಂಗ್ ಮುಗಿಸಿದ ತಂಬಿಲ
Team Udayavani, Jan 10, 2019, 7:12 AM IST
ತುಳು ಚಿತ್ರರಂಗದ ಚೊಚ್ಚಲ ಮಹಿಳಾ ನಿರ್ದೇಶಕಿ ಎಂಬ ಹೆಸರು ಪಡೆದ ಅಶ್ವಿನಿ ಕೋಟ್ಯಾನ್ ಅವರು ಆ್ಯಕ್ಷನ್ ಕಟ್ ಹೇಳಿರುವ ‘ತಂಬಿಲ’ ಸಿನೆಮಾ ಈಗ ಶೂಟಿಂಗ್ ಪೂರ್ಣಗೊಳಿಸಿದೆ. ‘ನಮ್ಮ ಕುಡ್ಲ’ ಸಿನೆಮಾದ ಮೂಲಕ ತುಳು ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಅಶ್ವಿನಿ ಕೋಟ್ಯಾನ್ ಅವರು ಈಗ ‘ತಂಬಿಲ’ ಸಿನೆಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ.
ಧಾರ್ಮಿಕ ಹಿನ್ನೆಲೆಯ ಸ್ಪರ್ಶದೊಂದಿಗೆ ಸಾಗುವ ಕೌಟುಂಬಿಕ ಕಥೆಯಿರುವ ತಂಬಿಲ ಸಿನೆಮಾವು ಮಹಿಳೆಯರನ್ನು ಗಮನದಲ್ಲಿಟ್ಟು ಅವರ ನಿರೀಕ್ಷೆಯಿಂದ ರೆಡಿ ಮಾಡಲಾಗಿದೆ. ವಿಶೇಷವೆಂದರೆ, ಕರಾವಳಿಯಲ್ಲಿ ಆ್ಯಂಕರ್ ಆಗಿ ಹೆಸರು ಮಾಡಿರುವ ಲಕ್ಷ್ಮೀಶ ಸುವರ್ಣ ಈ ಸಿನೆಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಟರ್ಪ್ಲೈ ಫಿಲ್ಮ್ಸ್ ಮತ್ತು ಶ್ರೀ ಪರಾಶಕ್ತಿ ಕ್ರಿಯೇಶನ್ ಬ್ಯಾನರ್ನಡಿಯಲ್ಲಿ ಸಿದ್ಧವಾಗುತ್ತಿರುವ ಈ ಸಿನೆಮಾಕ್ಕೆ ಸಚಿನ್ ಸುವರ್ಣ ಅವರ ಕಥೆ, ಚಿತ್ರಕಥೆಯಿದೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ವಿದ್ಯಾ ಸುವರ್ಣ, ಲೋಕೇಶ್ ಪೂಜಾರಿ ಮತ್ತು ಸಾಯಿ ನೋಂಡಾ ಅವರು ಈ ಸಿನೆಮಾ ನಿರ್ಮಿಸಿದ್ದಾರೆ. ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡುವ ರೀತಿಯಲ್ಲಿ ಸಿನೆಮಾ ಸಿದ್ಧಗೊಳಿಸಲಾಗಿದೆ ಎಂಬುದು ಸಿನೆಮಾ ತಂಡದ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್