ಕುದ್ಕನ ಮದ್ಮೆ ಮುಗಿಂಡ್!
Team Udayavani, Feb 28, 2019, 7:34 AM IST
ಖ್ಯಾತ ನಿರ್ದೇಶಕ ಎ.ವಿ. ಜಯರಾಜ್ ನಿರ್ದೇಶನದ ಕೋಸ್ಟಲ್ ವುಡ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ ‘ಕುದ್ಕನ ಮದ್ಮೆ’ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಿದೆ. ಸಣ್ಣ ಪುಟ್ಟ ದೃಶ್ಯಗಳು ಮಾತ್ರ ಬಾಕಿಯಿದೆ. ಉಳಿದಂತೆ ಡಬ್ಬಿಂಗ್ ಕೆಲಸಕ್ಕಾಗಿ ಕುದ್ಕನ ಮದ್ಮೆ ಶಿಪ್ಟ್ ಆಗಿದೆ.
ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಕಾರ್ತಿಕ್ ರಾವ್, ಜೀವನ್ ಉಳ್ಳಾಲ್ ಸೇರಿದಂತೆ ಹಲವು ಸ್ಟಾರ್ ನಟರು ಸಿನೆಮಾದಲ್ಲಿದ್ದಾರೆ. ಪೃಥ್ವಿ ಅಂಬರ್, ದೇವಿಪ್ರಕಾಶ್ ಹಾಗೂ ಶೀತಲ್ ನಾಯಕ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆಮರಾದಲ್ಲಿ ಮಹಾಬಲೇಶ್ವರ ಹೊಳ್ಳ, ಸಂಗೀತದಲ್ಲಿ ರಾಹುಲ್ ಕೈಜೋಡಿಸಿದ್ದಾರೆ.
ಒಂದೆಡೆ ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿಕೊಂಡಾಗ ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ಮಾತೆಂದರೆ ಕುದ್ಕಕ್ ಮದಿಮೆ ಎಂದು. ಹೀಗಾಗಿ ತುಳುನಾಡಿನಾದ್ಯಂತ ಈ ಮಾತು ಬಹು ಜನಜನಿತ. ಆಗುವ ಹೋಗುವ ಮಾತೆಲ್ಲ ಕುದ್ಕನ ಮದ್ಮೆಯ ಹೆಸರೇಳಿದಾಗ ಆಗುವುದಿಲ್ಲ ಎಂದೂ ಕೂಡ ಮಾತನಾಡುವುದಿದೆ.
ವಿಶೇಷವೆಂದರೆ ತುಳುನಾಡಿನ ಪ್ರೀತಿಯ ಹೆಸರುಗಳನ್ನೇ ಟೈಟಲ್ ಆಗಿಟ್ಟು ಕೊಂಡು ಸಿನೆಮಾ ಮಾಡುವ ಕೋಸ್ಟಲ್ ವುಡ್ನಲ್ಲಿ ಇಂತಹ ಪಂಚಿಂಗ್ ಟೈಟಲ್ ಜನರ ಆಸಕ್ತಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ