ಪಶ್ಚಿಮ  ಘಟ್ಟದ ತಪ್ಪಲಿನಲ್ಲಿ


Team Udayavani, Mar 21, 2019, 10:01 AM IST

21-march-14.jpg

ಆಧುನಿಕ, ಯಾಂತ್ರಿಕ ಜೀವನದಿಂದ ದೂರ ಇರಬೇಕೆನಿಸಿದಾಗ ಪರಿಸರದ ಮಡಿಲಲ್ಲಿ ಒಂದು ದಿನ ಕಳೆಯಬೇಕು. ಪರಿಸರವನ್ನು ಪ್ರೀತಿಸುವ ಹಾಗೂ ಪರಿಸರದ ಬಗ್ಗೆ ಕಾಳಜಿ ಇರುವ ನಮಗೆ ನಮ್ಮ ವಿದ್ಯಾರ್ಥಿಗಳಲ್ಲಿಯೂ ಸಹಿತ ಇದನ್ನು ಬೆಳೆಸಲು ಪ್ರಯತ್ನಿಸುವ ಅಸೆಯಿಂದ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಸುವ ಐತಿಹಾಸಿಕ ಸ್ಥಳಗಳ ಪ್ರವಾಸ ಕಾರ್ಯಕ್ರಮದ ಬದಲು ಪಶ್ಚಿಮಘಟ್ಟಕ್ಕೆ ಚಾರಣವನ್ನು ಕೈಗೊಳ್ಳುವ ನಿರ್ಣಯಕೈಗೊಂಡೆವು.

ಪಶ್ಚಿಮಘಟ್ಟದ ಶೋಲಾರಣ್ಯ ಹಾಗೂ ನದಿ ಮೂಲದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಮಹದಾಸೆಯಿಂದ ಅಧ್ಯಯನ ಚಾರಣವನ್ನು ದಕ್ಷಿಣ ಕನ್ನಡ ಜಿಲ್ಲೆಯು ಪರಿಸರವಾದಿ ದಿನೇಶ್‌ ಹೊಳ್ಳರ ನೇತೃತ್ವದಲ್ಲಿ ಸಹ್ಯಾದ್ರಿ ಸಂಚಯ ಸಹಯೋಗದೊಂದಿಗೆ ಮಾರ್ಚ್‌ 2ರಂದು ಶ್ರೀನಿವಾಸ ಬಿ.ಎಡ್‌. ಕಾಲೇಜಿನ 27 ವಿದ್ಯಾರ್ಥಿಗಳೊಂದಿಗೆ ನಾನೂ ಸೇರಿ ಕೊಂಡೆ. ಕೆಲವು ವಿದ್ಯಾರ್ಥಿಗಳಿಗೆ ಚಾರಣದ ಅನುಭವವಿದ್ದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಮೊದಲ ಚಾರಣವಾಗಿತ್ತು.

ನಮ್ಮ ತಂಡ ದಿನೇಶ್‌ ಹೊಳ್ಳ ಹಾಗೂ ಇಬ್ಬರು ಉಪನ್ಯಾಸಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿರುವ 25 ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳೊಂದಿಗೆ ಬೆಳಗ್ಗೆ 6 ಗಂಟೆಗೆ ಖಾಸಗಿ ವಾಹನದಲ್ಲಿ ಹೊರಟು ಬೆಳ್ತಂಗಡಿಯಲ್ಲಿ ಉಪಾಹಾರವನ್ನು ಮುಗಿಸಿ, ಅಲ್ಲಿಂದ ಮಧ್ಯಾಹ್ನದ ಆಹಾರವನ್ನು ಕಟ್ಟಿಸಿಕೊಂಡು ಸುಮಾರು 10 ಗಂಟೆಗೆ ಪಶ್ಚಿಮ ಘಟ್ಟದ ತಪ್ಪಲಿಗೆ ಬಂದೆವು. ಇಲ್ಲಿನ ಕಾಜೂರಿನಿಂದ ಚಾರಣ ಆರಂಭಿಸಿದೆವು.

ಮೊದಲು 4 ಕಿ.ಮೀ. ದಟ್ಟ ಕಾಡುಗಳ ನಡುವೆ ಒಣಗಿದ ಎಲೆಗಳ ಮೇಲೆ ಹೆಜ್ಜೆಯನ್ನಿಡುತ್ತಾ ಸಾಗುವಾಗ ಬಿಸಿಲು ಏರಿದ್ದರೂ ಮರಗಳ ನೆರಳಿನ ತಂಪಿನಲ್ಲಿ ಆಯಾಸವಿಲ್ಲದೇ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಬೆಟ್ಟಗಳನ್ನು ಹತ್ತಿ ಇಳಿದೆವು. ಅಲ್ಲಿಂದ ಮುಂದೆ ನಮ್ಮ ಚಾರಣಕ್ಕೆ ಮೆರಗು ಬಂದದ್ದು ಮಕ್ಕಿ ಜಲಪಾತ ತಲುಪಿದಾಗ.

ಪಶ್ಚಿಮ ಘಟ್ಟದ ಕಾಡುಗಳ ಮಧ್ಯೆ ಹರಿದು ಬರುವ ಈ ಜಲಪಾತದ ನೀರಿನ ಬೋರ್ಗರೆತ ಮತ್ತು ಆಕರ್ಷಣೆ ನಮ್ಮ ವಿದ್ಯಾರ್ಥಿಗಳ ದಣಿವನ್ನು ಆರಿಸಿತ್ತು. ಸಾಕಷ್ಟು ಹೊತ್ತು ಜಲಪಾತದ ನೀರಿನಲ್ಲಿ ಅವ ರು ಆಡಿ ನಲಿದರು. ಸುಮಾರು ಒಂದು  ಗಂಟೆ ಅಲ್ಲಿ ಕಳೆದು ಅನಂತರ ಅರಣ್ಯ ರಕ್ಷಾ ಪಾಲಕರ ವಸತಿಯಲ್ಲಿ ವಿಶ್ರಮಿಸಿ, ಮಧ್ಯಾಹ್ನದ ಆಹಾರವನ್ನು ಸೇವಿಸಿ,ಯಾವುದೇ ಕಸವನ್ನು ಅಲ್ಲಿ ಬಿಡದೇ ಒಟ್ಟುಗೂಡಿಸಿ ನಮ್ಮೊಂದಿಗೆ ವಾಪಸ್‌ ತಂದೆವು.

ಚಾರಣದ ಹಾದಿಯಲ್ಲಿ ಪ್ರಕೃತಿಯನ್ನು ಆಹ್ಲಾದಿಸುವುದರೊಂದಿಗೆ ಪರಿಸರ ಪ್ರೇಮಿ ದಿನೇಶ್‌ ಹೊಳ್ಳ ಅವರು ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಮಹತ್ವದ ಬಗ್ಗೆ ಪರಿಚಯಿಸಿದರು. ಶೋಲಾ ಕಾಡು ಹಾಗೂ ಅಲ್ಲಿನ ಹುಲ್ಲುಗಾವಲು ಪ್ರದೇಶಗಳು ನಮ್ಮ ನದಿಗಳ ನೀರಿನ ಮೂಲಕ್ಕೆ ಯಾವ ರೀತಿಯಾಗಿ ಸಹಾಯ ಮಾಡುತ್ತವೆ ಎಂದು ಕಾಡಿನಲ್ಲಿ ನೀರಿನ ಸೆಲೆಗಳನ್ನು ತೋರಿಸುತ್ತಾ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿಕೊಟ್ಟರು. ನಾವು ಹಿಂದಿರುಗುತ್ತಿರುವಾಗ ಇತ್ತೀಚಿಗಿನ ಪ್ರಕೃತಿ ವಿಕೋಪಕ್ಕೆ ಕಾರಣಗಳನ್ನು ತಿಳಿಸುತ್ತಾ, ಬಂಡೀಪುರದಲ್ಲಿ ನಡೆದ ಕಾಡ್ಗಿಚ್ಚನ್ನು ನೆನಪಿಸುತ್ತಿರುವಾಗಲೇ ನಮ್ಮ ಎದುರೇ ನಡೆದ ದುರಂತವೆಂದರೆ ನಾವು ಅರಣ್ಯ ಇಲಾಖೆಯ ಅನುಮತಿ ಪಡೆದು ಅರಣ್ಯ ಪಾಲಕರ ಜತೆ ಚಾರಣಕ್ಕೆ ಹೋಗಿರುವಾಗಲೇ ಯಾರೋ ದುಷ್ಕರ್ಮಿಗಳು ಕಾಡಿನಲ್ಲಿ ಬೆಂಕಿ ಇಟ್ಟು ಪಲಾಯನ ಮಾಡಿದ್ದರು. ಬೆಂಕಿಯನ್ನು ಕಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡಲೇ ಗೆಲ್ಲು ಸೊಪ್ಪಿನಿಂದ ಹರಡುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆಮೇಲೆ ಅರಣ್ಯ ಪಾಲಕರು ಅರಣ್ಯ ಇಲಾಖೆಗೆ ಕರೆ ಮಾಡಿ ಬೆಂಕಿಯನ್ನು ನಂದಿಸಿದರು.

ಇದನ್ನು ನಾವು ತಡೆಯದೇ ಹೋಗಿ ದ್ದರೆ ಇಲ್ಲೂ ಒಂದು ದೊಡ್ಡ ದುರಂತ ಸಂಭವಿಸುತ್ತಿತ್ತು ಎಂಬ ವಿದ್ಯಾರ್ಥಿಗಳ ಮಾತು, ಇದಕ್ಕಾಗಿ ಒಮ್ಮತದ ಹೋರಾಟ ನಮ್ಮಲ್ಲಿ ಅಗತ್ಯ ಎಂಬ ಜಾಗೃತಿಯನ್ನು ಮೂಡಿಸುವಂತಿತ್ತು.

ಸಂಜೆ 6 ಗಂಟೆಗೆ ಬೆಟ್ಟವನ್ನು ಇಳಿದು ಬಂದಾಗ ಸೂರ್ಯಾಸ್ತವಾಗಿತ್ತು. ಸುಮಾರು 8 ಕಿ.ಮೀ. ವರೆಗೆ ಚಾರಣವನ್ನು ಆದಿನ ಪೂರೈಸಿದೆವು. ಕಾಡ್ಗಿಚ್ಚನ್ನು ಕಣ್ಣಾರೆ ಕಂಡ ಅನುಭವ ಹಾಗೂ ನೊಂದ ಮನಸ್ಸಿನೊಂದಿಗೆ ಎಲ್ಲರೂ ಪ್ರಕೃತಿಯನ್ನು ಕಾಪಾಡುವ ಪಣವನ್ನು ತೊಟ್ಟು ಅಂದಿನ ಚಾರಣವನ್ನು ಮುಕ್ತಾಯಗೊಳಿಸಿದೆವು. 

ರೂಟ್‌ ಮ್ಯಾಪ್‌
೙ ಮಂಗಳೂರಿನಿಂದ ಬೆಳ್ತಂಗಡಿಗೆ 60 ಕಿ.ಮೀ. ದೂರ.
೙ ಬೆಳ್ತಂಗಡಿ ಸಮೀಪದಲ್ಲೇ ಇದೆ ಕಾಜೂರು.
೙ಸಾಕಷ್ಟು ಬಸ್‌ ಸೌಲಭ್ಯಗಳಿವೆ.
೙ಚಾರಣ ಹೊರಡುವಾಗ ಊಟ, ಉಪಾಹಾರ, ನೀರು ಜತೆಯಲ್ಲಿರಲಿ.
೙ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಕ್ಕಿ ಜಲಪಾತ ನೋಡಬಹುದು.
೙ಮಾರ್ಗದರ್ಶಕರಿದ್ದರೆ ಪಶ್ಚಿಮ ಘಟ್ಟಕ್ಕೆ ಹೋಗುವುದು, ಬರುವುದು ಸುಲಭ.

ಡಾ| ಜಯಶ್ರೀ ಕೆ., ಮಂಗಳೂರು

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.