ಕೋಸ್ಟಲ್‌ವುಡ್‌ಗೆ ಅನಂತ ಅಪ್ಪುಗೆ !


Team Udayavani, Feb 21, 2019, 7:11 AM IST

21-february-9.jpg

ಕೇವಲ ತುಳು ಭಾಷಿಕ ಜನರಿಗೆ ಮಾತ್ರ ಎಂದು ಹಿಂದೊಮ್ಮೆ ನಿಗದಿಯಾಗಿದ್ದ ತುಳು ಸಿನೆಮಾಗಳು ಇಂದು ಆ ಗಡಿಯನ್ನು ಮೀರಿ ನಿಂತಿದೆ. ತುಳುವೇತರರು ಕೂಡ ತುಳು ಸಿನೆಮಾ ನೋಡುವಂತಾಗಬಹುದು ಎಂಬುದು ಸದ್ಯದ ಫಿಲೋಸಫಿ. ಅಷ್ಟರಮಟ್ಟಿಗೆ ತುಳು ಸಿನೆಮಾಗಳು ತುಳುವೇತರ ಭಾಗದಲ್ಲಿಯೂ ಕಮಾಲ್‌ ಮಾಡಿದೆ ಎಂಬುದು ಹೆಮ್ಮೆಯ ಸಂಗತಿ. ಅಂದಹಾಗೆ, ಕೋಸ್ಟಲ್‌ವುಡ್‌ನ‌ ಬಗ್ಗೆ ಸ್ಯಾಂಡಲ್‌ವುಡ್‌ನ‌ ಮಂದಿಗೆ ‘ಇಸ್ಕ್’ ಆಗಿದೆ. ಇಲ್ಲಿ ಏನೋ ಒಂದು ಕಮಾಲ್‌ ಆಗಿದೆ ಎಂಬುದು ಅವರ ಯೋಚನೆ. ಹೀಗಾಗಿ ತುಳು ಸಿನೆಮಾದ ಬಗ್ಗೆ ಗಾಂಧೀನಗರ ಮಾತನಾಡುವಂತಾಗಿದೆ.

ಕೆಲವೇ ದಿನದ ಹಿಂದೆ ಸ್ಯಾಂಡಲ್‌ವುಡ್‌ನ‌ ಖ್ಯಾತ ನಟರು ಮಂಗಳೂರಿಗೆ ಬಂದಿದ್ದಾಗ ತುಳು ಸಿನೆಮಾದ ಬಗ್ಗೆ ಮಾತನಾಡಲು ಅವರು ಮರೆತಿಲ್ಲ. ಕೋಸ್ಟಲ್‌ವುಡ್‌ ಪ್ರಸ್ತುತ ಶೈನಿಂಗ್‌ ಆಗುತ್ತಿದ್ದು, ಇದು ಬಹುದೊಡ್ಡ ಗೆಲುವು ಎಂಬ ರೀತಿಯಲ್ಲಿ ಅವರು ಮಾತನಾಡಿದ್ದಾರೆ.

ವಿಶೇಷವೆಂದರೆ ತುಳು ಸಿನೆಮಾ ‘ಇಂಗ್ಲಿಷ್‌’ನಲ್ಲಿ ಅನಂತ್‌ನಾಗ್‌ ಅಧ್ಯಾಪಕರ ಪಾತ್ರದಲ್ಲಿದ್ದಾರೆ. ಪ್ರಸ್ತುತ ಸಿನೆಮಾದ ಶೂಟಿಂಗ್‌ ಕೂಡ ನಗರದಲ್ಲಿ ನಡೆಯುತ್ತಿವೆ. ಬಹುಭಾಷೆಗಳಲ್ಲಿ ಅಭಿನಯಿಸಿದ ಅನಂತ್‌ ನಾಗ್‌ ಅವರು ಮೊದಲ ಬಾರಿಗೆ ತುಳು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತುಳುವಿನಲ್ಲಿ ಪ್ರಸ್ತುತ ಹೊಸ ಹೊಸ ಸಿನೆಮಾಗಳು ಬರುತ್ತಿದ್ದು, ಇಂಡಸ್ಟ್ರಿಗೆ ಹೊಸ ಅವಕಾಶಗಳು ಎದುರಾಗುತ್ತಿದೆ. ತುಳು ಸಿನೆಮಾದ ಗುಣಮಟ್ಟ ಕೂಡ ಉತ್ತಮವಾಗಿ ಬರುತ್ತಿರುವ ಕಾರಣದಿಂದ ತುಳು ಸಿನೆಮಾ ಲೋಕಕ್ಕೆ ಇನ್ನಷ್ಟು ಭವಿಷ್ಯವಿದೆ.

ಇಲ್ಲಿ ಹೊಸ ಪ್ರತಿಭೆಗಳು ಮೂಡಿಬರುತ್ತಿರುವುದು ಸಿನೆಮಾ ಲೋಕಕ್ಕೆ ಹೊಸ ಗಿಫ್ಟ್ ಎಂದು ಅವರು ಮಾತನಾಡಿದ್ದಾರೆ. ತುಳುವಿನಲ್ಲಿ ಮುಂದೆ ಬರುವ ಸಿನೆಮಾಗಳಿಗೆ ಅವಕಾಶ ಸಿಕ್ಕರೆ ನಾನಂತು ಅಭಿನಯಿಸಲು ರೆಡಿ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.

ಇನ್ನು, ಪುನೀತ್‌ ರಾಜ್‌ ಕುಮಾರ್‌ ‘ನಟ ಸಾರ್ವಭೌಮ’ ಸಿನೆಮಾದ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಾಗ ‘ನಟ ಸಾರ್ವಭೌಮ’ನಗಿಂತಲೂ ಜಾಸ್ತಿ ತುಳು ಸಿನೆಮಾ ಇಂಡಸ್ಟ್ರಿ ಬಗ್ಗೆ ಮಾತನಾಡಿದ್ದಾರೆ ಎಂಬುದು ವಿಶೇಷ. ಮತ್ತೊಂದು ವಿಶೇಷವೆಂದರೆ ತುಳುವಿನಲ್ಲಿ ಅವರು ಅಭಿಮಾನಿಗಳ ಜತೆಗೆ
ಮಾತನಾಡಿದ್ದಾರೆ. ಕನ್ನಡ ಸಿನೆಮಾವನ್ನು ಗೆಲ್ಲಿಸುವ ಜತೆಗೆ ತುಳು ಸಿನೆಮಾವನ್ನು ಗೆಲ್ಲಿಸಬೇಕು. ಈಗಾಗಲೇ ‘ಉಮಿಲ್‌’ ಎಂಬ ಸಿನೆಮಾದಲ್ಲಿ ಹಾಡೊಂದನ್ನು ಹಾಡಿದ್ದೇನೆ. ವಿಭಿನ್ನ ರೀತಿಯಲ್ಲಿ ತುಳು ಸಿನೆಮಾಗಳು ಬರುತ್ತಿದ್ದು, ಇದು ಇನ್ನಷ್ಟು ವಿಸ್ತಾರ ಕಾಣಬೇಕಿದೆ. ತುಳುವೇತರ ಭಾಗದಲ್ಲಿಯೂ ತುಳು ಸಿನೆಮಾ ಗೆಲ್ಲಬೇಕಿದೆ ಎಂದು ಶುಭಕೋರಿದ್ದರು.

ಮುಂದುವರಿದ ಭಾಗವೆಂಬಂತೆ ಈ ಹಿಂದೆ, ಚಿತ್ರನಟರಾದ ಶಿವರಾಜ್‌ ಕುಮಾರ್‌, ದರ್ಶನ್‌, ಸುದೀಪ್‌ ಈಗಾಗಲೇ ತುಳು ಸಿನೆಮಾವನ್ನು ಕೊಂಡಾಡಿದ್ದಾರೆ. ತುಳುವಿನ ಮೂರು ಸಿನೆಮಾದ ಆಡಿಯೋ ರಿಲೀಸ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ನಟರು ತುಳು ಸಿನೆಮಾವನ್ನು ಮೆಚ್ಚಿದ್ದಾರೆ. ಇದು ತುಳು ಸಿನೆಮಾದ ಐಡೆಂಟಿಟಿಯನ್ನು ಹೆಚ್ಚು ಮಾಡಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಚಿತ್ರನಟ ದರ್ಶನ್‌ ಅವರೇ ಅಮ್ಮೆರ್‌ ಪೊಲೀಸಾ ಚಿತ್ರದ ಆಡಿಯೋ ರಿಲೀಸ್‌ ಮಾಡಿದ್ದಾರೆ. ‘ಕಟಪಾಡಿ ಕಟ್ಟಪ್ಪೆ’ ಸಿನೆಮಾದ ಆಡಿಯೋ ರಿಲೀಸ್‌ ಅನ್ನು ಕಿಚ್ಚ ಸುದೀಪ್‌ ಮಂಗಳೂರಿನಲ್ಲಿ ನಡೆಸಿದ್ದರು.

‘ದಗಲ್‌ಬಾಜಿಲು’ ಸಿನೆಮಾದ ಆಡಿಯೋವನ್ನು ಶಿವರಾಜ್‌ ಕುಮಾರ್‌ ಬೆಂಗಳೂರಿನಲ್ಲಿ ನಡೆಸಿದ್ದರು. ಈ ಮಧ್ಯೆ ನಿರ್ದೇಶಕ ಯೋಗರಾಜ್‌ ಭಟ್‌ ಮಂಗಳೂರಿಗೆ ಬಂದಿದ್ದಾಗ ತುಳು ಸಿನೆಮಾದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ತಮಿಳು-ತೆಲುಗು ಸಿನೆಮಾದಲ್ಲಿ ಬಹಳಷ್ಟು ಫೇಮಸ್‌ ಆಗಿರುವ ಮೂಲತಃ ಕನ್ನಡಿಗ ಸುಮನ್‌ ಅವರು ಕೂಡ ತುಳು ಸಿನೆಮಾದಲ್ಲಿ ಅಭಿನಯಿಸುವ ಆಸಕ್ತಿ ತೋರಿದ್ದಾರೆ. ತುಳು ಸಿನೆಮಾದಲ್ಲಿ ಅವಕಾಶ ಸಿಕ್ಕರೆ ನಾನು ಅಭಿನಯಿಸಲು ರೆಡಿ ಎಂದು ಇತ್ತೀಚೆಗೆ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದರು. 

 ದಿನೇಶ್‌ ಇರಾ

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.