ಆಗಸ್ಟ್ ನಲ್ಲಿ ತಿರುಗಲಿದೆ ಗಿರಿಗಿಟ್ !
Team Udayavani, Mar 21, 2019, 7:23 AM IST
ಕುಡ್ಲದ ಹುಡುಗ, ಲವ್ಲಿಸ್ಟಾರ್ ರೂಪೇಶ್ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ‘ಗಿರಿಗಿಟ್’ ಸಿನೆಮಾದ ಕೆಲಸಗಳು ಬಿರುಸಿನಿಂದಲೇ ನಡೆಯುತ್ತಿವೆ. ಈಗಾಗಲೇ ಶೂಟಿಂಗ್ ಎಲ್ಲ ಪೂರ್ಣಗೊಳಿಸಿದ ಈ ಸಿನೆಮಾ ಕೊನೆಯ ಹಂತದ ಡಬ್ಬಿಂಗ್ನಲ್ಲಿ ಬ್ಯುಸಿಯಾಗಿದೆ. ಹೆಚ್ಚಾ ಕಡಿಮೆ ಇನ್ನು ಎರಡು ತಿಂಗಳಲ್ಲಿ ಉಳಿದ ಸಿದ್ಧತೆ ಮಾಡಿಕೊಂಡರೆ ಸಿನೆಮಾ ರೆಡಿಯಾಗಲಿದೆ. ಜೂನ್- ಜುಲೈ ವೇಳೆ ಮಳೆಯ ಕಾರಣದಿಂದ ಆಗಸ್ಟ್ ವೇಳೆಗೆ ಸಿನೆಮಾ ರಿಲೀಸ್ ಮಾಡಬೇಕು ಎಂಬುದು ಚಿತ್ರ ತಂಡದ ಅಭಿಪ್ರಾಯ.
ಅಂದಹಾಗೆ ‘ಗಿರಿಗಿಟ್’ ಸಾಮಾಜಿಕ ಜಾಲತಾಣದ ಮುಖೇನ ಬಹಳಷ್ಟು ಸುದ್ದಿಯಲ್ಲಿದೆ. ಅರವಿಂದ ಬೋಳಾರ್ ಅವರು ಡಬ್ಬಿಂಗ್ ವೇಳೆಯಲ್ಲಿ ‘ಅಯ್ಯೋ ದೇವಾ..’ ಎಂಬ ಡೈಲಾಗ್, ಬಲೆ ತೆಲಿಪಾಲೆ ಖ್ಯಾತಿಯ ಪ್ರಸನ್ನ ಶೆಟ್ಟಿ ಬೈಲೂರು ಅವರ ಡೈಲಾಗ್ ಸಾಕಷ್ಟು ವೈರಲ್ ಆಗಿದೆ. ಅಲ್ಲಿಗೆ ಗಿರಿಗಿಟ್ ಸಿನೆಮಾ ಗಿರಿಗಿಟ್ ರೂಪದಲ್ಲಿ ಕರಾವಳಿಯಾದ್ಯಂತ ಸೌಂಡ್ ಮಾಡುತ್ತಿರುವುದು ಪಕ್ಕಾ ಎಂಬಂತಾಗಿದೆ.
ಪೂರ್ಣ ಪ್ರಮಾಣದಲ್ಲಿ ಹಾಸ್ಯ ಪ್ರಧಾನ ಸಿನೆಮಾವಾಗಿರುವ ಗಿರಿಗಿಟ್ ಯುವ ಸಮುದಾಯವನ್ನು ಸೆಳೆಯುವ ಕಥಾ ಹಂದರವನ್ನು ಹೊಂದಿದೆ. ಧಾರಾವಾಹಿ ನಟಿ ಶಿಲ್ಪಾ ಶೆಟ್ಟಿ ಅವರು ಈ ಚಿತ್ರದಲ್ಲಿ ರೂಪೇಶ್ ಗೆ ನಾಯಕಿ. ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ರೂಪೇಶ್ ಶೆಟ್ಟಿಯದ್ದೇ ಆಗಿದೆ. ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಅವರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ.
ಅಂದಹಾಗೆ, ನವೀನ್ ಡಿ. ಪಡೀಲ್ ಈ ಸಿನೆಮಾದಲ್ಲಿ ಮಿಲಿಟ್ರಿ ಆಫೀಸರ್ ಗೆಟಪ್ನಲ್ಲಿ ಇರಲಿದ್ದಾರೆ. ಈ ರೋಲ್ ನಲ್ಲಿ ಪಡೀಲ್ಅವರಿಗೆ ಮೊದಲ ಅನುಭವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ