ಕೋಸ್ಟಲ್‌ವುಡ್‌ಗೆ ಸಿಕ್ಕಿತು ಮಾಜಿ ಮುಖ್ಯಮಂತ್ರಿ ಪವರ್‌!


Team Udayavani, Feb 28, 2019, 7:20 AM IST

28-february-8.jpg

ಕೋಸ್ಟಲ್‌ವುಡ್‌ನ‌ಲ್ಲಿ ರಾಜಕೀಯ ಇದೆ ಎಂಬ ಮಾತು ಸಹಜವಾಗಿಯೇ ಕೇಳಿಬರುತ್ತಿತ್ತು. ಇಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ ಎಂಬ ವಾತಾವರಣವೂ ಇದೆಯಂತೆ. ಇಂತಿಪ್ಪ ಕಾಲದಲ್ಲಿ ರಾಜಕೀಯದ ವಿಷಯವನ್ನೇ ಮುಖ್ಯವಾಗಿರಿಸಿಕೊಂಡು ತುಳು ಸಿನೆಮಾ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಆದರೆ, ಕೋಸ್ಟಲ್‌ವುಡ್‌ನ‌ ಒಳಗಿನ ರಾಜಕೀಯವಾ ಅಥವಾ ಕೋಸ್ಟಲ್‌ ವುಡ್‌ನ‌ ಹೊರಗಿನ ರಾಜಕೀಯ ಇದರಲ್ಲಿದೆಯಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಅಂದಹಾಗೆ, ಸೆಟ್ಟೇರಲಿರುವ ಹೊಸ ಸಿನೆಮಾದ ಹೆಸರು ‘ಮಾಜಿ ಮುಖ್ಯಮಂತ್ರಿ’. ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದಲ್ಲಿ ಈ ಸಿನೆಮಾ ಸಿದ್ಧವಾಗಲಿದೆ. ರಾಜೇಶ್‌ ಅವರು ಈಗಾಗಲೇ ‘ದೊಂಬರಾಟ’ ಸಿನೆಮಾ ಮಾಡಿದ್ದು, ಕೆಲವೇ ದಿನದಲ್ಲಿ ರಿಲೀಸ್‌ ಆಗಲಿರುವ ‘ಕಟಪಾಡಿ ಕಟ್ಟಪ್ಪ’ ಸಿನೆಮಾದ ನಿರ್ಮಾಪಕರೂ ಹೌದು. ಇದರ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಂಬ ಟೈಟಲ್‌ನಲ್ಲಿ ಸಿನೆಮಾ ಮಾಡಲು ಹೊರಟಿರುವ ಅವರು ಮುಂದೆ ರಾಜೇಶ್‌ ಬಂದ್ಯೋಡು ನಿರ್ದೇಶನದಲ್ಲಿ ‘ಜ್ಯೋತಿ ಸರ್ಕಲ್‌’ ಎಂಬ ಸಿನೆಮಾ ಮಾಡಲು ನಿಶ್ಚಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿನೆಮಾಕ್ಕೆ ಫೆ.28ರಂದೇ ಮುಹೂರ್ತ ನಡೆಯಲಿದೆ. ಮಂಗಳೂರು ಸುತ್ತಮುತ್ತ ಸಿನೆಮಾಕ್ಕೆ ಶೂಟಿಂಗ್‌ ನಡೆಯಲಿದ್ದು, ಮುಂದಿನ 1 ತಿಂಗಳವರೆಗೆ ಮಾಜಿಮುಖ್ಯಮಂತ್ರಿ ಸಿನೆಮಾ ಶೂಟಿಂಗ್‌ ಕಾಣಲಿದೆ. ಹಲವು ಸಿನೆಮಾಗಳಲ್ಲಿ
ಸಹನಿರ್ದೇಶನ ಮಾಡಿರುವ ತ್ರಿಶೂಲ್‌ ಶೆಟ್ಟಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಸಿನೆಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಕೆಲವೇ ದಿನದಲ್ಲಿ ಲೋಕಸಭಾ ಚುನಾವಣೆ ಎದುರಾಗುವ ಕಾರಣದಿಂದ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿದೆ. ಜನರೆಲ್ಲ ರಾಜಕೀಯದತ್ತ ಕಣ್ಣರಳಿಸಿ ನೋಡಲು ಶುರು ಮಾಡುತ್ತಾರೆ. ಅಂತಹ ಕಾಲದಲ್ಲಿ ತುಳು ಸಿನೆಮಾದಲ್ಲಿ ರಾಜಕೀಯದ ಚರ್ಚೆ ಆರಂಭವಾಗುತ್ತಿರುವುದು ಕುತೂಹಲದ ಸಂಗತಿ. ವಿಶೇಷವೆಂದರೆ ಈ ಸಿನೆಮಾ ತುಳುವಿನಲ್ಲಿ ಮಾತ್ರವಲ್ಲದೆ, ಕನ್ನಡದಲ್ಲಿಯೂ ಶೂಟಿಂಗ್‌ ಆಗಲಿದೆ.

‘ಕೃಷ್ಣ ತುಳಸಿ’ ಧಾರವಾಹಿಯಲ್ಲಿ ನಟಿಸಿದ್ದ ಸ್ವರಾಜ್‌ ಶೆಟ್ಟಿ ಈ ಸಿನೆಮಾದಲ್ಲಿ ಮುಖ್ಯರೋಲ್‌ನಲ್ಲಿದ್ದಾರೆ. ಹೀರೋಯಿನ್‌ ಯಾರು ಎಂಬುದು ಇನ್ನೂ ಫಿಕ್ಸ್‌ ಆಗಿಲ್ಲ. ಭೋಜರಾಜ್‌ ವಾಮಂಜೂರು ಸಹಿತ ಕರಾವಳಿಯ ಕಾಮಿಡಿ ಶ್ರೇಷ್ಠರು ಈ ಸಿನೆಮಾದಲ್ಲಿದ್ದಾರೆ ಎಂಬುದರ ಜತೆಗೆ ಹೊಸ ನಟರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂಬುದು ಚಿತ್ರ ತಂಡದ ಅಭಿಪ್ರಾಯ. ಈ ಮಧ್ಯೆ ಸಿನೆಮಾದ ಟೈಟಲ್‌ ‘ಮಾಜಿ ಮುಖ್ಯಮಂತ್ರಿ’ ಎಂದು ಫಿಕ್ಸ್‌ ಮಾಡಿದ ನಂತರ ಸ್ವಲ್ಪವಾದರೂ ರಾಜಕೀಯ ನಾಯಕರು ಸಿನೆಮಾದಲ್ಲಿ ಅಭಿನಯ ಮಾಡದಿದ್ದರೆ ಅಷ್ಟೇನು ಲುಕ್‌ ಇರಲ್ಲ.

ಹೀಗಾಗಿ ಕರಾವಳಿಯ ರಾಜಕೀಯದವರು ಕೂಡ ಸಿನೆಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಯಾರೆಲ್ಲ ಎಂಬುದು ಇನ್ನೂ ಫಿಕ್ಸ್‌ ಆಗಿಲ್ಲ. ಹೀಗಾಗಿ ಸಿನೆಮಾದಲ್ಲಿ ಸರ್‌ಪ್ರೈಸ್‌ ಇದೆ ಎಂಬುದಂತು ಗ್ಯಾರಂಟಿ. ಸಿನೆಮಾಕ್ಕೆ ಕೆಮರಾ ಉದಯ್‌ ಬಳ್ಳಾಲ್‌ ನಡೆಸಲಿದ್ದು, ಸಂಗೀತ ಪ್ರಕಾಶ್‌, ಸಾಹಿತ್ಯ ಸುರೇಶ್‌ ಬಲ್ಮಠ ಅವರದ್ದು. ಮಯೂರ್‌ ಶೆಟ್ಟಿ ಸಹ ನಿರ್ದೇಶಕರಾಗಿದ್ದಾರೆ. ಈ ಸಿನೆಮಾದ ಶೂಟಿಂಗ್‌ ಮುಗಿದ ಬಳಿಕ ಜ್ಯೋತಿ ಸರ್ಕಲ್‌ ಶೂಟಿಂಗ್‌ ರೆಡಿಯಾಗಲಿದೆ. ಇದರಲ್ಲಿ ಯಾರೆಲ್ಲ ಇದ್ದಾರೆ? ಕಥೆ ಏನು? ಎಂಬ ಬಗ್ಗೆ ಚಿತ್ರತಂಡ ಸದ್ಯಕ್ಕೆ ಮಾಹಿತಿ ನೀಡಿಲ್ಲ.

ದಿನೇಶ್‌ ಇರಾ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.