ಮಳೆಗಾಲ, ಆಹಾರ ಸೇವನೆ ಇರಲಿ ಎಚ್ಚರ
Team Udayavani, Jul 10, 2018, 3:21 PM IST
ಬಿಸಿಲ ಬೇಗೆಯಿಂದ ದಣಿದ ದೇಹಕ್ಕೆ ಮಳೆಗಾಲದ ಆರಂಭ ಖುಷಿ ಕೊಟ್ಟರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಆಹಾರ ಸೇವನೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲೇಬೇಕು. ಹೊರಗೆ ತೇವವಾದ ವಾತಾವರಣವಿರವುದರಿಂದ ಸೂಕ್ಷ್ಮ ಜೀವಾಣುಗಳಿಂದ ಅಜೀರ್ಣ, ಕಂಜಂಕ್ಟಿವಿಟಿಸ್, ಟೈಫಾಯಿಡ್ ಹಾಗೂ ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಬಗ್ಗೆ ಜಾಗ್ರತೆ ವಹಿಸುವುದು ಬಹುಮುಖ್ಯ.
1 ಮಳೆಗಾಲದಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ನೀರು ಕುದಿಸಿದಾಗ ಇದರಲ್ಲಿರುವ ಹಾನಿಕಾರಕ ಬಾಕ್ಟೀರಿಯಾ ಹಾಗೂ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ.
2 ಉಪ್ಪಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಲೇಬಾರದು. ಹೆಚ್ಚು ಉಪ್ಪು ಸೇವನೆಯಿಂದ ರಕ್ತದೊತ್ತಡದಲ್ಲಿ ಏರುಪೇರಾಗಬಹುದು. ಇದನ್ನು ತಪ್ಪಿಸಲು ಕಡಿಮೆ ಉಪ್ಪಿನಂಶವಿರುವ ಆಹಾರ ಬಳಸಬೇಕು.
3 ಮಳೆಗಾಲದಲ್ಲಿ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ. ಬೇಯಿಸದೇ ತಿನ್ನುವ (ಹಸಿ) ಆಹಾರದಿಂದ ಅಂತರ ಕಾಯ್ದುಕೊಳ್ಳಬೇಕು. ಈ ವಾತಾವರಣಕ್ಕೆ ಬೇಯಿಸಿದ ಆಥವಾ ಸುಟ್ಟ ಆಹಾರಗಳು ನಮ್ಮ ದೈನಂದಿನ ಆಹಾರದಲ್ಲಿದ್ದರೆ ಉತ್ತಮ. ಕತ್ತರಿಸಿಟ್ಟ ಹಣ್ಣು ಅಥವಾ ತೆರೆದಿಟ್ಟಿರುವ ಆಹಾರಗಳಿಂದ ದೂರವಿರಬೇಕು.
4 ಉತ್ಕರ್ಷಣ ನಿರೋಧಕಗಳಾದ ಹಸಿರು ಕಾಳುಗಳು, ಸಂದರ್ಬೋಯೋಚಿತವಾಗಿ ದೊರೆಯುವ ಹಣ್ಣುಗಳು, ಕುಂಬಳಕಾಯಿ, ಗೆಣಸುಗಳನ್ನು ಹೆಚ್ಚು ಬಳಸಬೇಕು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇನ್ನು ಹಸಿರು ಎಲೆ, ತರಕಾರಿಗಳು ಹಾಗೂ ಬೇರು ತರಕಾರಿಯನ್ನು ಬಳಸುವ ಮುನ್ನ ಸರಿಯಾಗಿ ತೊಳೆದು ಪರೀಕ್ಷಿಸಬೇಕು.
5 ಸೀಫುಡ್ನಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಉತ್ತಮ. ಯಾಕೆಂದರೆ ಇವುಗಳು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತವೆ. ತತ್ಪರಿಣಾಮ ಅಜೀರ್ಣ ಉಂಟಾಗುವ ಸಾಧ್ಯತೆ ಹೆಚ್ಚು.
6 ಮಸಾಲೆಯುಕ್ತ ಮತ್ತು ಹುಳಿ ಆಹಾರಗಳು ಮಳೆಗಾಲದಲ್ಲಿ ದೇಹದಲ್ಲಿ ಅಲರ್ಜಿಯನ್ನು ಉಂಟು ಮಾಡುತ್ತವೆ. ಇದರಿಂದ ದೇಹದಲ್ಲಿ ಸಣ್ಣ ಗುಳ್ಳೆಗಳು ಏಳುತ್ತವೆ. ಹೀಗಾಗಿ ಸಮತೋಲಿತ ಆಹಾರವನ್ನು ಬಳಸಬೇಕು.
7 ಜೇನುತುಪ್ಪ, ಪುದೀನ, ಶುಂಠಿ, ಕರಿಮೆಣಸು, ಬೆಳ್ಳುಳ್ಳಿ, ಅರಿಸಿನ ನಮ್ಮ ದಿನನಿತ್ಯದ ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಇವುಗಳು ರೋಗ ನಿರೋಧಕಗಳಾಗಿ ಕೆಲಸ ಮಾಡುತ್ತದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ