ಸಂಬಂಧದಲ್ಲಿ ಪ್ರೀತಿ, ವಿಶ್ವಾಸವೇ ಜೀವಾಳ 


Team Udayavani, Aug 6, 2018, 2:54 PM IST

6-agust-12.jpg

ನಿನ್ನ ಸಂಬಂಧಿಕರನ್ನು ನಾನೇ ಕೊಟ್ಟಿದ್ದೇನೆ, ಆದರೆ ನಿನ್ನ ಸ್ನೇಹಿತರನ್ನು ಮಾತ್ರ ನೀನೇ ಹುಡುಕಿಕೊಳ್ಳಬೇಕಪ್ಪಾ ಎಂದು ದೇವರು ನಮ್ಮನ್ನು ಸೃಷ್ಟಿಯಲ್ಲೇ ಹೇಳಿ ಕಳಿಸಿರುತ್ತಾನಂತೆ!

ಹೌದು, ಸಂಬಂಧಗಳು ನಿಜವಾಗಿಯೂ ದೇವರಿಂದಲೇ ನೀಡಲ್ಪಟ್ಟ ಒಂದು ಸುಂದರ ವರ. ಮಾನವ ಸಂಘ ಜೀವಿಯಾಗಿದ್ದು, ಒಂಟಿಯಾಗಿ ಬಾಳಲು ಸಾಧ್ಯವೇ ಇಲ್ಲ. ಒಂದು ಸಮಾಜದಲ್ಲಿದ್ದು ಪರಸ್ಪರ ಸಹಕರಿಸುತ್ತಾ ಜೀವನ ನಡೆಸುವುದರಿಂದ ಸುಖವಾದ ಬಾಳು ಸಾಧ್ಯ. ಆದರೆ ಸಮಾಜದ ಎಲ್ಲರೂ ಅತ್ಯಂತ ಆಪ್ತರಾಗಿರಲು ಸಾಧ್ಯವಿಲ್ಲ. ಆದ್ದರಿಂದಲೇ ದೇವರು ನಮಗೆ ತಾಯಿಯನ್ನು ಅತ್ಯಂತ ಅಪ್ತಳಾದ ಸಂಬಂಧಿಕಳನ್ನಾಗಿಸಿದ್ದಾನೆ. ಅನಂತರದ ಸ್ಥಾನದಲ್ಲಿ ಇತರರನ್ನು ಆಪ್ತರನ್ನಾಗಿಸಿದ್ದಾನೆ.

ಬಂಧುಗಳೊಂದಿಗೆ ಹಾಗೂ ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೂಲಕ ಜೀವನ ಸೊಗಸಾಗಲು ಸಾಧ್ಯ. ಅದೇ ರೀತಿ ಒಂಟಿತನ ಜೀವನವನ್ನು ರಸಹೀನವನ್ನಾಗಿಸಿ ಬದುಕನ್ನು ನೀರಸವಾಗಿರಿಸುತ್ತದೆ. ಒಂದು ಸಂಶೋಧನೆಯೊಂದರ ಪ್ರಕಾರ ಒಂಟಿಯಾಗಿರುವವರು ತಮ್ಮ ಒಂಟಿತನವನ್ನು ತಾಳಲಾರದೇ ಸಾಕುಪ್ರಾಣಿಗಳಲ್ಲಿ ತಮ್ಮ ಆತ್ಮೀಯರನ್ನು ಕಾಣುವ ಪ್ರಯತ್ನ
ಮಾಡುತ್ತಾರೆ. ನಾವು ಜೀವನದಲ್ಲಿ ಯಾಕೆ ಉತ್ತಮ ಸಂಬಂಧ, ಬಾಂಧವ್ಯವನ್ನು ಹೊಂದಬೇಕು ಎಂಬ ಪ್ರಶ್ನೆಗಳಿಗೆ ಜೀವನಾನುಭವದಲ್ಲೇ ಉತ್ತರಗಳು ಲಭಿಸುತ್ತವೆ.

ಒಂಟಿಬಾಳು ನರಕಕ್ಕೆ ಸಮಾನ ಎನ್ನುತ್ತದೆ ಸುಭಾಷಿತ. ಒಂಟಿಬಾಳು ಎಂದರೆ ಮದುವೆಯಾಗದೇ ಇರುವ ಬ್ರಹ್ಮಚಾರಿಗಳು ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ, ಸುತ್ತಮುತ್ತಲ ಎಲ್ಲರೊಂದಿಗೂ ತಮ್ಮ ನಂಟನ್ನು ಕಳೆದುಕೊಂಡು, ಯಾರೊಂದಿಗೂ ಬೆರೆಯದೇ, ಯಾರ ಸಹಾಯವನ್ನೂ ಪಡೆಯದೇ, ಯಾರಿಗೂ ಸಹಾಯ ಮಾಡದೇ ದೇವರಿಗೆ ಬಿಟ್ಟ ಹರಕೆಯ ಕುರಿಯ ತರಹ ತನ್ನ ಮನಸ್ಸಿಗೆ ತೋಚಿದ್ದನ್ನೇ ಮಾಡುತ್ತಾ ಕಾಲಕಳೆಯುವುದೇ ಒಂಟಿ ಜೀವನ. ಮನೆಯವರಿಂದ ದೂರಾಗಿದ್ದರೂ ತನ್ನ ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಾಮರಸ್ಯ ಹೊಂದಿರುವವರನ್ನು ಒಂಟಿ ಎನ್ನಲಾಗುವುದಿಲ್ಲ. ಒಟ್ಟಾರೆ ನಾಲ್ಕು ಜನರ ಮಧ್ಯೆ ಇದ್ದು ಒಬ್ಬರಿಗೊಬ್ಬರು ಸಹಕರಿಸಿಕೊಳ್ಳುವ ಪ್ರವೃತ್ತಿಯಿದ್ದರೆ ಜೀವನ ಸುಂದರವಾಗಿಲಿದೆ.

ಅವಲಂಬನೆಯೇ ಜೀವನದ ಜೀವಾಳ
ಈ ಜಗತ್ತಿನಲ್ಲಿ ಪ್ರತಿಯೊಂದೂ ಅವಲಂಬಿತವಾಗಿದೆ. ಇದನ್ನು ಚೈನ್‌ ರಿಲೇಶನ್‌ ಎನ್ನುತ್ತಾರೆ. ಇಂತಹ ಅವಲಂಬನೆಗಳೇ ನಿಸರ್ಗವನ್ನು ಜೋಡಿಗಳಾಗಿಸಿದೆ. ಪ್ರತಿ ಜೀವಿಯಲ್ಲಿಯೂ ಗಂಡು ಹೆಣ್ಣು ಜಾತಿಗಳನ್ನು ಸೃಷ್ಟಿಸಿ, ಒಂದು ಇನ್ನೊಂದಕ್ಕೆ ಪರಸ್ಪರ ಅವಲಂಬಿಸುವಂತೆ ಮಾಡಿದೆ. ಇದಕ್ಕೆ ಮನುಕುಲವೂ ಹೊರತಾಗಿಲ್ಲ. ಪ್ರತಿ ಗಂಡಿಗೂ ಒಂದು ಹೆಣ್ಣು ಎಂಬುದು ನಿಸರ್ಗ ಸೃಷ್ಟಿಸಿ. ಜೋಡಿಯಾಗಿರುವ ಭಾವನೆ ಪರಸ್ಪರರಿಗೆ ಅವಲಂಬಿತರಾಗುವ ಮೂಲಕ ನಿಸರ್ಗದ ನಿಯಮದ ಪಾಲನೆಯಾಗುತ್ತದೆ. ಅಂತೆಯೇ ನಮ್ಮ ಬಂಧು ಮಿತ್ರರ ನಡುವೆಯೂ ಪರಸ್ಪರ ಅವಲಂಬನೆಯೇ ಜೀವನ ಸುಖದ ತಳಪಾಯವಾಗಿದೆ. ಕೆಲವು ಸಂದರ್ಭದಲ್ಲಿ ಒಂಟಿಯಾಗಿಯೇ ಇರಬೇಕು ಎಂದು ಇಚ್ಚೆ ವ್ಯಕ್ತಗೊಂಡರೂ, ಒಂದಲ್ಲ ಒಂದು ದಿನ ತನಗೊಬ್ಬ ಸಂಗಾತಿ ಇದ್ದರೆ ಒಳ್ಳೆಯದಿತ್ತು ಎಂದು ಭಾವಿಸುವ ಸಮಯ ಬಂದೇ ಬರುತ್ತದೆ.

ಸಂಬಂಧದಲ್ಲಿದ್ದಾಗ ಸಂತಸ ಹೆಚ್ಚು
ಯಾವುದೇ ಸಂಬಂಧದಲ್ಲಿ ಕೇವಲ ಸುಖ ಮಾತ್ರ ಇರುತ್ತದೆ ಎಂದು ಹೇಳಲಾಗದು. ಯುಗಾದಿಯಲ್ಲಿ ನೀಡುವ ಬೇವು ಬೆಲ್ಲವೂ ಜೀವನದ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುವ ಚಿಹ್ನೆ. ಆದರೆ ಜೀವನದ ಮಧ್ಯೆ ಬರುವ ಕಷ್ಟಗಳನ್ನು ಎದುರಿಸಲು ನಮ್ಮ ಸಂಬಂಧಗಳೇ ಪ್ರೇರಣೆ ನೀಡುತ್ತವೆ. ಕಷ್ಟಗಳನ್ನು ಎದುರಿಸಿದ ನಡೆವ ಜೀವನ ಹೆಚ್ಚು ಸುಖ ನೀಡುತ್ತದೆ. ಸಂಬಂಧಗಳ ಮೂಲಕ ಸಿಗುವ ಸುಖಕ್ಕಾಗಿ ದುಃಖವನ್ನು ಎದುರಿಸಲೂ ಸಿದ್ಧರಿರುತ್ತಾರೆ. ಆದ್ದರಿಂದಲೇ ವಿಶ್ವದಾದ್ಯಂತ ವಿವಾಹ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಮಾನುಷ್ಯನ ಖನ್ನತೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಒಂಟಿತನಕ್ಕೆ ಪ್ರಮುಖವಾದ ಕಾರಣವಾಗಿರುವುದು ಕಂಡುಬರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಒಂಟಿಯಾಗಿರುವುದು ಮಾತ್ರವಲ್ಲ, ಸುತ್ತ ಮುತ್ತಲ ಜನರೊಂದಿಗೆ ಹೊಂದಿಕೊಳ್ಳದೇ ಇರುವುದೂ ಖನ್ನತೆಗೆ ಇನ್ನೊಂದು ಕಾರಣ.

ಸುರಕ್ಷೆ ಭಾವನೆ
ಒಂಟಿಯಾಗಿರದೇ ನಿಮ್ಮ ಜತೆಗೆ ಮನೆಯವರಿದ್ದಾಗ ನಮ್ಮಲ್ಲಿ ಸುರಕ್ಷೆಯ ಭಾವನೆ ಮೂಡುತ್ತದೆ. ಮನೆಗೆ ಹಿರಿಯರಾಗಿದ್ದವರಿಗೆ ತಮ್ಮನ್ನು ಅವಲಂಬಿಸಿದವರಿಗೆ ಸುರಕ್ಷೆ ನೀಡಬೇಕಾದ ಜವಾಬ್ದಾರಿ ಜೀವನದ ಹುಮ್ಮಸ್ಸನ್ನು ಹೆಚ್ಚಿಸಿದರೆ ಅವರ ಮನೆಯವರು ಹಿರಿಯರಿರುವ ಸುರಕ್ಷೆ ಜತೆಗೆ ನೆಮ್ಮದಿಯಿಂದಿರುತ್ತಾರೆ. ನಮ್ಮ ಜೀವನದಲ್ಲಿ ಸುರಕ್ಷೆಯೂ ಊಟ, ಬಟ್ಟೆ ಮತ್ತು ವಸತಿಗಳಂತೆಯೇ ಜೀವನಾವಶ್ಯವಾಗಿದೆ.  

 ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.