ಮದುಮಗಳ ಅಂದಕ್ಕೆ ಗೌನ್‌ ಶೃಂಗಾರ ಕಾವ್ಯ


Team Udayavani, Sep 21, 2018, 1:20 PM IST

21-sepctember-12.jpg

ಮದುವೆಗೆ ಸೀರೆಯೇ ಉಡಬೇಕು ಎಂಬ ಕಾಲ ಹೋಗಿದೆ. ಸೀರೆಯಲ್ಲೇ ಹೆಣ್ಮಕ್ಕಳ ಸೊಬಗು ಎಂದು ಮನೆಯ ಹಿರಿಯಜ್ಜಿಯೋ, ಅಮ್ಮನೋ ಮಾತು ಬೆಳೆಸಿದರೂ, ಬಿಟ್ಟು ಕೊಡುವವರಲ್ಲ ನಮ್ಮ ಹೆಣ್ಮಕ್ಳು. ಧಾರಾಕಾರ್ಯಕ್ಕೆ ಸೀರೆ ಉಟ್ಟು, ರಿಸೆಪ್ಷನ್‌ ಗೆ ಗೌನ್‌ನಲ್ಲೇ ಮಿಂಚಬೇಕೆಂಬ ಆಸೆಯೊಂದಿಗೇ ಹೊಸ ಗೌನ್‌ ಖರೀದಿಸಿ ಧರಿಸುವುದು ಹುಡುಗಿಯರ ಇಷ್ಟ. ಡಿಸೈನ್‌ ಹೊಂದಿರುವ ಫುಲ್‌ ಹ್ಯಾಂಡ್‌ ಗೌನ್‌ಗಳು ಆಕರ್ಷಕ ಲುಕ್‌ ನೀಡುತ್ತವೆ.

ಹಬ್ಬಗಳ ಸೀಸನ್‌ ಜತೆಗೆ ಮದುವೆ ಸೀಸನ್‌ ಕೂಡಾ ಶುರುವಾಗಿದೆ. ಹಬ್ಬಕ್ಕೊಂದು, ಮದುವೆಗೊಂದು ಇರಲಿ ಅಂತ ಬಟ್ಟೆಗಳ ಖರೀದಿಯೂ ಜೋರಾಗಿದೆ. ಇದರ ಜತೆ ಜತೆಗೆ ಮದುಮಗಳ ಸಿಂಗಾರಕ್ಕೂ ಹೊಸ ಬಟ್ಟೆಗಳು ಶೃಂಗಾರ ಕಾವ್ಯ ಹಾಡಿವೆ. ಮದುಮಗಳು ಮದುವೆ ಮಂಟಪಕ್ಕೆ ಬರುವಾಗ ಸೀರೆ ಉಡಲೇಬೇಕು ಎಂಬುದೆಲ್ಲ ಈಗ ಹಳೆ ಫ್ಯಾಶನ್‌ ಮಂತ್ರ. ಸದ್ಯ ಏನಿದ್ದರೂ, ಡ್ರೆಸ್‌ ತೊಟ್ಟು ಶೋಭಿಸುವ ಆಸೆ ಮದುಮಗಳಿಗೆ. ಮದುಮಗಳ ಶೃಂಗಾರಕ್ಕೆಂದೇ ವೆರೈಟಿ ಡ್ರೆಸ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಗೌನ್‌, ಲೆಹಂಗಾಗಳು ಹೊಸತನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಮದುಮಗಳ ಸೌಂದರ್ಯವನ್ನು ಸೆಳೆಯುತ್ತಿವೆ.

ಗೌನ್‌ ಗಮ್ಮತ್ತು
ಸ್ಯಾಂಡಲ್‌ವುಡ್‌ ನಟಿಯರಾದ ಅಮೂಲ್ಯಾ, ರಾಧಿಕಾ ಪಂಡಿತ್‌ ತಮ್ಮ ಮದುವೆ, ಎಂಗೇಜ್ಮೆಂಟ್‌ನಲ್ಲಿ ಗೌನ್‌ ಹಾಕಿ ಫೋಟೋಕ್ಕೆ ಪೋಸ್‌ ಕೊಟ್ಟಾಗಲೇ ಫ್ಯಾಶನ್‌ ಪ್ರಿಯ ಹೆಣ್ಮಕ್ಕಳ ಆಸೆ ಚಿಗುರೊಡೆದಿತ್ತು. ತಿಳಿ ಪಿಂಕ್‌ ಬಣ್ಣದ ಎಂಗೇಜ್ಮೆಂಟ್‌ ಗೌನ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಆ ಆಸೆಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ತುಂಬಿದ್ದರು. ಅಲ್ಲಿಂದೀಚೆಗೆ ಸಾಮಾನ್ಯ ಹೆಣ್ಣು ಮಕ್ಕಳೂ ಮದುವೆಯಲ್ಲಿ ಗೌನ್‌ ತೊಟ್ಟು ಮದುವೆ ಮಂಟಪದಲ್ಲಿ ಶೋಭಿಸಬೇಕೆಂಬ ಕನಸು ಕಂಡವರೇ. ಈಗಂತೂ ಕಳೆದ ಕೆಲ ಸಮಯಗಳಿಂದ ಮದುವೆಗೆ ಗೌನ್‌ ತೊಡುವುದು ಟ್ರೆಂಡ್‌ ಆಗಿದೆ. 

ಲೆಹಂಗಾ ಬ್ಯೂಟಿ
ಪ್ರಸ್ತುತ ಮದುಮಗಳ ಧಿರಿಸಿನಲ್ಲಿ ಗೌನ್‌ ಹೆಚ್ಚು ಚಾಲ್ತಿಯಲ್ಲಿದ್ದರೆ, ಲೆಹಂಗಾ ಧರಿಸುವಿಕೆಯೂ ತೆರೆಗೆ ಸರಿದಿಲ್ಲ. ಮದುವೆಗೆ ಲೆಹೆಂಗಾ ಧರಿಸುವುದು ಕಡಿಮೆಯಾದರೂ, ಎಂಗೇಜ್ಮೆಂಟ್‌ಗೆ ಇದು ಜಾಸ್ತಿ ಬಳಕೆಯಾಗುತ್ತದೆ. ಲೆಹೆಂಗಾದಲ್ಲಿಯೂ ನಾನಾ ರೀತಿಯ ಡಿಸೈನ್‌ಗಳನ್ನು ಹೊಂದಿದವುಗಳಿದ್ದು, ಆಯ್ಕೆಗೆ ಅವಕಾಶಗಳಿವೆ. 

ಗೌನ್‌ ವೆರೈಟಿ
ಗೌನ್‌ನಲ್ಲಿ ವಿವಿಧ ರೀತಿಯವುಗಳಿವೆ. ಸಿಂಪಲ್‌ನಿಂದ ಹಿಡಿದು ಗ್ರ್ಯಾಂಡ್ ವರ್ಕ್‌ ಇರುವ ಅನೇಕ ಗೌನ್‌ಗಳಿವೆ. ಎಂಗೇಜ್ಮೆಂಟ್‌ ಗಾಗಲೀ, ಮದುವೆಗಾಗಲೀ ಗ್ರ್ಯಾಂಡ್  ಮತ್ತು ಹೆಚ್ಚಿನ ಲುಕ್‌ನಿಂದಿರುವ ಗೌನ್‌ಗಳೇ ಆಕರ್ಷಕ. ಫುಲ್‌ ಡಿಸೈನ್‌ ಹೊಂದಿರುವ ಗೌನ್‌ಗಳು ಹೆಚ್ಚು ಸುಂದರವಾಗಿ ಕಾಣುತ್ತವೆ. ಪ್ರತ್ಯೇಕ ಬಟ್ಟೆ ಖರೀದಿಸಿ, ಇಲ್ಲವೆ ಸೆಮಿ ಸ್ಟಿಚ್‌ಡ್‌ ಗೌನ್‌ಗಳನ್ನು ಖರೀದಿಸಿ ಸ್ಟಿಚ್‌ ಮಾಡುವ ವ್ಯವಸ್ಥೆಯೂ ಇರುವುದರಿಂದ ಬೇಕಾದ ರೀತಿಯ ವಿನ್ಯಾಸದಲ್ಲಿ ಹೊಲಿಸಬಹುದು. 

ವಿರುದ್ಧ ಕಲರ್‌ ಆಯ್ಕೆ ಮಾಡಿ
ಹೆಚ್ಚಾಗಿ ಗೌನ್‌ ಧರಿಸುವಾಗ ಬ್ಲೌಸ್‌ ಮತ್ತು ಸ್ಕರ್ಟ್‌ ವಿರುದ್ಧ ಬಣ್ಣಗಳಿದ್ದಾಗ ಸೌಂದರ್ಯ ಹೆಚ್ಚುತ್ತದೆ. ಧರಿಸುವಾಗ ಸ್ವಲ್ಪ ಡಲ್‌ ಕಾಣುವುದರಿಂದ ಆಕರ್ಷಕ ಲುಕ್‌ ಸಿಗದು. ಹಾಗಾಗಿ ಬಣ್ಣಗಳ ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. 

ಆನ್‌ಲೈನ್‌ನಲ್ಲಿ ಹುಡುಕಾಟ
ಮ್ಯಾಚಿಂಗ್‌ ಆಭರಣ, ಮ್ಯಾಚಿಂಗ್‌ ಡ್ರೆಸ್‌..ಇದೆಲ್ಲ ಹೆಣ್ಮಕ್ಕಳ ಕನಸುಗಳ ಸಾಲಿನಲ್ಲಿ ಸಾಮಾನ್ಯ ವಿಷಯಗಳು. ನೆಚ್ಚಿನ ನಟಿಯೋ, ಗೆಳತಿಯೋ ಗೌನ್‌ ಹಾಕಿ ತಮ್ಮ ಮದುವೆಯಲ್ಲಿ ಮೆರೆದರಂತೂ ಮುಗಿದೇ ಹೋಯ್ತು. ತಾನೂ ಅಂತೆಯೇ ಕಾಣಬೇಕೆಂಬ ಕನಸು ಹಲವು ಹೆಣ್ಣು ಮಕ್ಕಳದ್ದು. ಇದಕ್ಕಾಗಿಯೇ ನಾಲ್ಕೈದು ತಿಂಗಳ ಮೊದಲೇ ಆನ್‌ ಲೈನ್‌ನಲ್ಲಿ ಡಿಸೈನ್‌ಗಾಗಿ ಹುಡುಕಾಟ ನಡೆಯುತ್ತದೆ. ಒಂದೊಳ್ಳೆ ಡಿಸೈನ್‌ ಆಯ್ಕೆ ಮಾಡಿ ನೆಚ್ಚಿನ ಧಿರಿಸನ್ನು ರೆಡಿ ಮಾಡಿಯೂ ಆಗುತ್ತದೆ.

ಸೀರೆಯ ಅಂದ ನೋಡಾ…
ಮದುವೆಗೆ ಸೀರೆ ಉಡುವುದು ಕಡಿಮೆಯಾಗುತ್ತಿದೆ. ಧಾರಾಕಾರ್ಯಕ್ಕಷ್ಟೇ ಸೀರೆ ಉಟ್ಟು, ಆನಂತರದ ರಿಸೆಪ್ಷನ್‌ಗೆ ಗೌನ್‌ ತೊಡುವುದೇ ಈಗೀಗ ನಗರ ಪ್ರದೇಶಗಳಲ್ಲಿ ಟ್ರೆಂಡಿಯಾಗಿದೆ. ಆದರೂ ಗ್ರಾಮೀಣ ಭಾಗಗಳಲ್ಲಿ ಮದುಮಗಳ ಸಿಂಗಾರಕ್ಕೆ ಸೀರೆಯೇ ಭೂಷಣ. ಸೀರೆಯಲ್ಲಿ ಕಾಣುವ ಸೌಂದರ್ಯ ಇನ್ಯಾವ ಡ್ರೆಸ್‌ನಲ್ಲಿಯೂ ಕಾಣದು ಎಂಬುದು ಮನೆಯ ಹಿರಿಯರ ವಾದ. ಅದಕ್ಕಾಗಿಯೇ ಮದುವೆಗೊಮ್ಮೆ ಡ್ರೆಸ್‌ ಹಾಕುತ್ತೇನೆ ಎಂದರೂ, ಸೀರೆಯೇ ಫೈನಲ್‌ ಎಂದು ಕಟ್ಟಾಜ್ಞೆ ಹೊರಡಿಸುವ ತಾಯಂದಿರು, ಮನೆಯ ಇತರ ಮಹಿಳೆಯರು ಕೊನೆಗೂ ಸೀರೆಯಲ್ಲಿ ತಮ್ಮ ಮನೆ ಮಗಳ ಅಂದವನ್ನು ನೋಡಿ ಖುಷಿ ಪಡುತ್ತಾರೆ. 

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.