ಕಲರ್‌ ಫ‌ುಲ್‌ ಟೂಟಿಫ್ರೂಟಿ  ಮಾಡಿ ನೋಡಿ


Team Udayavani, Sep 22, 2018, 2:08 PM IST

22-sepctember-12.jpg

ಬಣ್ಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ನಾವು ಧರಿಸೋ ಬಟ್ಟೆಗಳಷ್ಟೇ ಅಲ್ಲ ತಿನ್ನುವ ಆಹಾರವೂ ಬಣ್ಣ ಬಣ್ಣದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತುಗಳನ್ನೂ ಮಾಡುತ್ತಾರೆ. ಐಸ್‌ ಕ್ರೀಮ್‌ ಗಳು ಎಲ್ಲರಿಗೂ ಇಷ್ಟವಾಗುವುದು ಇದೇ ಕಾರಣಕ್ಕೆ.

ನೋಡಲು ಸೊಗಸಾಗಿರುವ ಐಸ್‌ ಕ್ರೀಮ್‌ಗಳಲ್ಲಿ ಕಲರ್‌ ಫ‌ುಲ್‌ ಟೂಟಿ ಫ್ರೂಟಿ ಎಲ್ಲರಿಗೂ ಇಷ್ಟವೇ. ಹಲವು ಫ್ಲೇವರ್‌ ಗಳೊಂದಿಗೆ ಐಸ್‌ ಕ್ರೀಮ್‌ನ ಸ್ವಾದ ಹೆಚ್ಚಿಸುವ ಈ ಟೂಟಿಫ್ರೂಟಿಯನ್ನು ಹಣಕೊಟ್ಟು ಹೊರಗಿನಿಂದಲೇ ತರಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು. ಮಕ್ಕಳು ಇಷ್ಟಪಡುವ ಬಣ್ಣ, ಫ್ಲೇವರ್‌ ನಲ್ಲಿ ಮಾಡಿಕೊಡಬಹುದು. ಯಾವುದೇ ರಾಸಾಯನಿಕವಿಲ್ಲದೆ ಆರೋಗ್ಯಕರ ಟೂಟಿ ಫ್ರೂಟಿಮಾಡುವುದು ಬಲು ಸುಲಭ.

ಇದಕ್ಕೆ ಒಂದು ಸಾಮಾನ್ಯ ಗಾತ್ರದ ಎರಡು ಕಪ್‌ ನಷ್ಟು ಹಸಿ ಪಪ್ಪಾಯಿ ತೆಗೆದಿರಿಸಿ. ಪಪ್ಪಾಯಿಯ ಸಿಪ್ಪೆ, ಬೀಜಗಳನ್ನು ತೆಗೆದು ಸಣ್ಣದಾಗಿ ಅಂದರೆ ಟೂಟಿಫ್ರೂಟಿ ಗಾತ್ರಕ್ಕೆ ಹೆಚ್ಚಿಕೊಳ್ಳಿ. ಅನಂತರ ನೀರನ್ನು ಚೆನ್ನಾಗಿ ಕುದಿಸಿ ಎರಡು ಕಪ್‌ ಪಪ್ಪಾಯಿ ಪೀಸ್‌ಗೆ ನಾಲ್ಕು ಕಪ್‌ನಷ್ಟು ಹಾಕಿ ಅರೆ ಬೇಯಿಸಬೇಕು. ಗಮನವಿರಲಿ- ಇದು ಪೂರ್ತಿ ಬೇಯಬಾರದು. ಅನಂತರ ನೀರಿನಿಂದ ಪಪ್ಪಾಯವನ್ನು ಬೇರ್ಪಡಿಸಿ ಬೇರೊಂದು ಪಾತ್ರೆಗೆ ಹಾಕಿ. ಒಂದು ಪಾತ್ರೆಗೆ 250 ಗ್ರಾಂ ನಷ್ಟು ಸಕ್ಕರೆಯನ್ನು ಹಾಕಿ ಒಂದು ಕಪ್‌ ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಸಕ್ಕರೆ ಸಂಪೂರ್ಣ ಕರಗಿ ಪಾಕದ ರೀತಿ ಆಗುವಾಗ ಬೇಯಿಸಿದ ಪಪ್ಪಾಯವನ್ನು ಹಾಕಿ. ಸುಮಾರು 15 ನಿಮಿಷ ಇದರಲ್ಲಿ ಬೇಯಲಿ. ಸಕ್ಕರೆ ಅಂಶವನ್ನು ಪಪ್ಪಾಯ ಸಂಪೂರ್ಣ ಹೀರಿ ಕೊಳ್ಳಬೇಕು.

ಬಳಿಕ ಒಲೆಯಿಂದ ಕೆಳಗಿರಿಸಿ ಆರಲು ಬಿಡಿ. ಸುಮಾರು ಅರ್ಧ ಗಂಟೆ ಬಳಿಕ ಪಪ್ಪಾಯ ಪಾಕದಿಂದ ತೆಗೆದು ಬಣ್ಣಕ್ಕನುಗುಣವಾಗಿ ವಿಂಗಡಿಸಿಕೊಳ್ಳಿ. ಮನೆಯಲ್ಲೇ ತಯಾರಿಸಿದ ಬಣ್ಣಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿರುವ ಪಪ್ಪಾಯಕ್ಕೆ ಸಮ ಪ್ರಮಾಣದಲ್ಲಿ ಸುರಿಯಿರಿ. ಹೀಗೆ ಸುರಿಯುವಾಗ ಪಪ್ಪಾಯದ ಜತೆಗೆ ಸಕ್ಕರೆ ಪಾಕದ ಮಿಶ್ರಣ ವನ್ನೂ ಹಾಕಬೇಕು. ನಾಲ್ಕು ಕಪ್‌ ಗಳಿಗೆ ಕಾಲು ಚಮಚದಷ್ಟು ಬಣ್ಣವನ್ನು ಹಾಕಬಹುದು. ಒಂದು ದಿನ ಬಿಟ್ಟು ಮರುದಿನ ಕಲರ್‌ ಕಪ್‌ ಗಳಿಂದ ಪಪ್ಪಾಯವನ್ನು ಬೇರ್ಪಡಿಸಿ ಸಂಪೂರ್ಣ ತೇವಾಂಶವನ್ನು ತೆಗೆಯಬೇಕು. ಅನಂತರ ಪಾಕವನ್ನು ಹಾಕಲೇಬಾರದು. ಒಂದು ದಿನ ಅಥವಾ 24 ಗಂಟೆಗಳ ಕಾಲ ಇದನ್ನು ಚೆನ್ನಾಗಿ ಬಿಸಿಲಿಗೆ ಒಣಗಲು ಬಿಡಿ. ಸಂಪೂರ್ಣ ಡ್ರೈ ಆದ ಬಳಿಕ ಡಬ್ಬದಲ್ಲಿ ಸಂಗ್ರಹಿಸಿಟ್ಟು, ಅಗತ್ಯವಿದ್ದಾಗ ಐಸ್‌ ಕ್ರೀಮ್‌, ಕೇಕ್‌ ಅಥವಾ ಆಯ್ದ ಸಿಹಿ ಖಾದ್ಯಗಳಿಗೆ ಬಳಸಬಹುದು. 

ಭರತ್‌ ರಾಜ್‌ ಕರ್ತಡ್ಕ 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.