ಖಾಸಗಿ, ವೃತ್ತಿ ಬದುಕು ಬ್ಯಾಲೆನ್ಸ್‌ ಹೀಗಿರಲಿ


Team Udayavani, Sep 24, 2018, 1:11 PM IST

24-sepctember-13.jpg

ವೃತ್ತಿ ಮತ್ತು ಖಾಸಗಿ ಬದುಕಿನ ಹೊಂದಾಣಿಗೆ ಎಂಬುದು ಮಹಿಳೆಯರ ಪಾಲಿಗೆ ಸುಲಭದ ಮಾತಲ್ಲ. ಈ ಸಮಸ್ಯೆ ಮಹಿಳೆಯರನ್ನು ಅರ್ಧದಲ್ಲೇ ಉದ್ಯೋಗ ತೊರೆಯುವಂತೆ ಮಾಡುವುದೂ ಇದೆ. ಉದ್ಯೋಗ ತೊರದೆ ಕೆಲವು ವರ್ಷಗಳ ಅನಂತರ ತಾವು ಮಾಡಿದ ನಿರ್ಣಯ ತಪ್ಪಾಯಿತೇ ಎಂದು ಪ್ರಶ್ನಿಸಿ ಕೊಂಡು ಪರಿತಪಿಸುವವರೂ ಇದ್ದಾರೆ. ಹೀಗಾಗಿ ವೃತ್ತಿ ಮತ್ತು ಖಾಸಗಿ ಬದುಕನ್ನು ಸಮಾನವಾಗಿ ತೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದು ಎಲ್ಲ ಮಹಿಳೆಯರಿಗೂ ಇದೆ. ಇದಕ್ಕಾಗೆ ಕೆಲವೊಂದು ಟಿಪ್ಸ್‌ ಗಳು ಇಲ್ಲಿವೆ.

1. ಉದ್ಯೋಗದೊಂದಿಗೆ ಜೀವನ
ಕಚೇರಿ ಕೆಲಸ, ಬೆಳಗ್ಗೆ ಬೇಗ ಎದ್ದು ಮನೆ ಕೆಲಸಗಳನ್ನು ಮುಗಿಸಿ ಕಚೇರಿಗೆ ಹೊರಡುವ ಧಾವಂತದಲ್ಲಿ ಒಂದಷ್ಟು ಮಹಿಳೆಯರು ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಿಯಮಿತವಾದ ಚೌಕಟ್ಟನ್ನು ಕಾಯ್ದುಕೊಳ್ಳಿ. ಕನಿಷ್ಠ ಪಕ್ಷ ಕಚೇರಿಗೆ ಹೊರಡುವ 15 ನಿಮಿಷ ಮೊದಲು ಸ್ವಚ್ಛಂದವಾದ ಪರಿಸರದಲ್ಲಿ ಕುಳಿತು ಶುದ್ಧ ಗಾಳಿಯನ್ನು ಆಸ್ವಾಧಿಸಿಕೊಳ್ಳಿ. ಇದರಿಂದ ದಿನವಿಡೀ ಉಲ್ಲಾಸಿತರಾಗಿರಬಹುದು.

2. ಆದ್ಯತೆ ಯಾವುದು?
ಉದ್ಯೋಗ ಮತ್ತು ಮನೆ ಇವುಗಳಲ್ಲಿ ಮೊದಲ ಆದ್ಯತೆ ಯಾವುದು? ಇಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ಅನಿವಾರ್ಯವಲ್ಲದ ಕೆಲಸಗಳಿಗೆ ಸಮಯ ಹಾಳು ಮಾಡಬೇಡಿ.

3 ಸಹೋದ್ಯೋಗಿಗಳ ಗಮನಕ್ಕೆ ತನ್ನಿ
ಕೌಟುಂಬಿಕ ಸಮಸ್ಯೆಗಳಿರುವಾಗ, ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಗದೇ ಇದ್ದಾಗ ಸಹೋದ್ಯೋಗಿಗಳ ಸಮಸ್ಯೆಯನ್ನು ಹಂಚಿಕೊಳ್ಳಿ. ಮನೆಯಲ್ಲಿದ್ದುಕೊಂಡೇ ವೃತ್ತಿ ನಡೆಸಲು ಪರ್ಯಾಯವಾದ ದಾರಿಯನ್ನು ಹುಡುಕಿ.

4 ಸಹಾಯ ಪಡೆಯಿರಿ
ಮನೆಯಲ್ಲಿ ಮಗವನ್ನು ನೋಡಿಕೊಳ್ಳಲು ಸಮಯ ಸಿಗದಿದ್ದಾಗ ಆರೈಕೆಗಾಗಿ ಒಬ್ಬರನ್ನು ನೇಮಿಸಿಕೊಳ್ಳಿ. ಇದರಿಂದ ಸಮಯದ ಉಳಿತಾಯದ ಜತೆಗೆ ಕೊಂಚ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

5 ಗೊಂದಲಗಳನ್ನು ಬಗೆಹರಿಸಿ
ಸಮಸ್ಯೆಗಳು ಎದುರಾದಾಗ ಗೊಂದಲಕ್ಕೊಳಗಾಗದೇ ಶಾಂತ ಚಿತ್ತದಿಂದ ಯೋಚಿಸಿ, ಸವಾಲುಗಳನ್ನು ಎದುರಿಸಿ. ಇದರಿಂದ ಯಶಸ್ಸು ಗಳಿಸಬಹುದು.

6 ಸಂಪರ್ಕ ಇರಿಸಿಕೊಳ್ಳಿ
ಕಚೇರಿಯಲ್ಲಿದ್ದಾಗ ಮನೆ ಮಂದಿಯೊಂದಿಗೆ, ಮನೆಯಲ್ಲಿದ್ದಾಗ ಕಚೇರಿ ಸಿಬಂದಿಯೊಂದಿಗೆ ಸಂಪರ್ಕ ಇರಿಸಿಕೊಳ್ಳಿ. ಇದರಿಂದ ಹೆಚ್ಚು ನೆಮ್ಮದಿಯಾಗಿರಬಹುದು.

7 ನಿಮಗಾಗಿ ಸಮಯವಿರಲಿ
ಎಲ್ಲಿದ್ದರೂ ಮನೆ ಮತ್ತು ಕಚೇರಿಯದ್ದೇ ಚಿಂತೆ ಮಾಡಬೇಡಿ. ನಿಮಗಾಗಿ, ನಿಮ್ಮವರಿಗಾಗಿ ತುಸು ಸಮಯ ಮೀಸಲಿರಿಸಿ. ಮಾನಸಿಕವಾಗಿ ಸದೃಢರಾಗಲು ವ್ಯಾಯಾಮ, ಪ್ರವಾಸದಲ್ಲಿ ತೊಡಗಿಕೊಳ್ಳಿ. ಹೊಸ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಇದರಿಂದ ಮನಸ್ಸು ಒತ್ತಡ ಮುಕ್ತವಾಗುತ್ತದೆ. 

 ಶ್ರುತಿ ನೀರಾಯ

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.