ಕ್ರಿಯಾಶೀಲತೆಯ ಗುಟ್ಟು 


Team Udayavani, Oct 1, 2018, 3:40 PM IST

1-october-15.gif

ಸೇನಾಫ‌ುರ ಎಂಬ ಊರಿಗೆ ಒಬ್ಬ ರಾಜನಿದ್ದ. ಒಮ್ಮೆ ಆತನ ರಾಜ್ಯಕ್ಕೆ ಆಗಮಿಸಿದ್ದ ವಿದೇಶಿ ಸ್ನೇಹಿತನೊಬ್ಬ ತಮ್ಮ ಸ್ನೇಹದ ಸವಿ ನೆನಪಿಗಾಗಿ ಎರಡು ಪಾರಿವಾಳಗಳ ಮರಿಗಳನ್ನು ನೀಡಿ ಹೋದ. ಈ ಪಾರಿವಾಳಗಳ ಮರಿಯನ್ನು ಪೋಷಿಸುವ ಜವಾಬ್ದಾರಿಯನ್ನು ಯೋಗ್ಯ ವ್ಯಕ್ತಿಗೆ ನೀಡಬೇಕು ಎಂದು ರಾಜ ತನ್ನ ಮಂತ್ರಿಗೆ ಆದೇಶ ನೀಡಿದ. ರಾಜನ ಆಜ್ಞೆಯಂತೆಯೇ ಓರ್ವ ಸೂಕ್ತ ವ್ಯಕ್ತಿಯನ್ನು ಪಾರಿವಾಳಗಳ ಮರಿಗಳನ್ನು ನೋಡಿಕೊಳ್ಳಲು, ಅವುಗಳಿಗೆ ತರಬೇತಿ ನೀಡಲು ನೇಮಕ ಮಾಡಲಾಯಿತು.

ಕಾಲ ಕಳೆದಂತೆ ಎರಡೂ ಪಾರಿವಾಳ ಮರಿಗಳು ಬೆಳೆಯುತ್ತಾ ಹೋದವು. ಅವುಗಳಲ್ಲಿ ಒಂದು ಮರಿ ಬಹಳ ಚುರುಕಾಗಿತ್ತು. ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿತ್ತು. ಮತ್ತೊಂದು ಮಾತ್ರ ಮಂದ ಬುದ್ಧಿಯಂತೆ ವರ್ತಿಸುತ್ತಾ ಮರದ ರೆಂಬೆಗಳ ಮೇಲೆಯೇ ಸದಾ ಕುಳಿತಿರುತ್ತಿತ್ತು. ಅವುಗಳ ತರಬೇತಿದಾರ ಎಷ್ಟೇ ಪ್ರಯತ್ನಪಟ್ಟರೂ ಅದರ ನಡವಳಿಕೆಯನ್ನು ಬದಲಿಸಲಾಗಲಿಲ್ಲ. ಈ ವಿಷಯ ಅದೇಗೋ ರಾಜನ ಕಿವಿಗೂ ತಲುಪಿತು. ಕೂಡಲೇ ರಾಜ ಮಂತ್ರಿಯನ್ನು ಕರೆದು ಈ ಬಗ್ಗೆ ವಿಚಾರಿಸಿದ ರಾಜ ಮಂದ ಬುದ್ಧಿಯ ಪಾರಿವಾಳದ ಸಮಸ್ಯೆ ಬಗೆಹರಿಸಲು ಬೇರೆ ರಾಜ್ಯದಿಂದಾರೂ ಸರಿ ಓರ್ವ ತಜ್ಞನನ್ನು ಕರೆಸಿ. ಈ ಪಾರಿವಾಳವೂ ಮತ್ತೊಂದರಂತೆ ಕ್ರಿಯಾಶೀಲವಾಗಿರಬೇಕು ಎಂಬುದೇ ನನ್ನ ಮಹದಾಸೆ ಎಂದ. 

ರಾಜನ ಮಾತಿನಂತೆ ಮತ್ತೋರ್ವ ತಜ್ಞನನ್ನು ನೇಮಿಸಲಾಯಿತು. ಪರಮಾಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಮಂದಗತಿಯ ಪಾರಿವಾಳ ಮತ್ತೊಂ ದರಂತೆ ಕ್ರಿಯಾಶೀಲವಾಗತೊಡಗಿತು. ಇದರಿಂದ ಖುಷಿಗೊಂಡ ರಾಜ ಮಂತ್ರಿಯನ್ನು ಕರೆದು ಹೊಸದಾಗಿ ನೇಮಕಗೊಂಡಾತನನ್ನು ತಾನು ಕೂಡಲೇ ನೋಡಬೇಕು ಎಂದ. ಆ ತಜ್ಞನನ್ನು ನೋಡಿದ ರಾಜ ಸ್ವತಃ ಒಂದು ಕ್ಷಣ ದಂಗಾದ. ಏಕೆಂದರೆ ಆತನೊಬ್ಬ ರೈತನಾಗಿದ್ದ. ಕುತೂಹಲ ತಡೆಯಲಾಗದೆ ರಾಜ ರೈತನಲ್ಲಿ ಕೇಳಿಯೇ ಬಿಟ್ಟ. ತಜ್ಞನಿಂದಾಗದ ಕೆಲಸ ನಿನ್ನಿಂದ ಹೇಗೆ ಸಾಧ್ಯವಾಯಿತು ಎಂದು. ಇದಕ್ಕೆ ವಿನಯದಿಂದ ಉತ್ತರಿಸಿದ ರೈತ ಹೇಳಿದ ಮಾತು ಏನು ಗೊತ್ತೇ? ಹೇ ರಾಜ ನಾನೇನು ಅಂಥ ಮಹಾನ್‌ ಕಾರ್ಯಮಾಡಿಲ್ಲ. ಆ ಪಾರಿವಾಳ ನಿರಾಯಾಸವಾಗಿ ಯಾವ ರೆಂಬೆ ಮೇಲೆ ಕುಳಿತುಕೊಳ್ಳುತ್ತಿತ್ತೋ ಅವೆಲ್ಲವನ್ನು ನಾನು ಕಡಿಯುತ್ತಾ ಹೋದೆ. ಪಾರಿವಾಳ ತಾನಾಗಿಯೇ ಹಾರಾಡ ತೊಡಗಿತು ಎಂದ.

ಈ ಪಾರಿವಾಳದಂತೆಯೇ ನಮ್ಮ ಜೀವನ ಕೂಡ. ಕೆಲವೊಮ್ಮೆ ನನ್ನಿಂದ ಏನೂ ಆಗದು, ಸಾಧ್ಯವಿಲ್ಲ ಎಂಬ ಕಟ್ಟುಪಾಡುಗಳನ್ನು ನಮಗೆ ನಾವೇ ಹಾಕಿಕೊಂಡು ಬಿಡುತ್ತೇವೆ. ಆರಕ್ಕೇರದೆ ಮೂರಕ್ಕಿಳಿಯದೆ ತಟಸ್ಥರಂತೆ ವರ್ತಿಸುತ್ತಿರುತ್ತೇವೆ. ಇನ್ನೂ ಹಲವು ಬಾರಿ ಬೇರೆಯವರ ಮೇಲೆ ಅವಲಂಬಿತರಾಗಿ ಜೀವನ ಪೂರ್ತಿ ಕಳೆಯುತ್ತೇವೆ. ಭಗವಂತ ಪ್ರತಿಯೊಬ್ಬರಿಗೂ ಯೋಚನ ಶಕ್ತಿಯನ್ನು, ಸ್ವ ಸಾಮರ್ಥ್ಯ ನೀಡಿದ್ದಾನೆ. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಜೀವನದ ಸುಖ ದುಃಖಗಳು ನಿಂತಿರುವುದು. ನಾವೇ ನಮ್ಮ ಸುತ್ತ ನಿರ್ಮಿಸಿ ಕೊಂಡಿರುವ ಹೆದರಿಕೆ, ಅಂಜಿಕೆಯಂತಹ ರೆಂಬೆಗಳನ್ನು ಕಡಿಯುವುದಿಲ್ಲವೋ ಅಲ್ಲಿಯವರೆಗೆ ನಾವೂ ಮಂದಗತಿಯ ಪಾರಿವಾಳವೇ ಆಗಿರುತ್ತೇವೆ.

 ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.