ಸಕಾರಾತ್ಮಕ ಚಿಂತನೆಗೆ ದಾರಿ ತೋರುವ ಲೈಫ‌ು ಇಷ್ಟೇನೆ?


Team Udayavani, Oct 17, 2018, 3:11 PM IST

17-october-14.gif

ನಮ್ಮ ಮನಸ್ಸು ಹೊಸ ಆಲೋಚನೆಗಳಿಗೆ ತೆರೆದುಕೊಂಡಿರಬೇಕು, ನಮ್ಮ ಬದುಕು ನಮ್ಮ ಕೈಯಲ್ಲೇ ಇದೆ. ಅದನ್ನು ಹಸನುಗೊಳಿಸಬಹುದು ಅಥವಾ ಬರಡುಗೊಳಿಸಬಹುದು ಎನ್ನುವ ಯತಿರಾಜ್‌ ವೀರಾಂಬುದಿ ಅವರು ಬರೆದ ಕೃತಿ ‘ಲೈಫ‌ು ಇಷ್ಟೇನೆ..?’ ಇದರ ಸಾರಾಂಶ. ಬದುಕಿಗೆ ಬೇಕಾದ ಕೆಲವೊಂದು ಪಾಸಿಟಿವ್‌ ವಿಚಾರಗಳು ಇದರಲ್ಲಿರುವುದರಿಂದ ಓದುಗರಿಗೆ ಹೆಚ್ಚು ಪ್ರಿಯವೆನಿಸುತ್ತದೆ.

ಘಟನೆ 1
ನಮ್ಮ ಹಾಸ್ಯ ಚತುರತೆ, ವ್ಯಕ್ತಿತ್ವ, ವರ್ತನೆ, ಗುಣ ಇವುಗಳನ್ನು ಯಾರು ಇಷ್ಟ ಪಡುತ್ತಾರೋ ಅವರನ್ನು ನಾವು ಬಹುಬೇಗ ಇಷ್ಟಪಡುತ್ತೇವೆ. ಆದರೆ, ಈ ರೀತಿ ನಮ್ಮನ್ನು ಇಷ್ಟಪಡುವವರು ಯಾಕೆ ಇಷ್ಟಪಡುತ್ತಾರೆ? ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇಂತಹ ಜನರು ನಮ್ಮ ಜತೆ ಇರುವವರೆಗೆ ಅಭದ್ರತೆಯ ಸ್ಥಿತಿ ಉಂಟಾಗುವುದೇ ಇಲ್ಲ. ನಮ್ಮನ್ನು ಯಾರಾದರೂ ಹೊಗಳಲು ಆರಂಭಿಸಿದರೆ ಅದು ಸತ್ಯವೋ, ಅಸತ್ಯವೋ ಎಂಬುವುದರ ಅರಿವೇ ನಮಗೆ ಇರುವುದಿಲ್ಲ. ಆದರೆ ಯಾರು ನಮ್ಮ ಬುದ್ಧಿವಂತಿಕೆಯನ್ನು ಮೂದಲಿಸುತ್ತಾರೋ ಅವರನ್ನು ಪ್ರೀತಿಸಿ, ಗೌರವಿಸುವುದು ಮುಖ್ಯ. ಯಾಕೆಂದರೆ ಇವರು ನಮ್ಮ ನಿಜವಾದ ಹಿತೈಷಿಗಳಾಗುತ್ತಾರೆ.

ಘಟನೆ 2
ನಿರ್ವಹಣೆ ಮತ್ತು ಬದುಕಿನ ನಿರ್ವಹಣೆಯಲ್ಲಿ ಆಲಿಸುವಿಕೆಯ ಪಾತ್ರ ಮುಖ್ಯವಾಗುತ್ತದೆ. ಇನ್ನೊಬ್ಬರು ಮಾತನಾಡುವಾಗ ಅವರ ಮಾತಿಗೆ ಬೆಲೆ ಕೊಡುವುದು ಮುಖ್ಯ. ಕೇವಲ ಮುಖವನ್ನು ನೋಡುವುದು ಮಾತ್ರವಲ್ಲ, ವಿಷಯದ ಜ್ಞಾನವನ್ನು ಅರಿತುಕೊಳ್ಳಬೇಕು. ಇನ್ನೊಬ್ಬರ ಮಾತುಗಳ ನಡುವಿನ ಮೌನವನ್ನು ನಾವು ಆಲಿಸುತ್ತೇವೆ. ಆಗ ನಮ್ಮ ಮಾತುಗಳಿಗೂ ಸ್ಪಂದಿಸುತ್ತಾರೆ. ಪ್ರಾಮಾಣಿಕವಾದ ಕೇಳುಗರಾದಾಗ ಮಾತ್ರ ಇನ್ನೊಬ್ಬರಿಗೆ ನಮ್ಮ ಮೇಲೆ ನಂಬಿಕೆ ಉುಟಾಗುತ್ತದೆ. ಆಲಿಸುವುದು ನಮ್ಮ ಬದುಕಿನ ಭಾಗವಾದರೆ ಅನೇಕ ಅನಗತ್ಯ ವಾದಗಳನ್ನು ಇಲ್ಲವಾಗಿಸಬಹುದು.

ಘಟನೆ 3
ಜೀವನದಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ. ಅದೆಷ್ಟೋ ಬಾರಿ ನಾವು ನಂಬಿದವರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಇದರಿಂದ ನಮ್ಮ ಯೋಜನೆಗಳು ತಲೆಕೆಳಗಾಗುತ್ತವೆ. ಇದರಿಂದ ಮಾನಸಿಕವಾಗಿ ನೊಂದಿಕೊಳ್ಳುತ್ತೇವೆ. ಈ ರೀತಿ ದುಃಖಪಟ್ಟು ಸೇಡು ತೀರಿಸಿಕೊಳ್ಳುವುದರ ಬದಲು, ದ್ರೋಹ, ವಂಚನೆ ಮಾಡಿದವರನ್ನು ನಮ್ಮ ಮನಸ್ಸಿನಿಂದ ದೂರ ತಲ್ಲಿಬಿಡೋಣ. ಯಾರನ್ನು ಉಳಿಸಿಕೊಳ್ಳಬೇಕೋ ಅವರ ಬಗ್ಗೆ ಆಲೋಚಿಸೋಣ. ಇದರಿಂದ ನಮಗೆ ಏನೂ ತೊಂದರೆಯಾಗುವುದಿಲ್ಲ.

 ಶ್ರುತಿ ನೀರಾಯ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.