ಮನೆಯ ಸೌಂದರ್ಯ ಇಮ್ಮಡಿಗೆ ನೆಲದ ಹಾಸು


Team Udayavani, Nov 16, 2018, 12:58 PM IST

16-november-10.gif

ಕಾಲ ಬದಲಾದಂತೆ ಅದಕ್ಕೆ ತಕ್ಕುದಾಗಿ ಜನರು ತಮ್ಮ ಆಸಕ್ತಿ, ಜೀವನ ಶೈಲಿಗಳನ್ನು ಅದಕ್ಕೆ ಪೂರಕವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಆಧುನಿಕತೆಯ ಮೋಹ ಹೆಚ್ಚಾದಂತೆ ವ್ಯಕ್ತಿ ತನ್ನ ಅಲಂಕಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮನೆಯ ಅಲಂಕಾರಕ್ಕೂ ನೀಡುತ್ತಿದ್ದಾನೆ.

ಮನೆ ಶುಚಿಯಾಗಿ ಸುಂದರವಾಗಿ ಇರಿಸಿಕೊಳ್ಳುವುದರ ಜತೆಗೆ ಇತರರನ್ನು ಆಕರ್ಷಿಸುವ ಬಣ್ಣಗಳ ಮೆರುಗು ತುಂಬಲು ವಿಶೇಷ ಪ್ರಾಧ್ಯಾನ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗಾಢ ಬಣ್ಣಗಳು ಒಳಾಂಗಣ ವಿನ್ಯಾಸದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಅದಕ್ಕೆ ತಕ್ಕುದಾಗಿ ಇಂಟಿರೀಯರ್‌ಗಳನ್ನು ಅಳವಡಿಸಿ ಮನೆಯನ್ನು ಇನ್ನಷ್ಟು ಸುಂದರಗೊಳಿಸುವ ಮೋಹ ಹೆಚ್ಚಾಗುತ್ತಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ.

ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ನೆಲಕ್ಕೆ ಟೈಲ್ಸ್‌ ಸಹಿತ ಪರ್ಯಾಯವಾಗಿ ಹಲವು ನೆಲಸ ಹಾಸುಗಳನ್ನು ಬಳಸಲಾಗುತ್ತದೆ. ಇದು ದೀರ್ಘ‌ ಬಾಳಿಕೆ, ಮನೆಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆ ಎಂಬ ಕಾರಣಕ್ಕೆ ಮನೆಗೆ ವಿವಿಧ ಬಗೆಯ ನೆಲಹಾಸುಗಳನ್ನು ಬಳಸಲಾಗುತ್ತದೆ. ಇದರಲ್ಲಿ ಬಟ್ಟೆಯ ನೆಲಹಾಸುಗಳು ಹಾಗೂ ಕಲ್ಲಿನ ನೆಲಹಾಸು ಹೆಚ್ಚು ಜನಪ್ರಿಯವಾಗಿದೆ. ತಮ್ಮ ಮನೆಯ ಸೌಂದರ್ಯ ಹಾಗೂ ಬಜೆಟ್‌ಗೆ ಅನುಗುಣವಾಗಿ ನೆಲಹಾಸುಗಳ ಆಯ್ಕೆ ಮಾಡಲಾಗುತ್ತದೆ.

ಮನೆಯ ನೆಲಕ್ಕೆ ನಾನಾ ವಿಧದ ಹಾಸುಗಳನ್ನು ಹಾಕಲಾಗುತ್ತದೆ. ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅದರಲ್ಲೂ ನೈಸರ್ಗಿಕ ಕಲ್ಲುಗಳಿಂದ ಮಾಡಿದ ಹಾಸು ತನ್ನದೇ ಆದ ಅಂದವನ್ನು ಹೊಂದಿರುತ್ತದೆ. ಇವು ನೋಡಲು ಸ್ಟೈಲಿಶ್‌ ಆಗಿರುವುದರ ಜತೆಗೆ, ಮನೆಯನ್ನು ಕೂಲ್‌ ಆಗಿ ಇಡಲು ನೆರವಾಗುತ್ತದೆ. ಇದರ ನಿರ್ವಹಣೆ ಕೂಡ ತುಂಬಾ ಸುಲಭ ಹಾಗೂ ಸರಳ. ದೀರ್ಘ‌ ಕಾಲ ಬಾಳಿಕೆ ಮತ್ತು ಕಡಿಮೆ ಬೆಲೆ ಕಲ್ಲಿನ ಫ್ಲೋರಿಂಗ್‌ನ ಮತ್ತೂಂದು ವಿಶೇಷ ಅನುಕೂಲತೆಯಾಗಿದೆ.

ವಿವಿಧ ಬಗೆಯ ಕಲ್ಲಿನ ನೆಲಹಾಸುಗಳು
ಸುಣ್ಣದ ಕಲ್ಲು ಅಥವಾ ಲೈಮ್‌ ಸ್ಟೋನ್‌, ದೀರ್ಘ‌ ಬಾಳಿಕೆಯ ಜತೆಗೆ ಕಡಿಮೆ ಬೆಲೆಗೆ ದೊರೆಯುವ ಸ್ಲೇಟ್‌, ಉಳಿದ ಎಲ್ಲಾ ಕಲ್ಲು ಹಾಸಿಗಿಂತ ಬೆಲೆ ಹೆಚ್ಚಿದ್ದರೂ ಬಹು ಬೇಡಿಕೆಯಲ್ಲಿರುವ ಮಾರ್ಬಲ್‌, ಗ್ರಾನೈಟ್‌ ನೆಲಹಾಸುಗಳ ಕಡೆಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಮನೆಯ ನೆಲಗಳಲ್ಲಿ ಕಾರ್ಪೆಟ್ ಗಳ ಕಮಾಲ್‌
ಕಲ್ಲಿನ ನೆಲಹಾಸಿನಂತೆಯೇ ಮನೆಯ ನೆಲಕ್ಕೆ ಇನ್ನಷ್ಟು ಸೌಂದರ್ಯ ನೀಡುವುದು ಕಾರ್ಪೆಟ್ ಗಳು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಅದ್ದೂರಿ ಕಸೂತಿಯ ನೆಲಹಾಸುಗಳ ಕಡೆಗೂ ಜನರ ಒಲವಿರುತ್ತದೆ. ದೇಶದ ಉತ್ತರಭಾಗಗಳಲ್ಲಿ ಹೆಚ್ಚಾಗಿ ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಕಾರ್ಪೆಟ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಾರ್ಪೆಟ್ ಗಳಲ್ಲೇ ಊಟ ತಿಂಡಿ ಮಾಡುತ್ತಾರೆ. ಆ ಕಾರಣಕ್ಕಾಗಿಯೇ ಸೋಫಾದಷ್ಟೇ ಕಾರ್ಪೆಟ್ ಗಳ ಸ್ವತ್ಛತೆಯ ಕಡೆಗೂ ಗಮನ ನೀಡಲಾಗುತ್ತದೆ. ನೆಲಹಾಸುಗಳನ್ನು ಎಲ್ಲಿ ಬಳಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ಮುಖ್ಯವಾಗಿ ಮನೆಯ ಹಾಲ್‌, ಬೆಡ್‌ ರೂಂ ಅಥವಾ ಉಳಿದ ರೂಮುಗಳಿಗೋ ಎಂಬುದನ್ನು ಮೊದಲು ಇತ್ಯರ್ಥಪಡಿಸಿಕೊಳ್ಳಬೇಕು. ಯಾಕೆಂದರೆ ಎಲ್ಲೆಂದರಲ್ಲಿ ಬಳಸಿದರೆ ನೋಡಲು ಸುಂದರವಾಗಿ ಕಾಣಿಸಿಕೊಳ್ಳುವುದಿಲ್ಲ.

ನೆಲಹಾಸು ಖರೀದಿಯಲ್ಲಿರಲಿ ಎಚ್ಚರ
ಮನೆಯ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೆಲಹಾಸುಗಳನ್ನು ಬಳಸಬೇಕು ಎಂದು ನಿರ್ಧರಿಸುವುದು ಉತ್ತಮ ವಿಷಯ . ಆದರೆ ನೆಲಹಾಸುಗಳು ದುಬಾರಿಯಾಗಿರುವುದರಿಂದ ಖರೀದಿಸುವ ಮುನ್ನ ಕೊಂಚ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಬಣ್ಣ, ವಸ್ತುವಿನ ಗುಣಮಟ್ಟ ಪರಿಶೀಲಿಸಿಕೊಳ್ಳಬೇಕು. ಕಡಿಮೆ ಬೆಲೆಯ ನೆಲಹಾಸುಗಳನ್ನು ತಂದರೆ ತೊಳೆಯಲು ಕಷ್ಟವಾಗಬಹುದು. ಹಾಗಾಗಿ ನೆಲಹಾಸುಗಳನ್ನು ಖರೀದಿಸಲು ಹೋಗುವ ಮುನ್ನ ಸ್ವಲ್ಪ ಹೋಂವರ್ಕ್‌ ಮಾಡಲೇಬೇಕು. ಯಾವ ರೀತಿಯದ್ದು ತೆಗೆದುಕೊಂಡರೆ ದೀರ್ಘ‌ ಬಾಳಿಕೆ ಬರಬಲ್ಲದು ಹಾಗೂ ಸೊಗಸಾಗಿ ಕಾಣಬಲ್ಲದು ಎಂಬಿತ್ಯಾದಿ ಅಂಶಗಳನ್ನು ಗಮನಿಸಬೇಕು. 

ಕಲ್ಲಿನ ನೆಲಹಾಸಿನಿಂದ ತಂಪಿನ ವಾತಾವರಣ
ಮನೆಯ ಸೌಂದರ್ಯ ಹೆಚ್ಚಿಸಲು ನೆಲಹಾಸು ಬಳಸುವುದು ಸಾಮಾನ್ಯ. ಆದರೆ ಅದರಿಂದ ಸೌಂದರ್ಯ ಹೆಚ್ಚಿಸುವುದರ ಜತೆಗೆ ನಮ್ಮ ಆರೋಗ್ಯಕ್ಕೂ ಹಿತರಕವೆನಿಸಬೇಕು. ಹಾಗಾಗಿ ನಿಸರ್ಗ ಸಹಜ ಬಣ್ಣ ಮತ್ತು ತಂಪಿನ ವಾತಾವರಣ ನಿರ್ಮಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಲ್ಲಿನ ನೆಲ ಹಾಸು ನೆರವಾಗುತ್ತವೆ. ಪ್ರತಿಯೊಂದು ನಮೂನೆ ಕಲ್ಲಿನ ನೆಲ ಹಾಸು ಕೂಡ ತನ್ನದೇ ಆದ ಲಾಭಗಳನ್ನು ಹೊಂದಿದೆ. 

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.