ಕಾರ್‌ ಕ್ರೇಜ್‌, ಸಣ್ಣ ಕಾರುಗಳಿಗೆ ಬೇಡಿಕೆ 


Team Udayavani, Dec 14, 2018, 12:34 PM IST

14-december-9.gif

ಪ್ರತಿಷ್ಠೆಗಾಗಿ ಕಾರು ಕಾರುಕೊಳ್ಳುವ ಕ್ರಮ ಆಗಿತ್ತು. ಆದರೆ ಈಗ ಹಾಗಲ್ಲ. ಕಾರೊಂದಿದ್ದರೆ ಸಾಲದು ಅದರಲ್ಲೇನಿದೇ ಎನ್ನುವ ಕುತೂಹಲ. ಇದಕ್ಕಾಗಿಯೇ ವಿವಿಧ ಕಂಪೆನಿಗಳು ವಿಭಿನ್ನ ರೀತಿಯ, ವಿಶಿಷ್ಟ ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಗ್ರಾಹಕರೂ ಕೂಡ ಹೊಸ-ಹೊಸ ಕಾರುಗಳಿಗೆ ಮನಸೋಲುತ್ತಿದ್ದಾರೆ.

ನೆಮ್ಮದಿಯ ಮತ್ತು ಸುಖ ಪ್ರಯಾಣಕ್ಕೆ ಕಾರೊಂದು ಬೇಕೇಬೇಕು. ಬಜೆಟ್‌ಗೆ ಅನುಗುಣವಾಗಿ ಕಾರು ಖರೀದಿಸಿ ಆನಂದಿಸುವುದು ಇದ್ದೇ ಇದೆ. ಆದರೆ ಅದೇ ಕಾರು ಪ್ರಯಾಣದ ಜತೆಗೆ ನಗರದ ಆವಶ್ಯಕತೆಯ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಬೇಕಾದುದು ಅಗತ್ಯ. ಅದಕ್ಕಾಗಿಯೇ ಹ್ಯಾಚ್‌ಬ್ಯಾಕ್‌, ಎಸ್‌ಯುವಿ ಮಾದರಿ ಕಾರುಗಳಿಗೆ ಬೇಡಿಕೆಯೂ ಜಾಸ್ತಿ. ಜತೆಗೆ ಕಾರು ಮಾರುಕಟ್ಟೆಯಲ್ಲಿ ಹೊಸತೇನಿದೆ ಎಂಬ ಕುತೂಹಲವೂ ಯುವಕರದ್ದು.

ಮಂಗಳೂರಿನಲ್ಲಿ ಹ್ಯಾಚ್‌ಬ್ಯಾಕ್‌ ಮಾದರಿಯ ಕಾರುಗಳನ್ನು ಕೊಳ್ಳುವವರೇ ಜಾಸ್ತಿ. ಹಿಂಭಾಗ ಡಿಕ್ಕಿ ರಹಿತವಾಗಿರುವ ಈ ಮಾದರಿಯ ಕಾರುಗಳು, ನೋಡಲು ಸಣ್ಣದಾಗಿರುತ್ತವೆ. ರೆನಾಲ್ಟ್ ಶೋರೂಂನ ಸಿಬಂದಿ ಪ್ರಕಾರ, ಸದ್ಯಕ್ಕೆ ಹ್ಯಾಚ್‌ಬ್ಯಾಕ್‌ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ. ಮಂಗಳೂರಿಗೆ ಈ ಮಾದರಿಯ ಕಾರುಗಳೇ ಹೆಚ್ಚು ಸೂಕ್ತವಾಗಿರುತ್ತದೆ ಎನ್ನುತ್ತಾರೆ. ಸ್ವಿಪ್ಟ್, ಐ20, ಆಲ್ಟೋ, ಸೆಲೆರಿಯೋ ಮುಂತಾದ ಕಾರುಗಳು ಮಾರುಕಟ್ಟೆಗೆ ಬಂದು ಸಮಯವಾದರೂ, ಕೊಳ್ಳುವವರ ಸಂಖ್ಯೆ ಇಳಿದಿಲ್ಲ ಎನ್ನುತ್ತಾರೆ ಅವರು.

ಹ್ಯಾಚ್‌ಬ್ಯಾಕ್‌ ಹೊರತುಪಡಿಸಿದರೆ ಎಸ್‌ಯುವಿ ಮಾದರಿಯ ಕಾರುಗಳು ಚಲನೆಯಲ್ಲಿವೆ. ಕಾರು ಕ್ರೇಝ್ಯು ವಕರಲ್ಲಂತೂ ಹೆಚ್ಚೇ ಇರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹೊಸತೇನಿದೆ ಎಂದು ನೋಟ ಹರಿಸುವುದು ಸಾಮಾನ್ಯ. ಯುವ ಜಮಾನದ ಅಭಿಲಾಷೆಗಳಿಗೆ ತಕ್ಕಂತೆ ಕಾರು ತಯಾರಿಕಾ ಕಂಪೆನಿಗಳೂ ಹೊಸ ಫೀಚರ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಲೇ ಇರುತ್ತವೆ.

ವಿಭಿನ್ನ ಫೀಚರ್‌ ಗಳು
ಟಾಟಾ ಕಂಪೆನಿಯವರ ಟಾಟಾ ಹೆರಿಯರ್‌ ಹೊಸ ಮಾದರಿಯ ಕಾರು ಯುವ ಜಮಾನಕ್ಕೆ ತಕ್ಕಂತೆಯೇ ಹೊಸತನದೊಂದಿಗೆ ಸಿದ್ಧವಾಗಿ ನಿಂತಿದೆ. ಈ ಕಾರು 2019 ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಆದರೆ ಬಿಡುಗಡೆಗೂಮುನ್ನವೇ ಕಾರು ಬಗ್ಗೆ ವಿಚಾರಿಸಲು ಗ್ರಾಹಕರು ಬರುತ್ತಲೇ ಇರುತ್ತಾರೆ. ಇದು ಈ ಹಿಂದಿನ ಕಾರುಗಳಿಗಿಂತ ಹೆಚ್ಚಿನ  ಫೀಚರ್ಸ್ ರ್ನ್ನು ಒಳಗೊಂಡಿರುತ್ತದೆ. ಆದರೆ ಬಿಡುಗಡೆ ಸಂದರ್ಭದಲ್ಲಷ್ಟೇ ಫೀಚರ್ ಮಾಹಿತಿಗಳು ಲಭ್ಯವಾಗಲಿವೆ ಎಂದು ಹೋಂಡಾ ಮ್ಯಾಟ್ರಿಕ್ಸ್‌ನ ಪ್ರಶಾಂತ್‌ ತಿಳಿಸಿದ್ದಾರೆ.

ಇನ್ನು ನೆಕ್ಸ್ಟ್ ಜನರೇಶನ್‌ ಕಾರು ಎಂದೇ ಬಿಂಬಿಸಲ್ಪಡುವ ಹುಂಡೈ ಸ್ಯಾಂಡ್ರೋ ಹೊಸ ಮಾದರಿಯ ಕಾರು ಈಗಾಗಲೇ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಗೊಂಡಿದೆ. ಅತೀ ಕಡಿಮೆ ಅಂದರೆ 4.83 ಲಕ್ಷ ರೂ. ಆರಂಭಿಕ ಬೆಲೆ ಹೊಂದಿರುವ ಈ ಕಾರಿಗೆ ಮಂಗಳೂರಿನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಕಾರು ವಿವಿಧ ಸೌಲಭ್ಯಗಳಿಗಾಗಿ ಮನ್ನಣೆ ಗಳಿಸಿದೆ. ಅಲ್ಲದೆ ಹೊಸತಾಗಿ ಪರಿಚಯವಾಗುತ್ತಿರುವ ರೆನಾಲ್ಟ್ ಕ್ವಿಡ್‌ ಕಾರು ಕೂಡ ಹಲವಾರು ಫೀಚರ್ಸ್  ಗಳನ್ನು ಒಳಗೊಂಡಿವೆ. ಇಷ್ಟೇ ಅಲ್ಲದೆ, ವಿವಿಧ ಕಾರು ಕಂಪೆನಿಗಳು ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿವೆ.

ಸಣ್ಣ ಕಾರುಗಳಿಗೆ ಮನ್ನಣೆ
ಮಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆಯೇ ಅತಿಯಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಆಲ್ಟೋ ಕಾರು ಗಾತ್ರದಲ್ಲಿ ಕಿರಿದಾಗಿರುವುದರಿಂದ ಇತರ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಆರಾಮದಾಯಕ ಪ್ರಯಾಣ ಅನುಭವಿಸಲು ಸಾಧ್ಯವಿರುತ್ತದೆ. ಮಧ್ಯಮ ವರ್ಗದ ಮಂದಿಗೆ ಹೇಳಿ ಮಾಡಿಸಿದ ಕಾರು ಇದಾಗಿರುವುದರಿಂದ ಮತ್ತು ನಿರ್ವಹಣಾ ವೆಚ್ಚ ಅತಿ ಕಡಿಮೆಯಾದ್ದರಿಂದ ಈ ಕಾರಿಗೆ ಬೇಡಿಕೆ ಇದೆ. ಆಲ್ಟೋ ಕೆ10 ಕಾರು ಆಲ್ಟೋ ವೈಕೆ ಎಂಬ ಹೆಸರಿನೊಂದಿಗೆ ರೀಲಾಂಚ್‌ ಆಗುತ್ತಿದೆ. ಇವೆಲ್ಲ ಸಾಮಾನ್ಯ ವರ್ಗದ ಕಾರುಗಳಾದ್ದರಿಂದ ಮಂಗಳೂರು ನಗರದಲ್ಲಿ ದಿನನಿತ್ಯದ ಬಳಕೆಗೆ ಈ ಕಾರು ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ.

ಯೋಚಿಸಿ ಯೋಜಿಸಿ
ಕಾರು ಖರೀದಿಸುವ ಮುನ್ನ ನೀವಿರುವ ಪ್ರದೇಶದ ಒಟ್ಟು ಆಗು ಹೋಗುಗಳ ಬಗ್ಗೆ ಯೋಚಿಸಿ ಅನಂತರ ಖರೀದಿಗೆ ಮುಂದಾಗಿ. ಪ್ರಯಾಣದ ಜತೆಗೆ ವಾಹನನಿಬಿಡ ರಸ್ತೆಗಳಲ್ಲಿ ಸಂಚಾರ, ಖರೀದಿಯ ನಂತರದ ನಿರ್ವಹಣಾ ಖರ್ಚು ವೆಚ್ಚಗಳು, ಪಾರ್ಕಿಂಗ್‌ ಸ್ಥಳಾವಕಾಶವನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಸಿದರೆ ಉತ್ತಮ. ಗ್ರಾಮೀಣ ಭಾಗಗಳಲ್ಲಿ ಕಾರೆಂದರೆ ಎತ್ತರ, ಅಗಲ ಸೇರಿ ಗಾತ್ರದಲ್ಲಿ ಹಿರಿದಾಗಿರಬೇಕೆಂದು ಬಯಸುವವರೇ ಹೆಚ್ಚು. ಆದರೆ ಅದೇ, ನಗರ ಪ್ರದೇಶಕ್ಕೆ ಬಂದಾಗ ಕನಿಷ್ಠ ಗಾತ್ರದ, ಕುಟುಂಬದ ಸುಖ ಪ್ರಯಾಣಕ್ಕೆ ಹೊಸ ಅನುಭೂತಿ ನೀಡುವಂತಿರಬೇಕೆಂಬುದೇ ಹಲವರ ಆಶಯ. ಅದಕ್ಕಾಗಿಯೇ ನಗರವಾಸಿಗಳು ಸಣ್ಣ ಕಾರುಗಳ ಮೊರೆ ಹೋಗುವುದೇ ಹೆಚ್ಚು.

ಬೇಡಿಕೆಯಲ್ಲಿರುವ ಕಾರುಗಳು
ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವ ರಿಟ್ಜ್, ಇಯಾನ್‌, ಸ್ಯಾಂಟ್ರೋ ಕಾರುಗಳೂ ನಗರದಲ್ಲಿ ಬೇಡಿಕೆ ಪಡೆಯುತ್ತಿವೆ. ಪ್ರಮುಖವಾಗಿ ಡಿವೈಡರ್‌ ಕ್ರಾಸ್‌ ಮಾಡಲು, ಸುಲಭ ಪಾರ್ಕಿಂಗ್‌ಗಾಗಿ ಸ್ಯಾಂಟ್ರೋ ಕಾರು ಬಳಕೆಯಾಗುತ್ತದೆ.

ಧನ್ಯಾ ಬಾಳೆಕಜೆ 

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.