ಭಯ ಮುಕ್ತರಾಗಿ, ಸಾಧನೆಯ ಪಥದಲ್ಲಿ ಮುನ್ನಡೆಯಿರಿ
Team Udayavani, Dec 17, 2018, 3:07 PM IST
ಜೀವನದಲ್ಲಿ ನಾವು ಪ್ರತಿಯೊಂದು ಹೆಜ್ಜೆ ಇಡುವಾಗಲೂ ಭಯ ಪಡುತ್ತೇವೆ. ಇದರಿಂದಾಗಿ ಬೀಳುತ್ತೇವೆ. ಧೈರ್ಯದಿಂದ ಮುನ್ನುಗ್ಗಿದರೆ ಬೀಳುವ ಸಾಧ್ಯತೆ ಕಡಿಮೆ ಎಂದು ಗೊತ್ತಿದ್ದರೂ ಭಯ ನಮ್ಮನ್ನು ಆವರಿಸಿ ನಾವು ಬೀಳುವಂತೆ ಮಾಡುತ್ತದೆ. ಹೆಜ್ಜೆ ಇಡುವ ಪ್ರಾರಂಭದಲ್ಲಿ ಇದು ಸಹಜ. ಆಗ ನಮ್ಮ ಮೇಲೆ ನಮಗೆ ಹಿಡಿತವಿಲ್ಲದಿರಬಹುದು. ಆದರೆ ಹೆಜ್ಜೆ ಇಟ್ಟು ಅನುಭವ ಹೊಂದಿದ ಮೇಲೂ ನಾವು ಬೀಳುತ್ತೇವೆ ಎಂದಾದರೆ ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ, ಭಯವಿದೆ ಎಂದೇ ಅರ್ಥ.
ನಾವು ಮಾಡಬೇಕಿರುವ ಕೆಲಸ ನಮಗೆ ಗೊತ್ತಿದೆ. ಆದರೂ ಅದು ನನ್ನಿಂದ ಸಾಧ್ಯವಿಲ್ಲವೇನೋ ಎಂಬ ಭಯವೇ ನಮ್ಮನ್ನು ಆ ಕೆಲಸ ಸರಿಯಾಗಿ ಮಾಡದಂತೆ ತಡೆಯುತ್ತದೆ. ಎಷ್ಟೋ ಬಾರಿ ನಮ್ಮಲ್ಲಿ ಸಾಮರ್ಥ್ಯವಿದ್ದರೂ ಅದರ ಸದ್ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಭಯ ಎನ್ನುವುದು ನಮ್ಮೊಳಗಿರುವ ಒಂದು ಸ್ವಾಭಾವಿಕ ಗುಣ. ಅದು ನಮ್ಮ ಮೇಲೆ, ನಮ್ಮ ಸಾಧನೆಯ ಪಥದಲ್ಲಿ ಅಡ್ಡಿಯಾಗಬಾರದು. ಪರಿಸ್ಥಿತಿ ಏನೇ ಬರಲಿ ನಾನು ನನ್ನ ಕೆಲಸವನ್ನು ಮಾಡಿ ಮುಗಿಸುತ್ತೇನೆ ಎಂಬ ಆತ್ಮವಿಶ್ವಾಸದ ಒಂದು ಕಿಡಿ ನಮ್ಮೊಳಗೆ ಹೊತ್ತಿ ಉರಿಸಿದರೆ ಸಾಕು ಎಂಥ ಸಂಕಷ್ಟದ ಪರಿಸ್ಥಿತಿಯಿಂದ ಬೇಕಾದರೂ ನಾವು ಹೊರಗೆ ಬರಲು ಸಾಧ್ಯವಿದೆ.
ಭಯ ಎನ್ನುವುದು ನಮ್ಮನ್ನು ದುರ್ಬಲರನ್ನಾಗಿಸುತ್ತದೆ. ನಮ್ಮ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಾ ಹೋಗುತ್ತದೆ. ಕೊನೆಗೊಂದು ದಿನ ನಮ್ಮ ಅಸ್ತಿತ್ವವನ್ನೇ ಇಲ್ಲವಾಗಿಸುತ್ತದೆ. ಭಯವನ್ನು ನಾವು ಗೆದ್ದಾಗಲೇ ಸಾಧಕರಾಗಲು ಸಾಧ್ಯವಿದೆ. ಅದನ್ನು ಬೇರೆ ಯಾರಿಂದಲೂ ಹೊರತೆಗೆಯಲು ಸಾಧ್ಯವಿಲ್ಲ.ನಾವೇ ನಮ್ಮೊಳಗಿನ ಭಯವನ್ನು ಹೊರ ತೆಗೆಯಬೇಕು.
ಕೆಲವರಿಗೆ ಕತ್ತಲೆಂದರೆ ಭಯ, ಇನ್ನು ಕೆಲವರಿಗೆ ಬೆಳೆಕೆಂದರೆ. ಈ ಭಯದ ನೆರಳಿಂದ ಹೊರಬರುವ ಆಸೆ ಎಲ್ಲರಲ್ಲೂ ಇದೆ. ಹೇಗೆ ಎಂಬ ಪ್ರಶ್ನೆ ಕಾಡಬಹುದು. ನಮ್ಮಲ್ಲಿರುವ ಭಯವನ್ನು ಹೋಗಲಾಡಿಸಬೇಕು ಎಂದಾದರೆ ಪರಿಸ್ಥಿತಿಯನ್ನು ಎದುರಿಸಬೇಕು. ಎಷ್ಟೇ ಭಯವಾದರೂ ಹಿಂದಕ್ಕೆ ಸರಿಯಬಾರದು. ಹೆಬ್ಟಾವು ನಮ್ಮನ್ನು ನುಂಗಲು ಕಾದಿದೆ ಎಂದಾದರೆ ಅಂತಿಮ ಕ್ಷಣದವರೆಗೂ ನಾವು ಹೋರಾಡಿದರೆ ಹೆಬ್ಟಾವಿನ ಬಾಯಿಯಿಂದಲೂ ನಾವು ತಪ್ಪಿಸಿಕೊಂಡು ಬರಲು ಸಾಧ್ಯವಿದೆ. ಹೀಗಿರುವಾಗ ಆರಂಭದಲ್ಲೇ ನಾವು ಹೆಜ್ಜೆ ಹಿಂದೆ ಇಟ್ಟರೆ ನಾವು ಮುಂದೆ ಸಾಗಲು ಸಾಧ್ಯವಾಗುವುದೇ ಇಲ್ಲ.
ಪ್ರತಿಯೊಂದು ಪ್ರಾಣಿಯಾಗಲಿ, ಪಕ್ಷಿಯಾಗಲಿ ತಾನು ಇನ್ನೊಂದು ಜೀವಿಗೆ ಬಲಿಯಾಗುತ್ತೇನೆ ಎಂದು ಗೊತ್ತಿದ್ದರೂ ಕೂಡ ಅವು ತಮ್ಮ ಗೂಡೊಳಗೆ ಬೆಚ್ಚಗೆ ಕುಳಿತುಕೊಳ್ಳುವುದಿಲ್ಲ. ಸಂಕಷ್ಟದ ಪರಿಸ್ಥಿತಿ ಎದುರಾದಾಗ ಕೊನೆಯ ಉಸಿರಿರುವವರೆಗೂ ಹೋರಾಡುತ್ತವೆ. ಹೀಗಿರುವಾಗ ನಮಗೇಕೆ ಸಾಧ್ಯವಿಲ್ಲ. ನಾವು ಪ್ರಯತ್ನಪಟ್ಟರೆ ಸಾಧನೆಗೆ ಅಸಾಧ್ಯವಾದುದು ಏನೂ ಇಲ್ಲ. ಇದನ್ನು ಹಲವಾರು ಮಂದಿ ನಿರೂಪಿಸಿದ್ದಾರೆ. ನಾವು ಅವರಲ್ಲಿ ಒಂದಾಗ ಬಾರದೇಕೆ ಅಲ್ವಾ..?
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ