ಹ್ಯಾಂಗಿಂಗ್‌ ಪಾಟ್‌, ಮನೆಯ ಒಳಾಂಗಣ, ಹೊರಾಂಗಣ ಸೌಂದರ್ಯ ಹೆಚ್ಚಿಸಿ


Team Udayavani, Jan 19, 2019, 8:12 AM IST

19-january-10.jpg

ಮನೆ ಸುಂದರವಾಗಿ ಕಾಣುವಂತೆ ಮಾಡುವುದು ಪ್ರತಿಯೊಬ್ಬರ ಆಸೆ. ಮನೆಯ ಒಳಗಡೆ ಎಷ್ಟು ಸುಂದರಗೊಳಿಸುತ್ತೇವೋ ಅಷ್ಟೇ ಹೊರಗಡೆಯಿಂದ ಸುಂದರಗೊಳಿಸುವುದೂ ಅಗತ್ಯ. ಅದಕ್ಕಾಗಿ ಮನೆಯ ಮುಂದೆ ತುಂಬಾ ಜಾಗವಿದ್ದವರೂ ಗಾರ್ಡನ್‌ ಮಾಡುತ್ತಾರೆ. ಆದರೆ ಕಡಿಮೆ ಜಾಗವಿರುವವರು ಇರುವ ಜಾಗದಲ್ಲೇ ಮನೆಯನ್ನು ಸುಂದರಗೊಳಿಸಲು ಪ್ರಯತ್ನಿಸುತ್ತಾರೆ. ಮನೆಯ ಮುಂದೆ, ಕಾಂಪೌಂಡ್‌ನ‌ಲ್ಲಿ ಮಾತ್ರವಲ್ಲ ಒಳಾಂಗಣದ ಅಲಂಕಾರಕ್ಕೂ ಹ್ಯಾಂಗಿಂಗ್‌ ಪಾಟ್‌ಗಳನ್ನು ಬಳಸಿದರೆ ಮನೆ ಆಕರ್ಷಣೀಯವಾಗುವುದು.

ಎಲ್ಲೆಲ್ಲಿ ಬಳಸಬಹುದು?
ಹ್ಯಾಂಗಿಂಗ್‌ ಪಾಟ್‌ಗಳನ್ನು ಮನೆಯ ಮುಂದಿನ ಸಿಟೌಟ್‌ ಗಳಲ್ಲಿ ಹೆಚ್ಚಾಗಿ ಬಳಸಬಹುದು. ಟೆರೇಸ್‌ನಲ್ಲಿ ಇವುಗಳನ್ನು ನೇತಾಡಿಸುವುದರಿಂದ ಮನೆಗೆ ಅಂದವಾದ ಲುಕ್‌ ಸಿಗುತ್ತದೆ. ಮನೆಯ ಸುತ್ತ ಬದಿಗಳಲ್ಲಿ, ಕಾಂಪೌಂಡ್‌ಗಳಲ್ಲಿ ಇವುಗಳನ್ನು ನೇತಾಡಿಸಬಹುದು. ಮನೆಯನ್ನು ಪ್ರವೇಶಿಸುವ ಬಾಗಿಲುಗಳ ಎರಡು ಬದಿಯಲ್ಲಿ ನೇತಾಡಿಸಬಹುದು. ಅತಿ ಹೆಚ್ಚು ಸಂಖ್ಯೆಯಲ್ಲಿ ಹ್ಯಾಂಗಿಂಗ್‌ ಪಾಟ್‌ ಗಳನ್ನು ಬಳಸವುದು ಕೂಡ ಮನೆಯ ಅಂದಗೆಡಿಸಬಹುದು. ಆದ್ದರಿಂದ ಸೀಮಿತವಾಗಿ ಬಳಸಿ ಹ್ಯಾಂಗಿಂಗ್‌ ಪಾಟ್‌ ಬಳಸಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಬಹುದು.

ನಿರ್ವಹಣೆ ಹೇಗೆ?
ಹ್ಯಾಂಗಿಂಗ್‌ ಪಾಟ್‌ಗಳು ಸಣ್ಣದಾಗಿರುವುದರಿಂದ ಅದರಲ್ಲಿ ನೀರಿಗೆ ಜಾಗ ಕಡಿಮೆಯಿರುತ್ತದೆ. ಆದ್ದರಿಂದ ಅವುಗಳಿಗೆ ನೀರುಣಿಸುತ್ತಾ ಇರುವುದು ಅಗತ್ಯ. ಜತೆಗೆ ಕಡಿಮೆ ಮಣ್ಣು ಬಳಸುವುದರಿಂದ ಅದರ ಫ‌ಲವತ್ತತೆ ಕಡಿಮೆಯಾಗುತ್ತದೆ. ಅದಕ್ಕಾಗಿ ಅವುಗಳಿಗೆ ಬೇಕಾದಷ್ಟು ಫ‌ಲವತ್ತತೆ ನೀಡಬೇಕಾಗುತ್ತದೆ. ಪಾಟ್‌ಗಳಲ್ಲಿ ಇತರ ಕಳೆಗಳು, ಕಸ ತುಂಬಿದ್ದರೆ ಅವುಗಳನ್ನು ಕೀಳಿ ಸ್ವಚ್ಛಗೊಳಿಸುವುದರಿಂದ ಗಿಡ ಸುಂದರವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಗಿಡಗಳು ಹೆಚ್ಚು ದೊಡ್ಡದಾಗಿ ಬೆಳೆದಾಗ ಅವುಗಳನ್ನು ಕತ್ತರಿಸುವುದು ಕೂಡ ಅತ್ಯಗತ್ಯ.

ಕೃತಕ ಗಿಡಗಳನ್ನೂ ಬಳಸಬಹುದು
ಕೃತಕ ಗಿಡಗಳನ್ನು ಮನೆಯ ಮುಂದೆ ಹ್ಯಾಂಗಿಂಗ್‌ ಪಾಟ್‌ ಗಳಲ್ಲಿ ಬಳಸಬಹುದು. ಇದು ನೈಜ ಗಿಡಗಳಂತೆಯೇ ಕಾಣುವಂತೆ ಮಾಡುತ್ತದೆ. ಇವುಗಳನ್ನು ನಿರ್ವಹಣೆ ಮಾಡಬೇಕಾದ ಅಗತ್ಯ ಇರುವುದಿಲ್ಲವಾದ್ದರಿಂದ ಇದು ಮನೆಯನ್ನು ಸುಂದರಗೊಳಿಸಲು ಅತ್ಯಂತ ಸುಲಭ ವಿಧಾನ. 

ಆಯ್ಕೆ ಉತ್ತಮವಾಗಿರಲಿ
ಹ್ಯಾಂಗಿಂಗ್‌ ಪಾಟ್‌ಗಳನ್ನು ಖರಿದಿಸುವಾಗ ಮನೆಯ ಪರಿಸರಕ್ಕೆ ಅನುಗುಣವಾಗಿ ಖರೀದಿಸಬೇಕಾಗುತ್ತದೆ. ಬಿಸಿಲು ತಾಗುವಲ್ಲಿ ಬಳಸುವುದಾದರೆ ಅದಕ್ಕ ಸರಿಹೊಂದುವ ಗಿಡಗಳನ್ನು ಆಯ್ಕೆ ಮಾಡಬೇಕು. ಮನೆಯ ಒಳಗಡೆ ಅಥವಾ ನೆರಳಿರುವಲ್ಲಿ ಬಳಸುವುದಾದರೆ ಅದಕ್ಕೆ ಸೂಕ್ತವಾಗುವ ಗಿಡಗಳನ್ನೇ ಖರೀದಿಸಬೇಕು. ಅಷ್ಟೇ ಅಲ್ಲದೆ ಗಿಡಗಳನ್ನು ಆಯ್ಕೆ ಮಾಡುವಾಗ ಅವುಗಳ ಬಣ್ಣ, ಆಕೃತಿಗಳನ್ನು ಗಮನಿಸಿ ಆಯ್ಕೆ ಮಾಡಬೇಕಾಗುತ್ತದೆ. ಒಂದೇ ಬಣ್ಣದ, ಒಂದೇ ಆಕೃತಿಯ ಗಿಡಗಳನ್ನು ಖರೀದಿಸುವ ಬದಲು ವಿವಿಧ ಬಣ್ಣಗಳನ್ನು ಆಯ್ಕ ಮಾಡಬಹುದು. ಗಿಡಗಳ ಬಣ್ಣಗಳ ಆಯ್ಕೆಯಲ್ಲೂ ಹೆಚ್ಚು ಆಕರ್ಷಕ ಬಣ್ಣಗಳನ್ನು ಆಯ್ಕೆ ಮಾಡುವುದರಿಂದ ಮನೆಗೆ ಆಕರ್ಷಕ ಲುಕ್‌ ನೀಡುತ್ತದೆ. 

ರಂಜಿನಿ ಮಿತ್ತಡ್ಕ 

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.