ಸಂತೋಷವನ್ನು ಹುಡುಕೋಣ


Team Udayavani, Feb 11, 2019, 7:45 AM IST

11-february-13.jpg

ಖುಷಿಯಾಗಿರಬೇಕು ಎಂಬ ಆಸೆ ಎಲ್ಲರಲ್ಲೂ ಇದೆ. ಆದರೆ ಹೇಗೆ ಎಂದು ಯೋಚಿಸುತ್ತ ನಾವು ಸಂತೋಷವಾಗಿರುವುದನ್ನೇ ಮರೆತುಬಿಡುತ್ತೇವೆ.

‘ತೋಷ’ವನ್ನು ಸೇರಿಕೊಂಡು ಬಂದ ಮನಃಸ್ಥಿತಿಯೇ ಸಂತೋಷ. ಇದನ್ನು ಆನಂದವೆನ್ನಿ, ಖುಷಿ ಎನ್ನಿ, ಸುಖವೆನ್ನಿ, ಆಂಗ್ಲ ಭಾಷೆಯ ಹ್ಯಾಪಿ ಎನ್ನಿ ಎಲ್ಲವೂ ಒಟ್ಟಿನಲ್ಲಿ ನಮ್ಮ ಮನದ ಆಹ್ಲಾದ ವರ್ತನೆಗೆ ಇದೊಂದು ಪರ್ಯಾಯ ಪದವಾಗಿದೆ.

ಈ ಸಂತೋಷ ಸ್ವ- ಗಳಿಕೆಯೇ? ಇನ್ನೊಬ್ಬರಿಂದಲೇ? ಎಂಬ ಪ್ರಶ್ನೆಗುತ್ತರ ‘ಎರಡೂ ಹೌದು’. ಹಾಗಿರುವಾಗ ಸಂತೋಷ ಪದಕ್ಕೆ ವ್ಯಕ್ತಿಯೂ- ಸಮುದಾಯವೂ ಕಾರಣವೆಂದರೆ ಆಶ್ಚರ್ಯವಿಲ್ಲ. ಇಂಥ ಸಂತೋಷ ವ್ಯಕ್ತಿ-ವಿಭಿನ್ನತೆ ಎಂಬ ಮನೋವಿಜ್ಞಾನದ ತಾತ್ವಿಕ ತಳಹದಿಯ ಮೇಲೆ ನಿಂತಿದೆ. ಪ್ರತಿಯೊಬ್ಬರೂ ಓದಿನಿಂದಾಗಲಿ, ಬರೆಯುವಿಕೆಯಿಂದಾಗಲಿ ( ಸಾಹಿತ್ಯದ ವಿವಿಧ ಪ್ರಕಾರ) ನಿದ್ದೆಯಿಂದಾಗಲಿ, ಒಳ್ಳೆಯ ರುಚಿಕಟ್ಟಾದ ಆಹಾರ ಪದಾರ್ಥಗಳ ಸೇವನೆಯಿಂದಾಗಲಿ, ನಾಟ್ಯ- ನೃತ್ಯಗಳ ನೋಡುವುದರಿಂದಾಗಲಿ, ಹೊರ ಸಂಚಾರದಿಂದಾಗಲಿ, ತೀರ್ಥಕ್ಷೇತ್ರಕ್ಕೆ ಹೋಗುವುದರಿಂದಾಗಲಿ, ಇತರರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದಾಗಲಿ ಇದನ್ನು ದೊರಕಿಸಿಕೊಳ್ಳುತ್ತಾರೆ. ಎಲ್ಲರಿಗೂ ಎಲ್ಲರಿಂದಲೂ ಸಿಗುತ್ತದೆ ಎಂದರೂ ತಪ್ಪಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದರಿಂದ ಎಂದರೆ ಆಶ್ಚರ್ಯವೂ ಆಗುತ್ತದೆ.

ಲೋಕೋ ಭಿನ್ನ ರುಚಿ ಎಂಬ ಮಾತಿದೆ. ಹೌದು, ಲೋಕದಲ್ಲಿ ಎಷ್ಟು ಜನರಿದ್ದಾರೋ ಅದರ ನೂರು, ಸಾವಿರ ಪಟ್ಟು ಮನಸ್ಸುಗಳಿರುತ್ತವೆ. ಅಷ್ಟೇ ಸಂತೋಷದ ರೀತಿ ನೀತಿಗಳಿರುತ್ತವೆ.

ಕೆಲವರಿಗೆ ಧ್ಯಾನದಿಂದ ಸಂತೋಷ ದೊರೆತರೆ, ಇನ್ನು ಕೆಲವರಿಗೆ ಮೌನದಿಂದ. ಮತ್ತೆ ಕೆಲವರಿಗೆ ಧ್ಯಾನ, ಮೌನ, ಪ್ರಾರ್ಥನೆ, ಊಟ, ತಿಂಡಿಗಳೆಲ್ಲದರಿಂದಲೂ ಸಂತೋಷ ಸಿಗಬಹುದು, ಸಿಗದೆಯೂ ಇರಬಹುದು. ಯಾಕೆಂದರೆ ವ್ಯಕ್ತಿ ವ್ಯಕ್ತಿಗಳ ಮನಸ್ಸೇ ಹಾಗೆ ಭಿನ್ನ-ಭಿನ್ನ. ಒಂದರ್ಥದಲ್ಲಿ ಬೇರೆ- ಬೇರೆ ಇನ್ನೊಂದರ್ಥದಲ್ಲಿ ಒಡೆದ ಕನ್ನಡಿಯ ಹಾಗೆ.

ಈ ಸಂತೋಷ ಕಂಡುಕೊಳ್ಳುವ ಬಗೆಯಾದರೂ ಹೇಗೆ? ಇದು ಆ ವ್ಯಕ್ತಿಗೆ ಸಂಬಂಧಿಸಿದೆ. ಯಾಕೆಂದರೆ ಅದು ಅವನ ತೃಪ್ತಿ- ಅತೃಪ್ತಿಯ ಮನೋಭಾವಕ್ಕೆ ಸಂಬಂಧಿಸಿದೆ. ಕೆಲವರಿಗೆ ಒಂದು ಲಡ್ಡು ತಿಂದರೆ ಸಂತೋಷವಾಗುತ್ತದೆ. ಇನ್ನು ಕೆಲವರಿಗೆ ತಟ್ಟೆ ತುಂಬ ಲಡ್ಡು ತಿಂದರೂ ಸಂತೋಷ ಸಿಗದು. ಇದನ್ನು ತೃಪ್ತಿ ಅನ್ನೋಣವೇ? ಅತೃಪ್ತಿ ಎನ್ನೋಣವೇ? ಆಸೆ ಎನ್ನೋಣವೇ? ಅತಿಯಾಸೆ ಎನ್ನೋಣವೇ?

ಹೀಗಿರುವಾಗ ಸಂತೋಷವನ್ನು ಇಷ್ಟೇ ಎಂದು ಹೇಳಲು ಹೇಗೆ ಸಾಧ್ಯ. ಪ್ರತಿಯೊಬ್ಬ ಮಾನವನೂ ಸಂತೋಷವನ್ನು ಪಡೆಯುವುದು ಅವನವನ ಬೇಡಿಕೆ ಪೂರೈಸಲ್ಪಟ್ಟಾಗ ಅದರಲ್ಲಿ ಅವನು ಸಂಪೂರ್ಣವಾಗಿ ಮನೋಚಾಂಚಲ್ಯವಿರದೇ ತೊಡಗಿಸಿಕೊಂಡಾಗ ಹಿಡಿದ ಕೆಲಸ, ಆಡುವ ಮಾತು, ನಡೆದ ಹಾದಿಯಲ್ಲಿ ಒಂದಿಷ್ಟು ಚೈತನ್ಯಶಾಲಿ ಮನಸ್ಸು ಮಿಳಿತಗೊಂಡಾಗ ತನ್ನಿಂದ ತಾನಾಗಿ ಸಂತೋಷ ಶಬ್ದಕ್ಕೆ ಇಂಬುಕೊಡುತ್ತದೆ. ಇದೇ ತಾನೇ ನಾವು ಕಂಡುಕೊಳ್ಳುವ ಸಂತೋಷ.

ವ. ಉಮೇಶ್‌ ಕಾರಂತ್‌

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.