ಬೈಕ್‌ಟೂರ್‌ ಹೊರಟಿದ್ದೀರಾ ಸಿದ್ಧತೆ ಹೀಗೆ ಮಾಡಿ…


Team Udayavani, Feb 22, 2019, 8:04 AM IST

22-february-10.jpg

ಬೈಕ್‌ ಟೂರು ಹೊರಡುವುದು ಈಗಿನ ಕಾಲದಲ್ಲಿ ಸಾಮಾನ್ಯ. ಬೇರೆ ವಾಹನಗಳಿಗಿಂತಲೂ ಹೆಚ್ಚಿನ ಮಜಾ ಕೊಡುತ್ತೆ ಎಂಬ ಕಾರಣಕ್ಕೆ ಈಗೀಗ ಯುವಕರು ಮಾತ್ರವಲ್ಲದೆ, ಮಧ್ಯವಯಸ್ಕರೂ ಬೈಕ್‌ ಟೂರ್‌ ಎಂಬ ಕ್ರೇಜ್‌ಗೆ ಅಂಟಿಕೊಂಡಿದ್ದಾರೆ. ಬೈಕ್‌ ಟೂರ್‌ಗೆ ಹೊರಡುವ ಮುನ್ನ ಬೈಕ್‌ನ ಸ್ಥಿತಿ ಬಗ್ಗೆ ಗಮನ ಹರಿಸಬೇಕಾದ್ದು ತುರ್ತು ಅಗತ್ಯ. ಆದ್ದರಿಂದ ನಿಮ್ಮ ಬೈಕ್‌ ಅದಕ್ಕೆ ತಯಾರಿದೆಯೇ ಎಂಬುದನ್ನು ಪರಿಶೀಲಿಸಿ.

ಟಯರ್‌: ಟಯರ್‌ನ ಥ್ರೆಡ್‌ಗಳು ಚೆನ್ನಾಗಿರಬೇಕು. ಟಯರ್‌ ಚೆನ್ನಾಗಿಲ್ಲ ಎಂದರೆ, ದಾರಿ ಮಧ್ಯೆ ಪಂಕ್ಚರ್‌, ಸ್ಕಿಡ್‌ ಆಗುವ ಸಾಧ್ಯತೆ ಇರಬಹುದು. ಆದ್ದರಿಂದ ಎರಡೂ ಟಯರ್‌ ಚೆನ್ನಾಗಿದೆಯೇ? ಟ್ಯೂಬ್‌ ಹೇಗಿದೆ? ರಿಮ್‌ ಚೆನ್ನಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಆಯಿಲ್‌: ಸುಗಮ ಸವಾರಿಗೆ ಎಂಜಿನ್‌ ಆಯಿಲ್‌ ಕೂಡ ಮುಖ್ಯ. ಹಳೆಯ ಎಂಜಿನ್‌ ಆಯಿಲ್‌ ಇದ್ದರೆ ಕಪ್ಪಾಗಿ ಎಂಜಿನ್‌ಗೆ ಹಾನಿಯಾಗುವ ಅಥವಾ ಆಯಿಲ್‌ ಲೆವೆಲ್‌ ಕಡಿಮೆಯಿದ್ದರೆ ಎಂಜಿನ್‌ ದಾರಿ ಮಧ್ಯೆ ಕೆಟ್ಟುಹೋಗುವ ಅಪಾಯವಿರುತ್ತದೆ. ಆದ್ದರಿಂದ ಟೂರ್‌ಗೆ ಹೋಗುವ ಮುನ್ನ ಹೊಸ ಎಂಜಿನ್‌ ಆಯಿಲ್‌ ಹಾಕುವುದೇ ಉತ್ತಮ.

ಚೈನ್‌: ಚೈನ್‌ ಟೆನÒನ್‌ ಸರಿಯಾಗಿರಬೇಕು. ಜೋತಾಡಿಕೊಂಡಿದ್ದರೆ, ಉತ್ತಮ ಸವಾರಿ ಸಾಧ್ಯವಿಲ್ಲ. ಚೈನ್‌ ಸಾಕಷ್ಟು ಟೈಟ್‌ ಮಾಡಿ, ಉತ್ತಮ ಆಯಿಲ್‌ ಅಥವಾ ಸ್ಪ್ರೇ ಅನ್ನು ಬಿಡಬೇಕು. ಸಾøಕೆಟ್‌ ಗಳನ್ನೂ ಪರಿಶೀಲಿಸಿ. ಹೆಚ್ಚು ಸವೆದಿದ್ದರೆ ಬದಲಾಯಿಸಿ. ಜತೆಗೆ ತುರ್ತು ಸಂದರ್ಭಕ್ಕೆಂದು ಹೆಚ್ಚುವರಿ ಚೈನ್‌ಲಿಂಕ್‌ ಅನ್ನು ಖರೀದಿಸಿ ಬ್ಯಾಗ್‌ನಲ್ಲಿಟ್ಟುಕೊಳ್ಳುವುದು ಉತ್ತಮ.

ಎಲೆಕ್ಟ್ರಿಕಲ್ಸ್‌: ಎಲ್ಲ ಬಲ್ಬ್ ಗಳು ಸರಿಯಾಗಿ ಉರಿಯುತ್ತಿದೆಯೇ? ಫ್ಯೂಸ್‌ ಸ್ಥಿತಿ ಚೆನ್ನಾಗಿದೆಯೇ ಎಂಬುದನ್ನು ಪರಿಶೀಲಿಸಿ. ಹೆಚ್ಚುವರಿ ಫ್ಯೂಸ್‌ ಖರೀದಿಸಿಟ್ಟುಕೊಳ್ಳಿ. ವಯರಿಂಗ್‌ ಅಗತ್ಯವಿದ್ದರೆ ಪರಿಶೀಲಿಸಿ. ಒಂದು ಹೆಡ್‌ಲೈಟ್‌, ಬ್ರೇಕ್‌ಲೈಟ್‌ ಬಲ್ಬ್ ಗಳನ್ನೂ ಖರೀದಿಸಿಟ್ಟುಕೊಳ್ಳಿ.

ಬ್ರೇಕ್‌ಪ್ಯಾಡ್‌: ಬ್ರೇಕ್‌ಪ್ಯಾಡ್‌ ಸವೆದಿದ್ದರೆ ಬದಲಾಯಿಸಿ. ಬ್ರೇಕ್‌ಲೈನರ್‌, ಸ್ಪ್ರಿಂಗ್‌ಗಳು ಉತ್ತಮವಾಗಿವೆಯೇ ಎಂದು ಪರಿಶೀಲಿಸಿ. 

ಎಂಜಿನ್‌ ಪರಿಶೀಲನೆ: ಸ್ಪಾರ್ಕ್‌ಪ್ಲಗ್‌, ಎಂಜಿನ್‌ ಹೆಡ್‌, ಕ್ಯಾಮ್‌ಗಳು ಮತ್ತು ತಳಭಾಗದಲ್ಲಿ ಎಂಜಿನ್‌ ಆಯಿಲ್‌ ಸೋರುತ್ತಿದೆಯೇ ಎಂದು ಪರಿಶೀಲಿಸಿ. ತುಸು ತೇವಾಂಶ ಇದ್ದರೂ, ಕೂಡಲೇ ರಬ್ಬರ್‌ ಪ್ಯಾಕ್‌ಗಳನ್ನು ಬದಲಾಯಿಸಿ. ಬ್ರೇಕ್‌ ಆಯಿಲ್‌, ಎಂಜಿನ್‌ ಕೂಲೆಂಟ್‌ಗಳನ್ನೂ ಅಗತ್ಯವಾಗಿ ಬದಲಾಯಿಸುವುದು ಉತ್ತಮ. ಹ್ಯಾಂಡಲ್‌, ಸ್ವಿಂಗ್‌ ಆರ್ಮ್, ಸ್ಟೀರಿಂಗ್‌ ಬೋಲ್ಟ್‌ಗಳನ್ನು ಟೈಟ್‌ ಮಾಡಿಸಿ.

ಈಶ 

ಟಾಪ್ ನ್ಯೂಸ್

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.