ಆಕರ್ಷಕ ರಸ್ತೆ ಮಂಗಳೂರಿನಲ್ಲೂ ನಿರ್ಮಾಣವಾಗಲಿ


Team Udayavani, Nov 4, 2018, 12:27 PM IST

4-november-11.gif

ನಗರ ಸೌಂದರ್ಯ ಎದ್ದು ಕಾಣವುದು ರಸ್ತೆಗಳಿಂದ. ಆಕರ್ಷಕ ರಸ್ತೆಗಳೇ ಪ್ರವಾಸಿಗರನ್ನು ಹೆಚ್ಚಾಗಿ ಇಲ್ಲಿಗೆ ಸೆಳೆಯಲು ಪ್ರಮುಖ ಕಾರಣವೂ ಹೌದು. ಹೀಗಾಗಿ ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೂ ಪ್ರಾಮುಖ್ಯ ಸಿಕ್ಕಿದೆ. ಹೀಗಾಗಿ ನಮ್ಮ ರಸ್ತೆಯನ್ನು ಸುಂದರ ಮತ್ತು ಆಕರ್ಷಕಗೊಳಿಸಲು ಒಂದಷ್ಟು ನಮ್ಮ ದೇಶ ಹಾಗೂ ವಿದೇಶಗಳ ಮಾದರಿಯನ್ನು ತೆಗೆದುಕೊಳ್ಳಬಹುದು.

ಜಪಾನ್‌ ದೇಶ ನಗರೀಕರಣ, ಪ್ರವಾಸೋದ್ಯಮ, ಸಾರಿಗೆ- ಸಂಚಾರದಲ್ಲಿ ತಾಂತ್ರಿಕತೆಯ ಸದ್ಬಳಕೆ ಹಾಗೂ ಆಧುನಿಕತೆಯ ಮೂಲಕ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಒಂದೇ ಸೂರಿನಡಿ ಅನೇಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಜಪಾನಿಗರ ವೈಶಿಷ್ಟ್ಯ. ಅದಕ್ಕೆ ಸಾಕ್ಷಿ ಅನೇಕವಾದರೂ ಇಹಿಮ ಒಹಶಿ ಎಂಬ ಸೇತುವೆಯೂ ಇದಕ್ಕೆ ಒಂದು ಉದಾಹರಣೆ. ಈ ಸೇತುವೆಯನ್ನು ಕೇವಲ ಸಂಚಾರಕ್ಕೆ ಮಾತ್ರವಲ್ಲ ನಗರ ಸೌಂದರ್ಯ ವೃದ್ಧಿಸಲೂ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಜಾರು ಬಂಡಿಯಂತೆ ನಿರ್ಮಿಸಿದ್ದು, ಇದೂ ಪ್ರವಾಸಿಗರ ಆಕರ್ಷಕ ಕೇಂದ್ರವಾಗಿದೆ. 

ಸೇತುವೆ ವೈಶಿಷ್ಟ್ಯ 
ಜಪಾನಿನ ಇಹಿಮ ಒಹಶಿ ಸೇತುವೆ ಪ್ರಪಂಚದ ಮೂರನೇ ಅತಿದೊಡ್ಡ ಮಾದರಿ ಸೇತುವೆ. ಇದು ಮಾಟ್ಸು ಶಿಮನೆ ಹಾಗೂ ಸೆಕೈಮಿನಾಟೋ ಎಂಬ ಎರಡು ನಗರಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆಯನ್ನು ಆತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಈ ಸೇತುವೆ ಇಳಿ ಜಾರಿನಿಂದ ಕೂಡಿದ್ದು, ವಾಹನ ಸಂಚಾರ ಮಾಡಬೇಕಾದರೆ ಗಂಡೆದೆ ಇರಲೇಬೇಕು. ಅದಕ್ಕಾಗಿ ಈ ಸೇತುವೆ ಸಂಚಾರಿಗರಿಗೆ ಅದ್ಭುತ ಅನುಭವ ನೀಡುತ್ತದೆ. ಅಲ್ಲದೇ ಸೇತುವೆ ಕೆಳಗೆ ಹಡಗು ಸಂಚಾರಕ್ಕಾಗಿ ಯೋಗ್ಯವಾಗಿ ನಿರ್ಮಿಸಲಾಗಿದೆ. ಇಹಿಮ ಒಹಶಿ ಸೇತುವೆಯೂ ಕೇವಲ ಸಂಚಾರಕ್ಕಾಗಿ ಮಾತ್ರವಲ್ಲದೇ ಪ್ರವಾಸೋದ್ಯಮ, ಜಲ ಸಂಚಾರ ಹಾಗೂ ಮೀನುಗಾರಿಕೆಗೆ ಯೋಗ್ಯವಾಗಿ ನಿರ್ಮಿಸಲಾಗಿದೆ, ಈ ಕಾರಣಕ್ಕಾಗಿ ಈ ಸೇತುವೆ ಮಾದರಿಯಾಗುತ್ತದೆ. 

ಈಗಾಗಲೇ ಮುಂಬಯಿಯಲ್ಲಿ ಸಮುದ್ರದ ನಡುವೆ ಸೇತುವೆಯನ್ನು ನಿರ್ಮಿಸಲಾಗಿದೆ. ನಮ್ಮಲ್ಲೂ ಇಂಥ ಆಕರ್ಷಕ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಅವಕಾಶವಿದೆ. ಸೂಕ್ತ ಭದ್ರತಾ ಕ್ರಮಗಳೊಂದಿಗೆ ಇದರ ಸದ್ಬಳಕೆ ಮಾಡಿಕೊಂಡರೆ ಈ ಮೂಲಕವೂ ಮಂಗಳೂರು ಪ್ರವಾಸೋದ್ಯಮ ಹೆಸರು ಗಳಿಸಲು ಸಾಧ್ಯವಿದೆ.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.