ಹಂಪನಕಟ್ಟೆಯ ಫುಟ್ಪಾತ್ ದುಸ್ಥಿತಿ
Team Udayavani, Nov 11, 2018, 3:33 PM IST
ಸ್ಮಾರ್ಟ್ ಸಿಟಿಯಾಗುವ ಸಿದ್ಧತೆಯಲ್ಲಿರುವ ಮಂಗಳೂರಿನ ಹೃದಯಭಾಗದಲ್ಲಿರುವ ಫುಟ್ಪಾತಿನ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಮರುಕಉಂಟಾಗುತ್ತದೆ!. ಕೆ.ಎಸ್.ರಾವ್ರಸ್ತೆಯಲ್ಲಿ ಫುಟ್ಪಾತ್ ಇಲ್ಲದೆ ಪಾದಚಾರಿಗಳು ಮಾರ್ಗ ಮಧ್ಯೆಯೇ ನಡೆದಾಡುವಅಪಾಯಕಾರಿ ಪರಿಸ್ಥಿತಿ ಇದೆಯಾದರೆ, ಕಾಲುದಾರಿ ಇದ್ದಲ್ಲಿ ಸರಾಗವಾಗಿ ನಡೆದಾಡಲು ವಾಣಿಜ್ಯ ಮಳಿಗೆಗಳೂ ಸೇರಿದಂತೆ ಹತ್ತಾರು ಅಡೆತಡೆಗಳು!
ಹಂಪನಕಟ್ಟೆಯಿಂದ ಬಾವುಟಗುಡ್ಡೆಗೆ ಹೋಗುವ ಕಾಲುದಾರಿಯ ಪರಿಸ್ಥಿತಿ ಹದಗೆಟ್ಟಿದ್ದು,ಇಲ್ಲಿನ ಕಾಲುದಾರಿಯಲ್ಲಿರುವ ಅಸ್ತವ್ಯಸ್ತಗೊಂಡ ಕಲ್ಲುಚಪ್ಪಡಿ ಪಾದಚಾರಿಗಳಿಗೆ ನಿರಂತರ ಸಮಸ್ಯೆ ತಂದೊಡ್ಡುತ್ತಿದೆ. ಸಿಂಡಿಕೇಟ್ ಬ್ಯಾಂಕ್ ಬಳಿಯ ಫುಟ್ಪಾತಿನಲ್ಲಿ ಹಲವು ತಿಂಗಳುಗಳಿಂದ ತ್ಯಾಜ್ಯ ಮಣ್ಣಿನ ರಾಶಿ ಇದ್ದು, ಇದನ್ನು ತೆರವುಗೊಳಿಸದೇ ಇರುವುದರಿಂದಾಗಿ ಪಾದಚಾರಿಗಳಿಗೆ ನಡೆದಾಡಲುತೀವ್ರತೊಂದರೆಯುಂಟಾಗಿದೆ. ಈ ರಸ್ತೆಯಲ್ಲಿ ಸೂಕ್ತ ಬಸ್ಸು ನಿಲ್ದಾಣ ಇಲ್ಲದೆ ವಿದ್ಯಾರ್ಥಿಗಳೂ ಸೇರಿದಂತೆ ಸಾವಿರಾರು ಮಂದಿ ದಿನನಿತ್ಯ ನರಕಯಾತನೆ ಪಡುತ್ತಿದ್ದು, ಕಾಲುದಾರಿಯಲ್ಲಿ ನಡೆದಾಡಲೂ ಹರಸಾಹಸ ಪಡಬೇಕಾಗಿದೆ. ಸ್ಥಳೀಯ ಕಾರ್ಪೊರೇಟರ್ ಈ ಸಮಸ್ಯೆಗೆಇನ್ನಾದರೂ ಶಾಶ್ವತ ಪರಿಹಾರಕಂಡುಕೊಳ್ಳಬಹುದೇ?!
ಸತೀಶ್ ಶೆಟ್ಟಿ ಕೊಡಿಯಾಲ್ಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ