ಉರ್ವಸ್ಟೋರ್‌ ಮಾರುಕಟ್ಟೆ ಅಭಿವೃದ್ಧಿಯಾಗಲಿ


Team Udayavani, Mar 10, 2019, 9:42 AM IST

10-march-12.jpg

ಸ್ಮಾರ್ಟ್‌ ನಗರಿಯಾಗಿರುವ ಮಂಗಳೂರಿನಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದರಲ್ಲಿ ಸಿಂಹಪಾಲು ಮಾರುಕಟ್ಟೆಗಳ ಅಭಿವೃದ್ಧಿಯಾಗಿರುವುದು ಸಂತಸದ ವಿಚಾರ. ನಗರವು ಮಹಾನಗರವಾಗಿ ಪರಿವರ್ತನೆಯಾಗುವಾಗ ಶಾಪಿಂಗ್‌ ಮಾಲ್‌ ಸಂಸ್ಕೃತಿಯೂ ಬೆಳೆದು ಬಂತು. ಮಾರುಕಟ್ಟೆಯಿಂದ ಬಂದಂತಹ ಪರಿಕಲ್ಪನೆಯಲ್ಲೇ ಮಾಲ್‌ ಸಂಸ್ಕೃತಿಯೂ ಬೆಳೆದು ಬಂದಿದೆ. ಇದೊಂದು ಅತ್ಯುತ್ತಮ ಬೆಳವಣಿಗೆ.

ಆಧುನಿಕ ಸ್ಪರ್ಶದೊಂದಿಗೆ ಹಿಂದಿನ ಪರಿಕಲ್ಪನೆ ಸೇರಿದರೆ ಅತ್ಯುತ್ತಮವಾಗಿರುತ್ತದೆ. ಮಾಲ್‌ನಷ್ಟು ಆಕರ್ಷಣೀಯವಲ್ಲದಿದ್ದರೂ ಅದಕ್ಕೆ ಪರ್ಯಾಯವಾಗಿ ಅತ್ಯುತ್ತಮ ಮಟ್ಟದ ಮಾರುಕಟ್ಟೆಗಳು ನಮ್ಮ ಮಂಗಳೂರಿನಲ್ಲಿ ಬೆಳಕಿಗೆ ಬರುತ್ತಿದೆ. ಉರ್ವದ ಹೊಸ ಮಾರುಕಟ್ಟೆಯೇ ಅದಕ್ಕೆ ಸಾಕ್ಷಿ. ಕಾವೂರಿನಲ್ಲಿಯು ಇತ್ತೀಚೆಗೆ ಹೊಸ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಸುರತ್ಕಲ್‌, ಅಳಕೆ ಮಾರುಕಟ್ಟೆಗಳು ನಿರ್ಮಾಣವಾಗುತ್ತಿವೆ. ಕದ್ರಿ ಮತ್ತು ಕಂಕನಾಡಿ ಮಾರುಕಟ್ಟೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಅದರೊಂದಿಗೆ ಕೃಷ್ಣಾಪುರ ಮತ್ತು ಕಾಟಿಪಳ್ಳದಲ್ಲೂ ಮಾರುಕಟ್ಟೆಗಳ ಕೆಲಸಗಳು ನಡೆಯುತ್ತಿವೆ.

ಅಂತೆಯೇ ಉರ್ವಸ್ಟೋರ್‌ ಮಾರುಕಟ್ಟೆಯ ಬಗ್ಗೆಯೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ. ಸರಿಯದ ವ್ಯವಸ್ಥೆಗಳಿಲ್ಲದ ಬಹು ಪುರಾತನ ಮಾರುಕಟ್ಟೆ ಇಲ್ಲಿದೆ. ಸುತ್ತುಮುತ್ತು ತುಂಬಾ ಕೊಳಕು ತುಂಬಿದೆ. ಕ್ರಮಬದ್ಧವಾದ ಅಂಗಡಿಗಳಿಲ್ಲ, ಸರಿಯಾದ ಶೌಚಾಲಯವೂ ಇಲ್ಲ.

ಉರ್ವಸ್ಟೋರ್‌ನ ಸುತ್ತ ಮುತ್ತ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ, ಪೊಲೀಸ್‌ ಸ್ಟೇಶನ್‌, ಇನ್ಫೋಸಿಸ್‌, ತುಳು ಭವನ, ಜಿಲ್ಲಾ ಪಂಚಾಯತ್‌, ಸರಕಾರಿ ಅಧಿಕಾರಿಗಳ/ ನೌಕರರ ವಸತಿ ಗೃಹಗಳು, ಸಾಲು ಸಾಲಾಗಿ ಅಂಗಡಿ/ ಮಳಿಗೆಗಳು, ಬಹುಮಹಡಿ ಕಟ್ಟಡಗಳಿವೆ. ಅಲ್ಲದೇ ನಮ್ಮ ನಗರದಲ್ಲಿಯೇ ಅತೀ ಹೆಚ್ಚು ಮನೆಗಳಿರುವ ಕೋಡಿಕಲ್‌ ಪ್ರದೇಶ ಸನಿಹದಲ್ಲೇ ಇದ್ದು, ಇಲ್ಲಿನ ಬಹುತೇಕ ಜನರು ಉರ್ವಸ್ಟೋರ್‌ ಮಾರುಕಟ್ಟೆಯನ್ನೇ ಅವಲಂಭಿಸಿದ್ದಾರೆ. ಆದರೆ ಈ ಮಾರುಕಟ್ಟೆ ಅವ್ಯವಸ್ಥೆಯಿಂದಿರುವುದರಿಂದ ಬಹಳ ಮಂದಿ ದೂರದ ಉರ್ವ ಅಥವಾ ಮಂಗಳೂರು ಮಾರುಕಟ್ಟೆಗೋ ತೆರಳುತ್ತಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಅತೀ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಪ್ರದೇಶಗಳಲ್ಲಿ ಉರ್ವಸ್ಟೋರ್‌ ಕೂಡ ಒಂದು. ಹೀಗಾಗಿ ಇಲ್ಲಿಗೆ ಅತ್ಯಂತ ಸುಸಜ್ಜಿತ ಮಾರು ಕಟ್ಟೆಯ ಅಗತ್ಯ ಹೆಚ್ಚಾಗಿದೆ.

ವಿಶ್ವನಾಥ್‌ ಕೋಟೆಕಾರ್‌, 
ಕೋಡಿಕಲ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.