ಸರಿಯಾಗಿದೆಯೇ ಥೈರಾಯ್ಡ್?


Team Udayavani, Jul 10, 2018, 3:37 PM IST

10-july-17.jpg

ಗಂಟಲಿನ ನಡುವೆ ಇರುವ ಥೈರಾಯ್ಡ ಎಂಬ ಸಣ್ಣ ಗ್ರಂಥಿಯು ನಮ್ಮ ದೇಹದಲ್ಲಿ ಅಪಾರ ಕೆಲಸ ಮಾಡುತ್ತದೆ. ಇದು ಟಿ3, ಟಿ4 ಮತ್ತು ಕ್ಯಾಲ್ಸಿಟೋನಿನ್‌ ಎಂಬ ಮೂರು ಹಾರ್ಮೋನ್‌ಗಳನ್ನು ಸ್ರವಿಸುತ್ತದೆ.

ಇದರ ಪ್ರಯೋಜನ
· ದೈಹಿಕ, ಮಾನಸಿಕ ಸ್ಥಿತಿಯನ್ನು ನಿಯಂತ್ರಿಸುವುದು. 
· ಆಹಾರದ ಜೀರ್ಣಕ್ರಿಯೆಗೆ ಸಹಾಯ ಮಾಡುವುದು.
· ಆಹಾರದಿಂದ ದೇಹಕ್ಕೆ ಶಕ್ತಿ ಸಿಗುವಂತೆ ಮಾಡುವುದು.
· ಮಾಂಸಖಂಡಗಳಿಗೆ ಶಕ್ತಿ ಕೊಡುವುದು.
· ದೇಹದ ಉಷ್ಣತೆಯ ಸಮತೋಲನ ಕಾಪಾಡುವುದು.
· ನರಮಂಡಲದ ಬೆಳೆವಣಿಗೆಗೆ ಸಹಾಯ.
· ಮಕ್ಕಳ ಸಹಜ ಬೆಳವಣಿಗೆಗೆ ಪೂರಕ ಕಾರ್ಯ.

ಮೆದುಳಿನಲ್ಲಿ ಹೈಪೋ ಥಲಾಮಸ್‌ ಎಂಬ ಗ್ರಂಥಿಯಿಂದ ಟಿಆರ್‌ಎಚ್‌ ಎಂಬ ಹಾರ್ಮೋನ್‌ ಉತ್ಪತ್ತಿಯಾಗುತ್ತದೆ. ಇದು ಪಿಟ್ಯೂಟರಿ ಗ್ರಂಥಿಯನ್ನು ಟಿಎಸ್‌ಎಚ್‌ ಹಾರ್ಮೋನ್‌ ಸ್ರವಿಸಲು ಸಹಾಯ ಮಾಡುತ್ತದೆ. ಈ ಟಿಎಸ್‌ಎಚ್‌ ಹಾರ್ಮೋನ್‌ ಥೈರಾಯ್ಡ ಗ್ರಂಥಿಯ ಮೇಲೆ ಪರಿಣಾಮ ಬೀರಿ ಟಿ3, ಟಿ4 ಉತ್ಪತ್ತಿಯಾಗಲು ಕಾರಣವಾಗುತ್ತದೆ. ನಮ್ಮ ದೇಹದಲ್ಲಿ ಆಹಾರದ ಮೂಲಕ ಸಿಗುವ ಅಯೋಡಿನ್‌ ಥೈರಾಯ್ಡ ಕೋಶಗಳು ಹೀರಿಕೊಂಡು ಟೈ ಅಯೋಡೊ ಥೈರೋನಿನ್‌- ಟಿ3, ಥೈರೋಕ್ಟಿನ್‌- ಟಿ4 ಆಗಿ ರೂಪುಗೊಳ್ಳುತ್ತವೆ.

ಥೈರಾಯ್ಡ ಸಮಸ್ಯೆ ಅನುವಂಶಿಯವಾಗಿಯೇ ಬರಬೇಕು ಎಂದೇನಿಲ್ಲ. ಆದರೆ ಬರುವ ಸಾಧ್ಯತೆಗಳು ಹೆಚ್ಚು. ಥೈರಾಯ್ಡನಲ್ಲಿ ಬದಲಾವಣೆಯನ್ನು ತಿಳಿಯಲು ರಕ್ತ ಪರೀಕ್ಷೆಯ ಮೂಲಕ ಟಿ3, ಟಿ4 ಮತ್ತು ಟಿಎಸ್‌ಎಚ್‌ ಲೆವೆಲ್‌ ಟೆಸ್ಟ್‌ ಮಾಡಲಾಗುತ್ತದೆ.

ಹೈಪೋ ಥೈರಾಯ್ಡಿಸಂ
ದೇಹದಲ್ಲಿ ಟಿ3, ಟಿ4 ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾದರೆ ಹೈಪೋ ಥೈರಾಯ್ಡಿಸಂ ಉಂಟಾಗುತ್ತದೆ. ಇದರಿಂದ ತೂಕ ಹೆಚ್ಚುವುದು, ಧ್ವನಿ ಬದಲಾವಣೆ, ಹಳದಿ ಅಥವಾ ಒಣ ದಪ್ಪ ಚರ್ಮ, ವಿಟಮಿನ್‌ ಎ ಕೊರತೆ, ಕೇಂದ್ರೀಕರಿಸಲು ಅಸಮರ್ಥತೆ, ಕಡಿಮೆ ಸ್ಮರಣೆ, ಕೂದಲು ಬೀಳುವುದು, ಸುಲಭವಾಗಿ ದಣಿವು, ದುರ್ಬಲ, ಡಿಪ್ರಶನ್‌, ಶೀತ, ಚಳಿ, ಅಸಹನೆ.

ಹೈಪರ್‌ ಥೈರಾಯ್ಡಿಸಂ
ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಾಗುವುದನ್ನು ಹೈಪರ್‌ಥೈರಾಯ್ಡಿಸಂ ಎನ್ನುತ್ತಾರೆ. ಇದರಿಂದ ವಿಪರೀತ ಬೆವರುವುದು, ಹೆದರಿಕೆ, ತೂಕ ಇಳಿಕೆ, ಥೈರಾಯ್ಡ ಊತ, ಮಾಂಸಖಂಡಗಳು ದುರ್ಬಲವಾಗುವುದು, ನಿದ್ದೆಯ ತೊಂದರೆ, ಉಷ್ಣತೆ ಅಸಹನೆ ಉಂಟಾಗುತ್ತದೆ.

ಆಹಾರ ಹೇಗಿರಬೇಕು
ಥೈರಾಯ್ಡ ಇದ್ದವರು ಕ್ಯಾಬೇಜ್‌, ಬ್ರೊಕೂಲಿ, ಪಾಸ್ತಾ, ಬೀನ್ಸ್‌, ಬ್ರೆಡ್‌ನ‌ಂತಹ ಆಹಾರಗಳನ್ನು ತ್ಯಜಿಸುವುದು ಉತ್ತಮ. ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಆಯೋಡಿನ್‌ ಯುಕ್ತ ಆಹಾರ ಸೇವಿಸಬೇಕು. ಸಕ್ಕರೆ, ಉಪ್ಪು, ಎಣ್ಣೆ ಪದಾರ್ಥಗಳ ಸೇವನೆಯಲ್ಲಿ ಮಿತಿ ಇರಬೇಕು.ಜತಗೆ ಸರಿಯಾದ ನಿದ್ದೆ, ಆಹಾರ ಸೇವನೆ ಬಗ್ಗೆಯೂ ಎಚ್ಚರಿಕೆ ವಹಿಸಲೇಬೇಕು.

ಗರ್ಭಿಣಿಯರಲಿ ಥೈರಾಯ್ಡ್  ಸಮಸ್ಯೆ 
ಗರ್ಭಿಣಿಯರಲ್ಲಿ ಅಯೋಡಿನ್‌ ಕೊರತೆ ಇದ್ದರೆ ಮಗುವಿನ ಮೇಲೆ ಅದು ಅಡ್ಡ ಪರಿಣಾಮ ಬೀರಬಹುದು. ಶಿಶುವಿನ ಸಹಜ ಬೆಳವಣಿಗೆಗೆ ಥೈರಾಯ್ಡ ಹಾರ್ಮೋನ್‌ ಅಗತ್ಯವಿರುತ್ತದೆ. ಅದ್ದರಿಂದ ಗರ್ಭಿಣಿಯರಿಗೆ ಥೈರಾಯ್ಡ ಸಮಸ್ಯೆ ಇದ್ದರೆ ಸರಿಯಾದ ಚಿಕಿತ್ಸೆ ಅಗತ್ಯ.

 ಡಾ| ರಶ್ಮಿ ಭಟ್‌, ಮಂಗಳೂರು

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.