ಪಥ್ಯ ಆಹಾರಕ್ಕಿದೆ ಕಾಯಿಲೆ ಗುಣಪಡಿಸುವ ಶಕ್ತಿ 


Team Udayavani, Oct 30, 2018, 3:20 PM IST

30-october-10.gif

ಶಿಸ್ತು ಬದ್ಧ ಜೀವನದಲ್ಲಿ ಆರೋಗ್ಯ ಕಾಳಜಿಯೂ ಇರುತ್ತದೆ. ಆಹಾರವನ್ನು ಹಿತ, ಮಿತವಾಗಿ ಹಾಗೂ ಸಮತೋಲನದಿಂದ ಬಳಸಿದರೆ ಮಾತ್ರ ಸದೃಢ ಆರೋಗ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ವಿವಿಧ ರೀತಿಯ ಕಾಯಿಲೆಗಳು ಬಾಧಿಸಿದಾಗ ಆಹಾರ ಕ್ರಮದಲ್ಲಿ ಅನಿವಾರ್ಯತೆಯ ಮಿತಿಗಳನ್ನು ಹೇರಿಕೊಳ್ಳುವುದೂ ಅಗತ್ಯವಾಗುತ್ತದೆ. ದೇಹದ ಅಗತ್ಯಗಳಿಗನುಗುಣವಾಗಿ ಸೇವಿಸುವ ಆಹಾರದಲ್ಲಿ ಮಾಡಿಕೊಳ್ಳುವ ಮಿತಿ ಅಥವಾ ಬದಲಾವಣೆಯನ್ನು ಪಥ್ಯ ಆಹಾರ ಎನ್ನಬಹುದು. ಲೈಟ್‌ ಫುಡ್‌, ನೊ ಕ್ಯಾಲೊರಿ , ಲೋ ಕ್ಯಾಲೊರಿ, ಲೋ ಫ್ಯಾಟ್‌, ನೊ ಫ್ಯಾಟ್‌, ಫ್ಯಾಟ್‌ಫ್ರೀ , ಶುಗರ್‌ ಲೆಸ್‌, ಝೀರೊ ಕ್ಯಾಲೊರಿ ಮೊದಲಾದ ಅಂಶಗಳ ಪಥ್ಯವನ್ನು ಕಾಯಿಲೆಗಳು ಇದ್ದ ಸಂದರ್ಭದಲ್ಲಿ ಅನುಸರಿಸಬೇಕಾಗುತ್ತದೆ.

ಉದಾಹರಣೆಗೆ ಮಧುಮೇಹ ಕಾಯಿಲೆ ಇರುವವರು ಸಕ್ಕರೆಯ ಅಂಶಗಳ ವಸ್ತುಗಳ ಸೇವನೆಯ ಕುರಿತು ಜಾಗರೂಕರಾಗಬೇಕಾಗುತ್ತದೆ. ಸಿಹಿ ಅಂಶ ಹೆಚ್ಚಿರುವ ಅನ್ನದಿಂದ ಹಿಡಿದು ಇತರ ತಿಂಡಿತಿನಿಸುಗಳ ಕುರಿತೂ ಪಥ್ಯೆ ಮಾಡಬೇಕಾಗುತ್ತದೆ. ರಾಗಿ ಮೊದಲಾದ ಆಹಾರ ಸೇವನೆಗೆ ಗಮನಹರಿಸಬೇಕಾಗುತ್ತದೆ. ಇನ್ನು ಮೂಲವ್ಯಾಧಿ ಬಾಧೆಗೆ ಒಳಗಾದವರು ಖಾರ, ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ಮಧುಮೇಹಿಗಳು ಆಹಾರ ಪಥ್ಯ ಕ್ರಮವನ್ನು ಹೆಚ್ಚು ಸಮಯದವರೆಗೆ ಪಾಲಿಸಬೇಕಾದ ಅನಿವಾರ್ಯ ಇದ್ದರೆ ಮೂಲವ್ಯಾಧಿ ಬಾಧೆಗೆ ಒಳಗಾದವರು ನಿಯಂತ್ರಣಕ್ಕೆ ಬಂದ ಬಳಿಕ ಪಥ್ಯವನ್ನು ಸಡಿಲಿಸಬಹುದು.

ಜಗತ್ತಿನ ಶೇ. 25ರಷ್ಟು ಮಂದಿಯಲ್ಲಿ ಇಂದು ಬೊಜ್ಜಿನ ತೊಂದರೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಆಹಾರ ಪಥ್ಯ ಕ್ರಮವನ್ನು ಅನುಸರಿಸಿದರೆ ಇದನ್ನು ಸಾಧ್ಯವಾಗಿಸಬಹುದು ಎನ್ನುತ್ತಾರೆ ಆಹಾರ ತಜ್ಞೆ ಪ್ರಿಯಾ ತೇವ್‌.

ಸಾಮಾನ್ಯ ಜಾಗೃತಿ
·ನಮ್ಮ ಆಹಾರ ಕ್ರಮದಲ್ಲಿ ವೈವಿಧ್ಯವಿರಲಿ ಆದರೆ ಕೊಬ್ಬು ಹೆಚ್ಚಿಸುವ ವೈವಿಧ್ಯತೆ ಬೇಡ.
·ಹೆಚ್ಚು ನಾರು ಪದಾರ್ಥಗಳನ್ನು ತಿನ್ನಿ.
·ಪ್ರೋಟೀನ್‌ ಮತ್ತು ಕೊಬ್ಬು ಭರಿತ ಆಹಾರದ ಬದಲಾಗಿ ಹೆಚ್ಚು ತರಕಾರಿ, ಮೊಳಕೆ ಬರಿಸಿದ ಕಾಳುಗಳು, ಸೌತೆಕಾಯಿ, ಹಣ್ಣುಗಳನ್ನು ಸೇವಿಸಿ.
·ಮದ್ಯಪಾನ ಆಹಾರ ಕ್ರಮದಲ್ಲೂ ವ್ಯತ್ಯಾಸಕ್ಕೆ ಕಾರಣವಾಗಿ ಕಾಯಿಲೆಗಳನ್ನು ಸೃಷ್ಟಿಸುತ್ತದೆ.
·ಪ್ರಾಣಿಜನ್ಯ ಕೊಬ್ಬನ್ನು ಆಹಾರದಲ್ಲಿ ಕಡಿಮೆಗೊಳಿಸಿ.
·ಸಕ್ಕರೆ ಪೇಯಗಳನ್ನು ತ್ಯಜಿಸುವುದು ಉತ್ತಮ.
·ಚಹಾ, ಕಾಫಿ ಸೇವನೆಯಲ್ಲಿ ಮಿತಿಯಿರಲಿ. ಇದರಲ್ಲಿ ಸಕ್ಕರೆಗೆ ಪರ್ಯಾಯವಾಗಿ ಶುಗರ್‌ ಫ್ರೀ ವಸ್ತುಗಳನ್ನು ಬಳಸಬಹುದು.

ಆಯುರ್ವೇದದಲ್ಲಿ ಏನಿದೆ?
ಪಥ್ಯದ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಕೆಲವು ಕಾಯಿಲೆಗಳನ್ನು ಶೇ. 100ರಷ್ಟು ಗುಣಪಡಿಸಬಹುದು. ಆದರೆ ಇದು ಕೆಲವೇ ದಿನಗಳಲ್ಲಿ ಆಗಿ ಬಿಡುವ ಕ್ರಮವಲ್ಲ. ನಾರು ಬೇರು ಸೇರಿಸಿದ ಗುಳಿಗೆಯನ್ನೋ, ಕಷಾಯವನ್ನೋ ನೀಡುತ್ತಿದ್ದ ನಾಟಿ ವೈದ್ಯರ ಕಾಲದ ಆಯುರ್ವೇದ ವ್ಯವಸ್ಥೆಯಲ್ಲಿ ಕಾಯಿಲೆಗಳಿಗೆ ಪಥ್ಯಾಹಾರ ಕ್ರಮವನ್ನು ಸೂಚಿಸಲಾಗುತ್ತಿತ್ತು. ಆದರೆ ನಾಟಿ ವೈದ್ಯ ಪದ್ಧತಿ ಮೂಲೆಗುಂಪಾದಂತೆ ಪಥ್ಯಾಹಾರದ ಕುರಿತ ಜಾಗೃತಿಯೂ ಕಡಿಮೆಯಾಗಿದೆ.  

 ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.