ಆರೋಗ್ಯವಂತರಾಗಿರಲು ನಿದ್ದೆ ಅವಶ್ಯ


Team Udayavani, Feb 5, 2019, 4:45 AM IST

yogakshema.jpg

ಮನುಷ್ಯನಿಗೆ ನಿದ್ದೆ ಎನ್ನುವುದು ಅಮೃತವಿದ್ದಂತೆ. ಇದು ಪ್ರತಿ ದಿನ ಆತನಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ.ಆದರೆ ಇಂದು ಕೆಲಸದ ಒತ್ತಡದಿಂದ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದಿನ ನಿತ್ಯ ಕೆಲಸದ ಮಧ್ಯೆ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟು ಹಾಯಾಗಿ ನಿದ್ದೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇಂದು ನಿದ್ದೆಗಿಂತ ಜಾಸ್ತಿ ಕೆಲಸಕ್ಕೆ ಮಹತ್ವ ಕೊಡುವ ಮಂದಿ ಅನೇಕರು. ಕೆಲಸಗಳ ಒತ್ತಡದ ನಡುವೆ ನಿದ್ರೆ ಬರುವುದಿಲ್ಲ ಎಂದು ಹೇಳುವ ವರ್ಗವೂ ಕೂಡ ಇದೆ. ಹಾಗಂತ ನಿದ್ರೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ. ನಿದ್ರಾಹೀನತೆಯಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮನುಷ್ಯ ದೀರ್ಘಾಯುಷಿಯಾಗಲು ಮತ್ತು ಆರೋಗ್ಯವಂತವಾಗಿರಲು ನಿದ್ರೆ ಕೂಡ ಅತೀ ಆವಶ್ಯಕ.

ಕನಿಷ್ಠ 8 ಗಂಟೆ ನಿದ್ದೆ
ನಿದ್ರೆಯು ಮನುಷ್ಯನ ವಯಸ್ಸನ್ನು ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ವಯಸ್ಕರಿಗಿಂತ ಹೆಚ್ಚಾಗಿ ನಿದ್ದೆಯ ಆವಶ್ಯಕತೆ ಮಕ್ಕಳಿಗೆ ಇದೆ. ನವಜಾತ ಶಿಶುಗಳು 18 ತಾಸು, ಒಂದು ವರ್ಷದ ಮಗು 14 ತಾಸು ನಿದ್ರಿಸಬೇಕು. ವಯಸ್ಕರಿಗೆ ಕನಿಷ್ಠ 8 ತಾಸುಗಳ ನಿದ್ದೆ ಅಗತ್ಯ. ಸಮರ್ಪಕವಾಗಿ ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಕಾಣಿಸಿಕೊಳ್ಳುತ್ತದೆ. ರಕ್ತನಾಳಗಳು ಶಿಥಿಲಗೊಳ್ಳುವ ಸಾಧ್ಯತೆ ಇದೆ. ಮುಖದ ಚಹರೆಯಲ್ಲಿಯೂ ಒಣಗಿದಂತೆ ಕಾಣಿಸಿಕೊಳ್ಳುತ್ತದೆ. ಮಲಗುವ ಭಂಗಿ

ಕುರಿತು ಎಚ್ಚರವಿರಲಿ
ಮಲಗುವ ಭಂಗಿ ಕೂಡ ಅನಾರೋಗ್ಯಕ್ಕೆ ಎಡೆಮಾಡಿಕೊಡಬಹುದು. ಸರಿಯಾದ ಭಂಗಿಯಲ್ಲಿ ಮಲಗದಿದ್ದರೆ ಬೆನ್ನು ನೋವು, ಕುತ್ತಿಗೆ ನೋವು, ಹೊಟ್ಟೆಯಲ್ಲಿ ಸಮಸ್ಯೆ, ಅವಧಿಗೂ ಮುನ್ನ ವೃದ್ಧಾಪ್ಯ ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮುಕ್ತಿ ಪಡೆಯಲು ಸರಿಯಾದ ಭಂಗಿಯಲ್ಲಿ ಮಲಗುವುದನ್ನು ಮೈಗೂಡಿಸಬೇಕು. ಬೆನ್ನು ಹುರಿಗೆ ಹಾಸಿಗೆ ಸರಿಯಾಗಿ ಆಧಾರ ನೀಡುವಂತೆ ಮಲಗಬೇಕು. ಹಾಸಿಗೆ ಮೇಲೆ ನೇರವಾಗಿ ಮಲಗುವುದನ್ನು ರೂಢಿ ಮಾಡಬೇಕು.

ತಲೆದಿಂಬು ಬಳಕೆ ಒಳ್ಳೆಯದಲ್ಲ
ಹೆಚ್ಚಿನ ಮಂದಿಗೆ ತಲೆದಿಂಬು ಇಲ್ಲದೆ ಮಲಗಿದರೆ ನಿದ್ದೆ ಬರುವುದಿಲ್ಲ ಎಂಬ ಸಮಸ್ಯೆ ಇರುತ್ತದೆ. ಹಾಗಂತ ಎತ್ತರದ ತಲೆದಿಂಬು ಬಳಕೆ ಒಳ್ಳೆಯದಲ್ಲ. ಏಕೆಂದರೆ ಬೆಳಗ್ಗೆ ಏಳುವಾಗ ಕುತ್ತಿಗೆ ನೋವಿಗೆ ಕಾರಣವಾಗಬಹುದು. ಆದ್ದರಿಂದ ತೆಳ್ಳಗಿನ ದಿಂಬು ಬಳಸಿ ಮಲಗುವುದು ಉತ್ತಮ. ಕೇವಲ ಒಂದು ಬದಿಗೆ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ಬಲ ಮಗ್ಗುಲಲ್ಲಿ ಮಲಗುವುದಕ್ಕಿಂತಲೂ ಎಡ ಮಗ್ಗುಲಲ್ಲಿ ಮಲಗುವುದು ಉತ್ತಮ. ಕವುಚಿ ಮಲಗುವ ಭಂಗಿ ಸರಿಯಾದ ಕ್ರಮವಲ್ಲ. ಈ ರೀತಿ ಮಲಗಿದರೆ, ಬೆನ್ನು ಹುರಿಗೆ ಸೂಕ್ತವಾದ ಆಧಾರ ದೊರಕದೆ ಒತ್ತಡ ಬೀಳುತ್ತದೆ. ಇದರಿಂದ ಬೆನ್ನು ನೋವು, ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ.

ನಿದ್ರಾಹೀನತೆಯನ್ನು ನಿರ್ಲಕ್ಷಿಸದಿರಿ
ಕೆಲವರಿಗೆ ಎಷ್ಟೇ ಹೊತ್ತು ಮಲಗಿದರೂನಿದ್ದೆ ಬರುವುದಿಲ್ಲ. ರಾತ್ರಿಯಿಡೀ ನಿದ್ದೆ ಬಾರದೆ ಒದ್ದಾಡಿ ಮುಂಜಾನೆ ಸಮಯ ಸ್ವಲ್ಪ ಹೊತ್ತು ನಿದ್ದೆಗೆ ಜಾರುವ ಮಂದಿ ಕೂಡ ಇದ್ದಾರೆ. ಈ ಸಮಸ್ಯೆಯನ್ನು ನಿರ್ಲಕ್ಷಿಸದೆ, ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಿದ್ರಾಹೀನತೆಯು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಮಾನಸಿಕ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಖನ್ನತೆ ಕಾಡಲು ಪ್ರಾರಂಭವಾಗುತ್ತದೆ.

ನಿದ್ದೆ ಬಾರದೆ ಇದ್ದರೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯ ಕ್ರಮವಲ್ಲ. ಇದರಿಂದ ಹಲವು ರೋಗಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಅದರ ಬದಲಾಗಿ ಮನೆಮದ್ದು ಮಾಡಿದರೆ ಯಾವುದೇ ದುಷ್ಪರಿಣಾಮವಿಲ್ಲ. ಸ್ವಲ್ಪ ಬೆಚ್ಚಗಿನ ಎಣ್ಣೆಯಿಂದ ತಲೆಗೆ ಮತ್ತು ಪಾದಕ್ಕೆ ಮಸಾಜ್‌ ಮಾಡಿದರೆ ಬೇಗ ನಿದ್ದೆ ಬರುತ್ತದೆ.

ಮಲಗುವ ಮುನ್ನ ಹೊಟ್ಟೆ ತುಂಬ ಊಟ ಬೇಡ
ಮಲಗುವ ಮೊದಲು ಹೊಟ್ಟೆ ತುಂಬ ತಿನ್ನುವುದು ಕೂಡ ಸರಿಯಲ್ಲ. ಮಲಗಲು ಸುಮಾರು ಒಂದು ಗಂಟೆ ಇರುವಾಗಲೇ ಊಟ ಮಾಡಿ. ಬಳಿಕ ಮಲಗಿದರೆ ಜೀರ್ಣಕ್ರಿಯೆಯೂ ಸರಿಯಾಗಿ ಆಗುತ್ತದೆ.

ಮೆದುಳಿನ ಕಾಯಿಲೆ
ಕಡಿಮೆ ಸಮಯ ನಿದ್ರಿಸುತ್ತಿದ್ದರೆ, ಮೆದುಳು ಸಂಬಂಧಿ ರೋಗ, ನರರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈ ಹಿಂದೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ಇಟೆಲಿಯ ಮಾರ್ಕೆ ಪಾಲಿಟೆಕ್ನಿಕ್‌ ವಿವಿಯ ಸಂಶೋಧಕರು ಈಗಾಗಲೇ ಸಂಶೋಧನೆಯೊಂದನ್ನು ನಡೆಸಿದ್ದು, ಎರಡು ಇಲಿಗಳ ನಡುವೆ ಪ್ರಯೋಗ ಮಾಡಿದ್ದರೆ ಅದರಲ್ಲಿ ಕಡಿಮೆ ನಿದ್ರಿಸಿದ ಇಲಿಯ ಮಿದುಳಿನ ಪ್ರಮುಖ ಸೆಲ್‌ಗ‌ಳಿಗೆ ಹಾನಿಯಾಗಿತ್ತು.

ಮಲಗುವ ಕೋಣೆ ಶುಚಿಯಾಗಿರಲಿ
ಸುಖವಾದ ನಿದ್ದೆಗೆ ಮಲಗುವ ಕೋಣೆಯ ಶುಚಿ ಕೂಡ ಮುಖ್ಯ. ಕೆಲವೊಬ್ಬರು ಹಾಸಿಗೆಯಲ್ಲಿಯೇ ಲ್ಯಾಪ್‌ಟಾಪ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಟ್ಟಿರುತ್ತಾರೆ. ಮಲಗುವ ಕೋಣೆ ಎಂದಿಗೂ ನಿಶ್ಯಬ್ಧವಾಗಿರಬೇಕು. ಮಲಗುವ ಕೋಣೆಯಲ್ಲಿ ಶಬ್ದಬಾರದ ಗಡಿಯಾರವಿರಬೇಕು.

ಮಾನಸಿಕ ಖನ್ನತೆಗೂ ಕಾರಣ
ವ್ಯಕ್ತಿ ನಿದ್ರಾಹೀನತೆಗೆ ಒಳಗಾದಾಗ ಏಕಾಗ್ರತೆ ಕಡಿಮೆಯಾಗಬಹುದು. ಜ್ಞಾಪಕ ಶಕ್ತಿಯ ಕೊರತೆ ಕೂಡ ಕಾಣಿಸಿಕೊಳ್ಳಬಹುದು. ವೈವಾಹಿಕ ಸಂಬಂಧಗಳಲ್ಲಿ ತೊಂದರೆ, ಕೆಲಸಗಳಲ್ಲಿ ನಿರಾಸಕ್ತಿಯೂ ಉಂಟಾಗಬಹುದು. ನಿದ್ರಾಹೀನತೆ ತುಂಬಾ ಸಮಯದವರೆಗೆ ಇದ್ದಾಗ ಮಾನಸಿಕ ಖನ್ನತೆಗೆ ಒಳಗಾಗುವ ಸಾಧ್ಯತೆಯೂ ಅಧಿಕ.
– ಡಾ| ರಕ್ಷಿತ್‌ ಕೆದಂಬಾಡಿ, ವೈದ್ಯರು

•••••ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.