ಮುಂಜಾನೆಯ ಅಭ್ಯಾಸ ಡಯಟ್‌ಗೆ ಪೂರಕ


Team Udayavani, Feb 5, 2019, 4:51 AM IST

yoga-kse-1.jpg

ದೇಹದ ತೂಕ ಇಳಿಸಲು ಉತ್ತಮ ಸಮಯ ಯಾವುದೆಂದು ತಜ್ಞರನ್ನು ಕೇಳಿದರೂ ಸಿಗುವ ಉತ್ತರ ಬೆಳಗ್ಗಿನ ಜಾವ. ಏಕೆಂದರೆ ಆ ಹೊತ್ತಿನಲ್ಲಿ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುತ್ತಿರುತ್ತದೆ. ಇದರಿಂದ ಆ ಸಮಯದಲ್ಲಿ ಏನೇ ತಿಂದರೂ ಬೇಗನೆ ಜೀರ್ಣಗೊಳ್ಳುತ್ತದೆ. ಇದರೊಂದಿಗೆ ದಿನಕ್ಕೆ ಬೇಕಾದ ಶಕ್ತಿಯನ್ನು ನೀಡುವ ಕ್ಯಾಲೊರಿಗಳು ಉತ್ಪತ್ತಿಯಾಗುತ್ತವೆ. ನೈಸರ್ಗಿಕವಾಗಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಲು ಬಹಳಷ್ಟು ವಿಧಾನಗಳಿವೆ. ಇವುಗಳಲ್ಲಿ ಒಂದು ಬೆಳಗ್ಗಿನ ಉಪಾಹಾರ. ಇದರೊಂದಿಗೆ ದೇಹ ತೂಕ ಇಳಿಸುವ ಗಿಡಮೂಲಿಕೆಗಳ ಅಥವಾ ಮಸಾಲೆಗಳ ಆಹಾರಗಳನ್ನು ಸೇವಿಸಿ ದೇಹದ ತೂಕವನ್ನು ಸಮತೋಲನಕ್ಕೆ ತರಬಹುದು.

ಸಮರ್ಥವಾಗಿ ದೇಹದ ತೂಕ ಇಳಿಸಿಕೊಳ್ಳಲು ಕೆಲವೊಂದು ಸಲಹೆಗಳು ಇಲ್ಲಿವೆ. ಆರೋಗ್ಯಕರ ಡಯೆಟ್ ಪಾಲಿಸಿ ದೇಹದ ತೂಕವನ್ನು ಇಳಿಸಿ.

• ಫೈಬರ್‌-ಪ್ರೊಟೀನ್‌ ಯುಕ್ತ ಉಪಾಹಾರವಿರಲಿ
ಫೈಬರ್‌ ಅಂಶ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮಧ್ಯಾಹ್ನದ ಭೋಜನದ ವರೆಗೆ ಹಸಿವಾಗದಂತೆ ತಡೆಯುತ್ತದೆ. ಈ ನಡುವೆ ಸಕ್ಕರೆ, ಜಿಡ್ಡು ಅಥವಾ ಕೊಬ್ಬಿನ ಆಹಾರಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಇದು ಹಸಿವಿನ ಹಾರ್ಮೋನ್‌ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಪ್ರೊಟೀನ್‌ ಅಂಶ ದೊರೆಯುವ ಆಹಾರದಲ್ಲಿ ಮೊಟ್ಟೆಯೂ ಒಂದು. ಹೀಗಾಗಿ ಉಪಾಹಾರದಲ್ಲಿ ಮೊಟ್ಟೆಯನ್ನು ಬಳಸಬಹುದು. ಅಲ್ಲದೇ ಉಪಾಹಾರದಲ್ಲಿ ಬಾದಾಮಿ, ಚಿಯಾ, ಅಗಸೆ ಬೀಜ ಮುಂತಾದ ಒಣಹಣ್ಣುಗಳು, ಬೀಜಗಳನ್ನು ಬಳಸಬಹುದು. ಇವುಗಳಲ್ಲಿ ಪ್ರೊಟೀನ್‌ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

••ನೀರಿನ ಬಾಟಲಿ ಎಂದಿಗೂ ತುಂಬಿರಲಿ
ಎಲ್ಲಿಗೆ ಹೋದರೂ ಸಂಗಾತಿಯಾಗಿ ನೀರಿನ ಬಾಟಲಿ ಇರುವುದು ಅಗತ್ಯ. ಕೆಲವೊಮ್ಮೆ ಮೆದುಳು ದಾಹದ ಸಂಕೇತಗಳನ್ನು ಹಸಿವಿನಿಂದ ಗೊಂದಲಗೊಳಿಸುತ್ತದೆ. ಇದಕ್ಕಾಗಿ ಏನಾದರೂ ತಿನ್ನ್ನಬೇಕು ಎಂದು ಅನಿಸುತ್ತದೆ. ಹೀಗೆ ಪದೇ ಪದೆ ಹಸಿವು ಎಂದೆನಿಸಿದಾಗ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ಆಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಬರೇ ನೀರು ಕುಡಿಯಲು ಇಷ್ಟವಾಗದಿದ್ದರೇ ತೂಕ ಇಳಿಸುವಿಕೆಗೆ ನೆರವಾಗುವ ಜೀರಿಗೆ, ಪುದೀನಾ, ಅಜೈನ್‌ ಅಥವಾ ಸೌತೆಕಾಯಿಗಳಂತಹ ತಾಜಾ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ತೂಕ ಇಳಿಸಲೇಬೇಕು ಎಂದು ಅಂದುಕೊಳ್ಳುವವರು ಸರಿಯಾದ ಡಯೆಟ್ ಪಾಲನೆ ಮಾಡುವುದು ಕೂಡ ಅಗತ್ಯ. ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸಿದರೆ ಒಂದು ಉತ್ತಮ ಆರಂಭ ಪಡೆಯಲು ಸಾಧ್ಯ. ಬೆಳಗ್ಗಿನ ಸಮಯವನ್ನು ಆರೋಗ್ಯಕರ ಡಯೆಟ್ ಪಾಲನೆಗೆ ಮುಡಿಪಾಗಿಟ್ಟರೇ ದೇಹದ ತೂಕವನ್ನು ನೈಸರ್ಗಿಕವಾಗಿ ಇಳಿಸಿಕೊಳ್ಳಬಹುದು.

ದಿನವನ್ನು ಉಗುರು ಬೆಚ್ಚನೆಯ ನೀರು ಹಾಗೂ ಜೇನಿನೊಂದಿಗೆ ಆರಂಭಿಸಿ
ಉಗುರು ಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ದಿನ ಆರಂಭವಿಸುವುದು ಭಾರತ ಹಾಗೂ ಚೀನದಲ್ಲಿ ಸರ್ವೇ ಸಾಮಾನ್ಯ. ಇದಕ್ಕೆ ಜೇನುತುಪ್ಪ ಅಥವಾ ನಿಂಬೆರಸವನ್ನು ಬೆರೆಸುವುದು ಕೂಡ ಉತ್ತಮ. ಈ ಅಭ್ಯಾಸ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಪಾನೀಯ ಚಯಾಪಚಯ ಕ್ರಿಯೆ, ಕರುಳನ್ನು ಶುದ್ಧವಾಗಿರಿಸಲು ಸಹಕಾರಿಯಾಗಿದೆ. ನಿಂಬೆ ಅತಿ ಹೆಚ್ಚು ಪ್ರಮಾಣದಲ್ಲಿ ಫೈಬರ್‌ ಅಂಶ ಹೊಂದಿರುವುದರಿಂದ ಇದಕ್ಕೆ ಜೇನುತುಪ್ಪ ಬೆರೆಸಿದರೆ ಹೊಟ್ಟೆ ತುಂಬುತ್ತದೆ. ಹಾಗೂ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಇದು ತೂಕ ಇಳಿಸುವಿಕೆಗೆ ನೆರವಾಗುತ್ತದೆ. ಇಲ್ಲಿ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ನೀರು ಹೆಚ್ಚು ಬಿಸಿಯಾಗಿರಬಾರದು. ತುಂಬಾ ಬಿಸಿ ನೀರು ದೇಹದ ಕಾರ್ಯಕ್ಕೆ ಆಘಾತ ನೀಡುತ್ತದೆ.

•••ರಿಯಾ

ಟಾಪ್ ನ್ಯೂಸ್

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.