ಕೇರಳ ಪುನರ್ ನಿರ್ಮಾಣಕ್ಕಾಗಿ ಜಿಯೋದಿಂದ 21 ಕೋಟಿ ದೇಣಿಗೆ


Team Udayavani, Sep 8, 2018, 3:36 PM IST

neetha-ambani.jpg

ಅಲಪ್ಪುಳ: ಪ್ರವಾಹ ಮತ್ತು ಮಳೆಯ ಅಬ್ಬರದಿಂದ ತತ್ತರಿಸಿ ಹೋಗಿರುವ ಕೇರಳದ ಪುನರ್ ನಿರ್ಮಾಣಕ್ಕಾಗಿ ನೀತಾ ಎಂ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರವಾಹ ಸಂತ್ರಸ್ತರಿಗೆ ರೂ. 50 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಯನ್ನೂ ವಿತರಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಹಾನಿಗೊಳಗಾದ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿರುವ ಪಳ್ಳಿಪ್ಪಾಡ್ ಗ್ರಾಮಕ್ಕೆ ಭೇಟಿ ನೀಡಿದ ಶ್ರೀಮತಿ ನೀತಾ ಅಂಬಾನಿ ಪ್ರವಾಹ ಪರಿಸ್ಥಿತಿಯ ಪರಿವೀಕ್ಷಣೆ ನಡೆಸಿದರು.  ಈ ಭೇಟಿಯಿಂದಾಗಿ ಅಲ್ಲಿನ ಜನತೆಯ ಅಗತ್ಯಗಳ ಸ್ಪಷ್ಟ ಅರಿವು ದೊರಕುವುದರೊಡನೆ ದೀರ್ಘಕಾಲೀನ ಮರುವಸತಿ ಕಾರ್ಯವನ್ನು ರೂಪಿಸಲೂ ಸಹಾಯವಾಗಿದೆ. ಈ ಸಂದರ್ಭದಲ್ಲಿ ಅವರು ಕೇರಳದ ಮಾನ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಭೇಟಿ ಮಾಡಿ ಕೇರಳದ ಜನತೆಯೊಡನೆ ಐಕ್ಯಮತ್ಯವನ್ನೂ ಅಗತ್ಯ ಮೂಲಸೌಕರ್ಯರೂಪಿಸಲು ಬೇಕಾದ ನೆರವನ್ನೂ ಘೋಷಿಸಿದರು.

ನಿರಾಶ್ರಿತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ ನೀತಾ ಅಂಬಾನಿ, “ಸಂಕಟದ ಈ ಸಮಯದಲ್ಲಿ ಕೇರಳದ ಜನತೆಗೆ ಬೆಂಬಲ ನೀಡಲು ರಿಲಯನ್ಸ್ ಫೌಂಡೇಶನ್ ಬದ್ಧವಾಗಿದೆ. ನಿಮ್ಮೆಲ್ಲರ ಜೊತೆಯಲ್ಲಿ ನಾವೂ ಇದ್ದೇವೆ, ಮತ್ತು ನಾವೆಲ್ಲ ಒಟ್ಟಾಗಿ ಈ ಆಪತ್ತಿನಿಂದ ಹೊರಬರುತ್ತೇವೆ. ನಂಬಿಕೆಯಿರಲಿ, ದೇವರ ನಾಡು ಸದ್ಯದಲ್ಲೇ ತನ್ನ ವೈಭವವನ್ನು ಮರಳಿ ಪಡೆಯುತ್ತದೆ” ಎಂದು ಹೇಳಿದರು.

ರಿಲಯನ್ಸ್ ಫೌಂಡೇಶನ್ ವತಿಯಿಂದ ಮೂವತ್ತು ಮಂದಿಯ ತಂಡವೊಂದನ್ನು ಆಗಸ್ಟ್ 14ರಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ರಾಜ್ಯವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಸ್ಡಿಎಂಎ) ಸಹಯೋಗದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸಿದ ರಿಲಯನ್ಸ್ ಫೌಂಡೇಶನ್ ಇನ್ಫರ್ಮೇಶನ್ ಸರ್ವಿಸಸ್, ತನ್ನ ಶುಲ್ಕರಹಿತ ಹೆಲ್ಪ್ ಲೈನ್ ಮೂಲಕ 1600ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಸಫಲವಾಗಿತ್ತು. 

ಎರ್ನಾಕುಲಂ, ವಯನಾಡ್, ಅಲಪ್ಪುಳ, ತ್ರಿಶೂರ್, ಇಡುಕ್ಕಿ ಹಾಗೂ ಪಟ್ಟಣಂತಿಟ್ಟ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ರಿಲಯನ್ಸ್ ಫೌಂಡೇಶನ್ ಕ್ಷೇತ್ರ ಕಾರ್ಯಕೈಗೊಂಡಿತ್ತು. ಬಳಸಲು ಸಿದ್ಧ (ರೆಡಿ ಟು ಈಟ್) ಆಹಾರ ಪದಾರ್ಥಗಳು, ಗ್ಲುಕೋಸ್ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸರಕಾರ ನಡೆಸುವ 160 ಪರಿಹಾರ ಕೇಂದ್ರಗಳಿಗೆ ನೀಡಿದ ರಿಲಯನ್ಸ್ ರೀಟೇಲ್ ಸಹಯೋಗದಲ್ಲಿ ಈ ಚಟುವಟಿಕೆಯನ್ನು ನಡೆಸಲಾಯಿತು. ರೇಶನ್ ಕಿಟ್ಗಳ ಜೊತೆಯಲ್ಲಿ ಈಪ್ರದೇಶದಲ್ಲಿ ಉಡುಪು ಹಾಗೂ ಪಾತ್ರೆಗಳ ಕಿಟ್ಗಳನ್ನೂ ವಿತರಿಸಲಾಗಿದ್ದು, ಸುಮಾರು 70,000 ಜನಕ್ಕೆ ನೆರವು ನೀಡಲಾಗಿದೆ.  

ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯನ್ನೂ ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಫೌಂಡೇಶನ್ ವಯನಾಡ್ ಜಿಲ್ಲೆಯಲ್ಲಿ ಮೆಡಿಕಲ್ ಕ್ಯಾಂಪ್ ಗಳನ್ನು ಆಯೋಜಿಸಿತ್ತು. ವಯನಾಡ್ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಹಲವು ಕ್ಯಾಂಪ್ಗಳನ್ನೂ ನಡೆಸಲಾಯಿತು. ಜಿಲ್ಲಾಡಳಿತದ ಮೂಲಕ ಬಳಸಲೆಂದು ಸರಕಾರಕ್ಕೆ ಔಷಧಗಳನ್ನೂ ವಿತರಿಸಿದೆ.

ಅಲಪ್ಪುಳ ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಹಾನಿ ಅನುಭವಿಸಿದ ಗ್ರಾಮಗಳ ಪೈಕಿ ಪಳ್ಳಿಪ್ಪಾಡ್ ಕೂಡ ಒಂದು. ಜಿಲ್ಲೆಯ ಮುಖ್ಯ ಕೇಂದ್ರ ಅಲಪ್ಪುಳದಿಂದ 36ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ 6430 ಮನೆಗಳಿವೆ (ಜನಸಂಖ್ಯೆ 24640). ಸರಕಾರ, ಟ್ರಸ್ಟ್ ಗಳು ಹಾಗೂ ಎನ್ಟಿಪಿಸಿ ಈ ಗ್ರಾಮದಾದ್ಯಂತ  ಶಾಲೆಗಳು, ದೇವಸ್ಥಾನಗಳು ಹಾಗೂ ಎನ್ಟಿಪಿಸಿ ಪಂಪ್ಹೌಸ್ ಮೈದಾನದಲ್ಲಿ   ಒಟ್ಟು 17 ಕ್ಯಾಂಪ್ ಗಳನ್ನು ತೆರೆದಿವೆ. ಸರಕಾರದ ಸ್ಥಳೀಯ ಪ್ರತಿನಿಧಿಗಳೊಡನೆ ಒಟ್ಟಾಗಿ ಕೆಲಸ ಮಾಡುತ್ತಿರುವ ರಿಲಯನ್ಸ್ ಫೌಂಡೇಶನ್ ಉಡುಪುಗಳ ಕಿಟ್ ಗಳನ್ನು ನೀಡುವ ಮೂಲಕ 3,500 ಕುಟುಂಬಗಳಿಗೆ ನೆರವಾಗಿದೆ. 

ಪ್ರವಾಹದಿಂದ ಅಪಾರ ಹಾನಿಯಾಗಿರುವ ಆರು ಜಿಲ್ಲೆಗಳ ಜನರಿಗೆ ರಿಲಯನ್ಸ್ ಫೌಂಡೇಶನ್ ಹದಿನೈದು ದಿನಗಳಿಗೆ ಸಾಲುವಷ್ಟು ಒಣ ಆಹಾರದ (ಡ್ರೈ ರೇಶನ್)ಕಿಟ್, ಮೂರು ಮಂದಿಯ ಕುಟುಂಬಕ್ಕೆ ಅಗತ್ಯವಾದ ಬೆಡ್ಡಿಂಗ್ ಕಿಟ್, ಮನೆಗಳನ್ನು ಶುಚಿಗೊಳಿಸಲು ಬೇಕಾದ ಸ್ಯಾನಿಟರಿ ಕಿಟ್ ಹಾಗೂ ಅಡುಗೆ ಮನೆಯನ್ನುಮತ್ತೆ ಪ್ರಾರಂಭಿಸಲು ಅಗತ್ಯವಾದ ಪಾತ್ರೆಗಳ ಕಿಟ್ ಗಳನ್ನು ನೀಡುವ ಮೂಲಕ ನೆರವಾಗಿದೆ. ಪರಿಹಾರ ಹಂತದಿಂದ ಮುಂದಿನ ಹೆಜ್ಜೆಗಳನ್ನೂ ಯೋಜಿಸುತ್ತಿರುವರಿಲಯನ್ಸ್ ಫೌಂಡೇಶನ್, ಗ್ರಾಮಗಳಲ್ಲಿ ಶಾಲೆಗಳಂತಹ ಮಹತ್ವದ ಮೂಲ ಸೌಕರ್ಯವನ್ನು ಗುರುತಿಸುವ ಹಾಗೂ ಪುನರ್ನಿರ್ಮಿಸುವ ಕೆಲಸದಲ್ಲೂ ಸಮುದಾಯದೊಡನೆ ಕೆಲಸ ಮಾಡುತ್ತಿದೆ.

ಟಾಪ್ ನ್ಯೂಸ್

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.